ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ
ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ
ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ
ಅಮ್ಮಾ ನಿನ್ನ ಮಡಿಲು,ನನಗದುವೇ ತೂಗುವ ತೊಟ್ಟಿಲು
ಎಡವಿ ಬಿದ್ದಾಗ, ಕೈ ಹಿಡಿದು ನಡೆಸಿದೆ ನೀನು
ನಡೆವ ಕಾಲಿಗೆ, ಗೆಜ್ಜೆ ಕಟ್ಟಿ ಕುಣಿಸಿದೆ ನೀನು
ನನ್ನ ನಗುವಲ್ಲಿ,ನೋವನ್ನೆಲ್ಲಾ ಮರೆತೆ ನೀನು
ನಿನ್ನ ಪ್ರೀತಿಯ ಸಾರೊಟಿಗೆ ಸಾರಥಿಯಾಗಲೇ ನಾನು?
ಮುಂಜಾನೆ ರವಿ ಕಾಣೋ ಮುನ್ನ ಕಾಣೋ ದೇವಿ ನೀನು
ಚಂದಿರ ಮರೆಯಾಗೋ ತನಕ ದುಡಿಯುವ ಮಾತೆ ನೀನು
ನಮಗಾಗಿಯೇ ನಿನ್ನೆಲ್ಲ ತವಕ,ಬಯಸಿದವಳಲ್ಲ ಹೊನ್ನು ಕನಕ
ನನ್ನಲ್ಲಿಹ ಆತಂಕ ಕೊನೆಯಾಗದೆ ನಿನ್ನ ಈ ಕಾಯಕ
ಸಾವಿರ ಸಾವಿರ ಕನಸುಗಳೇ ಹುದುಗಿದ್ದರೂ
ನಾನಿನ್ನ ಬಿಡಲಾರೆನು ನನ್ನಾಣೆಗೂ
ಸುಖದ ಸುಪ್ಪತ್ತಿಗೆಯೇ ನನ್ನ ಮುಂದಿದ್ದರೂ
ಈ ಜೀವ ಮುಡಿಪಾಗಿಡುವೆ ನಿನಗೆಎಂದೆಂದಿಗೂ…….
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…