ಬೆಳ್ಳಾರೆ: ಮಳೆಯೇ ಬಾ…. ಬಾ ಮಳೆಯೇ ಬಾ…. ಈ ಪ್ರಾರ್ಥನೆ ಒಂದು ಕಡೆಯಾದರೆ , ನಾಡಿನಲ್ಲಿ ಸಮೃದ್ಧ ಮಳೆಯಾಗಲಿ, ಕೃಷಿ ಉಳಿಯಲಿ, ಕುಡಿಯುವ ನೀರು ಬರಲಿ…!. ಈಗ ಎಲ್ಲೆಡೆಯೂ ಇದೇ ಪ್ರಾರ್ಥನೆ.
ಹೀಗಾಗಿ ಸಾಮಾಜಿಕ ಹಿತದೃಷ್ಠಿಯಿಂದ, ನಾಡಿನ ನೆಮ್ಮದಿಗಾಗಿ ಊರ ಭಕ್ತರು ಹಾಗು ಪೆರುವಾಜೆಯ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಜಲದುರ್ಗಾ ದೇವಿಗೆ 108 ಸೀಯಾಳ ಅಭಿಷೇಕ ನಡೆಯಿತು.ಪೂಜಾ ನೇತೃತ್ವವನ್ನು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ವಹಸಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭೋಜರಾಜ ಶೆಟ್ಟಿ, ಕರುಣಾಕರ ಗೌಡ ಪೆರುವಾಜೆಗುತ್ತು, ಸಚಿನ್ರಾಜ್ ಶೆಟ್ಟಿ, ಶಶಿಕಾಂತ್ ರಾವ್, ಕಸ್ತೂರಿನಾಥ ಶೆಟ್ಟಿ ಪೆರುವಾಜೆಗುತ್ತು, ಮೋನಪ್ಪ ಪೂಜಾರಿ, ದೇವರಾಜ್ ಆಳ್ವ, ಮಹಾಬಲ ರೈ, ವಸಂತ ಆಚಾರ್ಯ, ಸುಂದರ ಗೌಡ ಕೊಡಿಯಾಲ ಉಪಸ್ಥಿತರಿದ್ದರು.
ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…
ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…
ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…
ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…
ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…
ಮಳೆಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪರ್ಜನ್ಯ ಜಪ ನೆರವೇರಿತು.