ಆಲಂಕಾರು : ಇಲ್ಲೊಂದು ಕಾಮಗಾರಿ ನಡೆದಿದೆ… ಆದರೆ ಕಾಮಗಾರಿ ಹೆಸರು , ಊರಿನ ಹೆಸರು ಮಾತ್ರಾ ಬೇರೆ…!
ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಲೂರು ಅಂಗನವಾಡಿ ಕೇಂದ್ರದ ಬಳಿ ಕೆಲ ಸಮಯದ ಹಿಂದೆ ಕಾಂಕ್ರೀಟ್ ರಸ್ತೆ ಯಾಗಿತ್ತು. ಈ ಕಾಮಗಾರಿಗೆ 2 ವರ್ಷ ಕಳೆಯಿತು. ಆದರೆ ಬೋರ್ಡ್ ಹಾಕಿದವರು ಮಾತ್ರಾ ಈ ಕಾಮಗಾರಿ ಪ್ರದೇಶ ಗಮನಿಸಲಿಲ್ಲ. ಊರಿನವರು ಯಾರು ಗಮನಿಸಲಿಲ್ಲ. ಇದರಲ್ಲಿ ಕಾಮಗಾರಿ ಫಲಕ ಮಾತ್ರಾ ಬದಲಾಗಿದೆ.
ಈ ಗ್ರಾಮದ ಹೆಸರು ಕೊಯಿಲ , ಆದರೆ ಫಲಕದಲ್ಲಿ ಕೋಡಿಂಬಳ ಹೆಸರು ಇದೆ…!. ಊರಿನ ಹೆಸರು ಕುದ್ಲೂರು. ಆದರೆ ಈ ಫಲಕದಲ್ಲಿ ಮಾಲೇಶ್ವರ ಅಂತ ಇದೆ…!. ಇದು ಹೇಗಾಯಿತು ಎನ್ನುವುದು ಪ್ರಶ್ನೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಗಮನಿಸಲಿಲ್ಲವೇ ? ಶಾಸಕ ಎಸ್.ಅಂಗಾರ ಗಮನಕ್ಕೂ ಇದು ಬರಲಿಲ್ಲವೇ ? ಅಧಿಕಾರಿಗಳು ನೋಡಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ. ಕಾಮಗಾರಿಗೆ ಫಲಕ ಏಕೆ ಅವಶ್ಯ ಎಂಬ ಪ್ರಶ್ನೆಗೆ, ಕಾಮಗಾರಿ ನಡೆಸಿದ ಬಗ್ಗೆ ಊರ ಜನರಿಗೆ ಸರಿಯಾದ ಮಾಹಿತಿ ಬೇಕು ಎಂಬುದಷ್ಟೇ ಉದ್ದೇಶ.
ಫಲಕ ಬದಲಾಗಿ ಅನೇಕ ಸಮಯವಾದರೂ ಯಾರೂ ಗಮನಿಸದೇ ಇರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳು , ಜನಪ್ರತಿನಿಧಿಗಳು ಸರಿಯಾದ ಫಲಕ ಅಳವಡಿಸಬೇಕು ಎಂದು ಸ್ಥಳೀಯರಾದ ಜೀಯಾ ಝೀಯಾ ಆತೂರು ಸುಳ್ಯನ್ಯೂಸ್.ಕಾಂ ಗೆ ಹೇಳುತ್ತಾರೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…