ಸುಡು ಬಿಸಿಲ ಬೇಗೆಯದು
ಬೇಯುತಿಹರು ಜನರು
ಬರಗಾಲದ ಭೀತಿಯದು
ಬೆನ್ನತ್ತಿದೆ ಬೆಂಬಿಡದೆ..
ಶ್ರಮಕೆ ಪ್ರತಿಫಲವ
ಬಯಸುವ ನೇಗಿಲಯೋಗಿಯ
ಅಕ್ಷಿಗಳು ಅರಸುತಲಿಹುದು
ಆಗಸದಿ ಮಳೆ ನಕ್ಷತ್ರವನು.
ಶಪಿಸುತಿಹರು ಜನ
ರಣಬಿಸಿಲ ಕಾವನು
ನಾನಾ ತೆರದಿ ಜರಿಯುತ
ಬೇಡಿಕೆಯೊಂದ ಇಟ್ಟಿಹರು ಭಗವಂತನಲ್ಲಿ
ಸಸ್ಯಶ್ಯಾಮಲೆ ನೊಂದಿಹಳು
ದಿನಪನ ತಾಪಕೆ
ಇಳೆ ಬರಡಾಗಿಹುದು
ವರುಷಧಾರೆಯ ಕಾಣದೇ….
# ನಯನ.ಜಿ.ಎಸ್.
ಕೋಟೆ ಮುಂಡುಗಾರು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…
ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ…
ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ ಎಂಬ…
ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡಿನಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ…
ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ…
ಮಂಗಳೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ…