Advertisement
ಕೃಷಿ

“ಮುಂಗಾರು ಮಳೆ” ಇನ್ನೂ 2 ದಿನ ವಿಳಂಬ

Share

ಸುಳ್ಯ: ನೈರುತ್ಯ ಮುಂಗಾರು ಶ್ರೀಲಂಕಾ ತಲಪಿದ ಬಳಿಕ ಇದೀಗ ಮತ್ತೆ ವಿಳಂಬವಾಗಿದೆ. ಮಧ್ಯ ಶ್ರೀಲಂಕಾ ತಲಪಿದ ನೈರುತ್ಯ ಮುಂಗಾರು ಇದೀಗ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ವಿಳಂಬವಾಗುತ್ತಿದೆ. ಈಗಿನ ಪ್ರಕಾರ 2 ದಿನ ವಿಳಂಬವಾಗುವ ಸಾಧ್ಯತೆ ಇದೆ. ನಿರೀಕ್ಷೆ ಪ್ರಕಾರ ಜೂ.6 ರಂದು ಕೇರಳ ಪ್ರವೇಶವಾಗಬೇಕಿದ್ದ ಮುಂಗಾರು ಇದೀಗ ವಿಳಂಬವಾಗಿದೆ. ಹವಾಮಾನ ಇಲಾಖೆ  ಪ್ರಕಾರ ಕೇರಳಕ್ಕೆ ಜೂನ್ 8 ರ ಸುಮಾರಿಗೆ ತಲುಪಬಹುದಾದ ಮುನ್ಸೂಚನೆ ನೀಡಿದೆ.

ನಿರೀಕ್ಷೆ ಪ್ರಕಾರ ಜೂ.6 ರಂದು  ನೈರುತ್ಯ ಮುಂಗಾರು ಕೇರಳ ಪ್ರವೇಶ ಮಾಡಬೇಕಾಗಿತ್ತು. 3 ದಿನಗಳ ಹಿಂದೆಯೇ ನಿರೀಕ್ಷೆ ಪ್ರಕಾರ ಶ್ರೀಲಂಕಾ ಪ್ರವೇಶ ಮಾಡಿತ್ತು. ಆದರೆ ಅರಬೀ ಸಮುದ್ರದಲ್ಲಿ  ಉಂಟಾದ ವಾಯುಭಾರ ಕುಸಿತ ಮುಂಗಾರು ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಶ್ರೀಲಂಕಾದಿಂದ 2 ದಿನಗಳಲ್ಲಿ  ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಆದರೆ ಇದೀಗ ಮತ್ತೆ ವಿಳಂಬವಾಗಿದೆ.  ಲಕ್ಷದ್ವೀಪದಲ್ಲಿ  ಸುಳಿಗಳು ಇರುವುದರಿಂದ ಮುಂಗಾರು ಮಾರುತವನ್ನು  ದುರ್ಬಲಗೊಳಿಸಿದೆ ಎಂದು ಹವಾಮಾನ ವಿಶ್ಲೇಷಣೆ ತಿಳಿಸಿದೆ. ಈ ಎಲ್ಲಾ ಕಾರಣದಿಂದ ಜೂ.8 ಸುಮಾರಿಗೆ ಕೇರಳಕ್ಕೆ ಪ್ರವೇಶವಾಗಿ ನಂತರ 2-3  ದಿನಗಳಲ್ಲಿ  ಕರಾವಳಿ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ.

ಪ್ರತೀ ವರ್ಷ ಜೂ.5 ರ ಹೊತ್ತಿಗೆ ಮುಂಗಾರು ಮಾರುತ ಕೇರಳ ಪ್ರವೇಶವಾಗುತ್ತಿತ್ತು. ಅಪರೂಪ ಎಂಬಂತೆ ಈ ಬಾರಿ ವಿಳಂಬವಾಗಿದೆ. 1972 ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ವಿಳಂಬವಾಗಿದೆ. 1972 ರಲ್ಲಿ  ಜೂ.18 ಕ್ಕೆ ಮುಂಗಾರು ಕೇರಳವನ್ನು  ಪ್ರವೇಶ ಮಾಡಿತ್ತು. ಅದಕ್ಕೂ ಮೊದಲು 1918 ಹಾಗೂ 1955 ರಲ್ಲಿ  ಜೂ.11 ರಂದು ಮುಂಗಾರು ಪ್ರವೇಶವಾಗಿತ್ತು. ಉಳಿದೆಲ್ಲಾ ವರ್ಷ ಸಾಮಾನ್ಯವಾಗಿ ಜೂ.5 ರೊಳಗಾಗಿ ಮುಂಗಾರು ಮಾರುತ ಕೇರಳ ಪ್ರವೇಶ ಮಾಡುತ್ತಿತ್ತು.

ಈ ನಡುವೆ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ರಾಜ್ಯದ ಕೆಲವು ಕಡೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಅದರ ಬೆನ್ನಿಗೇ ನೈರುತ್ಯ ಮುಂಗಾರು ಪ್ರವೇಶವಾದರೆ ರಾಜ್ಯದಲ್ಲಿ ಮಳೆಗಾಲ ಆರಂಭ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

19 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

22 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

22 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

1 day ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

1 day ago