ಸುಳ್ಯ: ಮಳೆಯೆಂಬುವುದು ನೀರಿನ ಪ್ರಮುಖ ಮೂಲ. ಮಳೆಗಾಲದ ನೀರು ವ್ಯರ್ಥವಾಗದಂತೆ ಅದನ್ನು ಭೂಮಿಗೆ ಇಂಗಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಪ್ರಸ್ತುತವಾಗಿ ಅಂತರ್ಜಲದ ಮಟ್ಟವು ಕುಸಿಯುತ್ತಿದ್ದು, ಇದನ್ನು ಹೆಚ್ಚಿಸಲು ಮಳೆನೀರಿನ ಕೊಯ್ಲು ಅತ್ಯವಶ್ಯಕವಾಗಿದೆ ಎಂದು ನೆಹರು ಮೆಮೊರಿಯಲ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಡೆದ “ಮಳೆನೀರಿನ ಕೊಯ್ಲು ಇಂದಿನ ಅವಶ್ಯಕತೆʼʼ ಕಾರ್ಯಕ್ರಮದಲ್ಲಿ ಎಂ. ಬಾಲಚಂದ್ರಗೌಡರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಯಿರಾಮ್ ಅವರು ಆಗಮಿಸಿದ್ದರು. ಇವರು ಮಳೆನೀರನ್ನು ಇಂಗಿಸುವ ವಿವಿಧ ವಿಧಾನಗಳನ್ನು ತಿಳಿಸುವುದರ ಜೊತೆಗೆ ಕೆ.ವಿ.ಜಿ. ಕ್ಯಾಂಪಸ್ ನಲ್ಲಿ ಅಳವಡಿಸಲಾಗಿರುವ ಮಳೆನೀರಿನ ಘಟಕಗಳನ್ನು ವಿಡಿಯೋ ಮೂಲಕ ಮನಮುಟ್ಟುವಂತೆ ವಿವರಿಸಿದರು.
ಎನ್.ಎಸ್.ಎಸ್. ಘಟಕಾಧಿಕಾರಿಯಾದ ಶ್ರೀ ಸಂಜೀವ ಕುದ್ಪಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ಎಸ್.ಎಸ್. ಘಟಕಾಧಿಕಾರಿಯಾದ ಕು.ಪಾವನ ಬಿ. ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನುಷ ಎಂ. ವಂದಿಸಿದರು. ಪ್ರೇಕ್ಷಾ ಬಿ.ಎನ್. ನಿರೂಪಿಸಿದರು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…