ಬೆಳ್ತಂಗಡಿ: ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶದಲ್ಲಿ ತೊಂದರೆಗೀಡಾದ ಕುಟುಂಬದ ಮಕ್ಕಳಿಗೆ ಪೂರ್ಣ ವಿದ್ಯಾಭ್ಯಾಸಕ್ಕೆ ಆದಿಚುಂಚನಗಿರಿ ಮಠದಿಂದ ಉಚಿತ ವ್ಯವಸ್ಥೆ ನೀಡಲಿದೆ. ಬಟ್ಟೆ ಬರೆ ಏನೆ ಸಮಸ್ಯೆಇದ್ದರು ಮಂಗಳೂರು ಶಾಖಾ ಮಠಕ್ಕೆ ಮಾಹಿತಿ ನೀಡಿದರೆ ಸಂಪೂರ್ಣವಾಗಿ ಸವಲತ್ತು ಒದಗಿಸಲಿದೆ. ತತ್ಕ್ಷಣ ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರದಂತೆ ಒದಗಿಸಿದ್ದೇವೆ ನಾವು ಆಯಾಯ ಭಾಗಕ್ಕೆ ವಾಸ್ತವಕ್ಕೆ ಗೋಚರವಾದಂತೆ ಅಲ್ಲೆಲ್ಲ ಆರ್ಥಿಕ ಸಹಾಯ ಒದಗಿಸಿದ್ದೇವೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಿದರು. ಈ ಸಂದರ್ಭ ಮಾತನಾಡಿದ ಅವರು 1961ರ ಬಳಿಕ ನಾಡುಕಂಡ ಭೀಕರ ಪ್ರವಾಹ ಎದುರಾಗಿದೆ. ದುರಂತಕ್ಕೆ ಕಾರಣ ಹಲವಾರು. ಆದರೆ ಮಲೆನಾಡಲ್ಲಿ ಇರುವವರು ತಾವು ಮಾಡದೆ ಇರುವ ತಪ್ಪಿಗೆ ಹಾನಿ ಎದುರಿಸುವಂತಾಗಿದೆ ಎಂದು ಹೇಳಿದರು. ಬೆಳ್ತಂಗಡಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆಕಂಡುಬರುತ್ತಿದೆ. ಬೇರೆಯವರ ಮನೆಯಲ್ಲಿ ಆಶ್ರಯ ಪಡೆದು ಅವರ ಬದುಕನ್ನು ಕಂಡಾಗ ನೋವು, ದುಖಃವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಂತ್ವಾನ ಹಾಗು ಕೈಲಾದ ಮಟ್ಟದಲ್ಲಿ ಸಹಾಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಠದಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಭಕ್ತರ ಸ್ಥಿತಿ ನೋಡಿ ಹಾನಿ ತುಂಬಿಕೊಡುವ ಕೆಲಸ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.
ಈ ಕಾರ್ಯದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಬೆಳ್ತಂಗಡಿ ಪುತ್ತೂರು, ಸುಳ್ಯ, ವಿಟ್ಲ ಈ ಭಾಗದ ಭಕ್ತರುಕೈಜೋಡಿಸುವು ಅವಶ್ಯ. ಪ್ರತಿಜಾಗಕ್ಕೂ ಭೇಟಿ ನೀಡಿದ್ದೇವೆ. ಮುಖ್ಯವಾಗಿ ಸರಕಾರ ಮೂಲ ಸೌಕರ್ಯಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕುಎಂದುಆದಿಚುಂಚನಗಿರಿ ಸ್ವಾಮೀಜಿಗಳು ಹೇಳಿದರು. ಸರಕಾರ ತಮ್ಮ ನಿರ್ಧಾರ ಪ್ರಕಟಿಸಿದೆ. ಈಗಿರುವ ಅನಾಹುತಗಳಿಗೆ ತಲುಪಬೇಕಾದ ಸವಲತ್ತು ಸರಕಾರದಿಂದ ತಲುಪುವ ಭರವಸೆ ನಮಗಿದೆ. ರಾಜ್ಯ ಸರಕಾರ ಮನೆ ಕಟ್ಟುವ ಭರವಸೆ ನೀಡಿದೆ.
ಈ ಸಂದರ್ಭ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮಾಜಿ ಸಚಿವ ಗಂಗಾಧರಗೌಡ, ಕಾಲಭೈರವೇಶ್ವರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ರಂಜನ್ ಜಿ. ಗೌಡ, ಪಟ್ಟಣ ಪಂಚಾಯತ್ ಸದಸ್ಯ ಜಯಾನಂದ ಗೌಡ, ಮತ್ತಿತರರು ಇದ್ದರು.
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…