ಪುತ್ತೂರು: ಆಭರಣದಲ್ಲಿ ಹೊಸತಾಗಿ ಆವಿಷ್ಕಾರಗೊಂಡ ಆಭರಣವೆಂದರೆ “ಅಡಿಕೆ ಸರ” . ಸ್ವಾದಿಷ್ಟವಾದ ಅಡಿಕೆಯನ್ನು ಆಭರಣವನ್ನಾಗಿ ಧರಿಸಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಸುಂದರ, ಫ್ಯಾಶನ್ ಪ್ರಿಯರಿಗಾಗಿ ಮಾಡಿದ ಸರವಾಗಿದೆ. ಶಿವನಿಗೆ ರುದ್ರಾಕ್ಷಿ ಸರ ಪ್ರಿಯವಾದರೆ, ಸನ್ಮಾನ, ಬಹುಮಾನ ಕೊಡುವಾಗ ಹಾಕಲು ಯೋಗ್ಯವಾದ ಸರ ಇದಾಗಿದೆ. ಚಿನ್ನ ಮತ್ತು ಬೆಳ್ಳಿಯಲ್ಲಿ ನೈದ ವಿನ್ಯಾಸದಲ್ಲಿದೆ. ಫ್ಲೆಕ್ಸಿಬಲ್ ಆಗಿದೆ. ಪುರುಷರಿಗೆ ದಕ್ಷಿಣ ಕನ್ನಡದ ಅಡಿಕೆಯನ್ನು ಬಳಸಿದರೆ, ಹೆಂಗಳೆಯರಿಗೆ ಸಿಂಗಾಪುರ ಅಡಿಕೆಯಲ್ಲಿ ತಯಾರು ಮಾಡಲಾಗಿದೆ. ಅಡಿಕೆ ಹಾರವನ್ನು ಪ್ರಥಮವಾಗಿ ತಯಾರಿಸಿದ ಹೆಗ್ಗಳಿಕೆ ಪುತ್ತೂರಿನ ಮುಳಿಯ ಸಂಸ್ಥೆಗೆ ಸಲ್ಲುತ್ತದೆ. ಚಿನ್ನದ ಸಿಂಗಾಪುರ ಅಡಿಕೆ ಸರದಲ್ಲಿ 27 ಪೀಸ್ ಅಡಿಕೆ ಇದ್ದು 22.690 ಗ್ರಾಂ ಚಿನ್ನ ಬಳಕೆ ಮಾಡಲಾಗಿದ್ದು ಸರದ ಅಂದಾಜು ಮೌಲ್ಯ 86,680 ರೂಪಾಯಿ . ಬೆಳ್ಳಿಯ ಸಿಂಗಾಪುರ ಅಡಿಕೆ ಸರದಲ್ಲಿ 23 ಪೀಸ್ ಅಡಿಕೆ ಬಳಸಲಾಗಿದೆ. ಬಳಸಿದ ಬೆಳ್ಳಿಯ ತೂಕ 22.210 ಗ್ರಾಂ. ಸರದ ಅಂದಾಜು ಮೌಲ್ಯ- 2,270 ರೂಪಾಯಿ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬಳಸಿ ಮಾಡಿರುವ ಬೆಳ್ಳಿಯ ಸರಕ್ಕೆ 4,330 ರೂಪಾಯಿ ವೆಚ್ಚ ತಗಲುತ್ತದೆ.
ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…
ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…
ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…
ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…
ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…
ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…