Advertisement

ಬಂದಿದೆ ಹೊಸತು ಅಡಿಕೆ ಸರ….!

Share

ಪುತ್ತೂರು: ಆಭರಣದಲ್ಲಿ ಹೊಸತಾಗಿ ಆವಿಷ್ಕಾರಗೊಂಡ ಆಭರಣವೆಂದರೆ “ಅಡಿಕೆ ಸರ” . ಸ್ವಾದಿಷ್ಟವಾದ ಅಡಿಕೆಯನ್ನು ಆಭರಣವನ್ನಾಗಿ ಧರಿಸಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಸುಂದರ, ಫ್ಯಾಶನ್ ಪ್ರಿಯರಿಗಾಗಿ ಮಾಡಿದ ಸರವಾಗಿದೆ. ಶಿವನಿಗೆ ರುದ್ರಾಕ್ಷಿ ಸರ ಪ್ರಿಯವಾದರೆ, ಸನ್ಮಾನ, ಬಹುಮಾನ ಕೊಡುವಾಗ ಹಾಕಲು ಯೋಗ್ಯವಾದ ಸರ ಇದಾಗಿದೆ. ಚಿನ್ನ ಮತ್ತು ಬೆಳ್ಳಿಯಲ್ಲಿ ನೈದ ವಿನ್ಯಾಸದಲ್ಲಿದೆ. ಫ್ಲೆಕ್ಸಿಬಲ್ ಆಗಿದೆ. ಪುರುಷರಿಗೆ ದಕ್ಷಿಣ ಕನ್ನಡದ ಅಡಿಕೆಯನ್ನು ಬಳಸಿದರೆ, ಹೆಂಗಳೆಯರಿಗೆ ಸಿಂಗಾಪುರ ಅಡಿಕೆಯಲ್ಲಿ ತಯಾರು ಮಾಡಲಾಗಿದೆ. ಅಡಿಕೆ ಹಾರವನ್ನು ಪ್ರಥಮವಾಗಿ ತಯಾರಿಸಿದ ಹೆಗ್ಗಳಿಕೆ ಪುತ್ತೂರಿನ ಮುಳಿಯ ಸಂಸ್ಥೆಗೆ ಸಲ್ಲುತ್ತದೆ. ಚಿನ್ನದ ಸಿಂಗಾಪುರ ಅಡಿಕೆ ಸರದಲ್ಲಿ 27 ಪೀಸ್ ಅಡಿಕೆ ಇದ್ದು 22.690 ಗ್ರಾಂ ಚಿನ್ನ ಬಳಕೆ ಮಾಡಲಾಗಿದ್ದು ಸರದ ಅಂದಾಜು ಮೌಲ್ಯ 86,680 ರೂಪಾಯಿ . ಬೆಳ್ಳಿಯ ಸಿಂಗಾಪುರ ಅಡಿಕೆ ಸರದಲ್ಲಿ 23 ಪೀಸ್ ಅಡಿಕೆ ಬಳಸಲಾಗಿದೆ. ಬಳಸಿದ ಬೆಳ್ಳಿಯ ತೂಕ 22.210 ಗ್ರಾಂ. ಸರದ ಅಂದಾಜು ಮೌಲ್ಯ- 2,270 ರೂಪಾಯಿ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬಳಸಿ ಮಾಡಿರುವ ಬೆಳ್ಳಿಯ ಸರಕ್ಕೆ 4,330 ರೂಪಾಯಿ ವೆಚ್ಚ ತಗಲುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Team the rural mirror

Published by
Team the rural mirror

Recent Posts

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

3 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

13 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

20 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

20 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

1 day ago