ಆಲಂಕಾರು : ಇಲ್ಲೊಂದು ಕಾಮಗಾರಿ ನಡೆದಿದೆ… ಆದರೆ ಕಾಮಗಾರಿ ಹೆಸರು , ಊರಿನ ಹೆಸರು ಮಾತ್ರಾ ಬೇರೆ…!
ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಲೂರು ಅಂಗನವಾಡಿ ಕೇಂದ್ರದ ಬಳಿ ಕೆಲ ಸಮಯದ ಹಿಂದೆ ಕಾಂಕ್ರೀಟ್ ರಸ್ತೆ ಯಾಗಿತ್ತು. ಈ ಕಾಮಗಾರಿಗೆ 2 ವರ್ಷ ಕಳೆಯಿತು. ಆದರೆ ಬೋರ್ಡ್ ಹಾಕಿದವರು ಮಾತ್ರಾ ಈ ಕಾಮಗಾರಿ ಪ್ರದೇಶ ಗಮನಿಸಲಿಲ್ಲ. ಊರಿನವರು ಯಾರು ಗಮನಿಸಲಿಲ್ಲ. ಇದರಲ್ಲಿ ಕಾಮಗಾರಿ ಫಲಕ ಮಾತ್ರಾ ಬದಲಾಗಿದೆ.
ಈ ಗ್ರಾಮದ ಹೆಸರು ಕೊಯಿಲ , ಆದರೆ ಫಲಕದಲ್ಲಿ ಕೋಡಿಂಬಳ ಹೆಸರು ಇದೆ…!. ಊರಿನ ಹೆಸರು ಕುದ್ಲೂರು. ಆದರೆ ಈ ಫಲಕದಲ್ಲಿ ಮಾಲೇಶ್ವರ ಅಂತ ಇದೆ…!. ಇದು ಹೇಗಾಯಿತು ಎನ್ನುವುದು ಪ್ರಶ್ನೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಗಮನಿಸಲಿಲ್ಲವೇ ? ಶಾಸಕ ಎಸ್.ಅಂಗಾರ ಗಮನಕ್ಕೂ ಇದು ಬರಲಿಲ್ಲವೇ ? ಅಧಿಕಾರಿಗಳು ನೋಡಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ. ಕಾಮಗಾರಿಗೆ ಫಲಕ ಏಕೆ ಅವಶ್ಯ ಎಂಬ ಪ್ರಶ್ನೆಗೆ, ಕಾಮಗಾರಿ ನಡೆಸಿದ ಬಗ್ಗೆ ಊರ ಜನರಿಗೆ ಸರಿಯಾದ ಮಾಹಿತಿ ಬೇಕು ಎಂಬುದಷ್ಟೇ ಉದ್ದೇಶ.
ಫಲಕ ಬದಲಾಗಿ ಅನೇಕ ಸಮಯವಾದರೂ ಯಾರೂ ಗಮನಿಸದೇ ಇರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳು , ಜನಪ್ರತಿನಿಧಿಗಳು ಸರಿಯಾದ ಫಲಕ ಅಳವಡಿಸಬೇಕು ಎಂದು ಸ್ಥಳೀಯರಾದ ಜೀಯಾ ಝೀಯಾ ಆತೂರು ಸುಳ್ಯನ್ಯೂಸ್.ಕಾಂ ಗೆ ಹೇಳುತ್ತಾರೆ.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…