ಸುಳ್ಯ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಎರಡನೇ ಬಾರಿ ಪ್ರಮಾನ ವಚನ ಸ್ವೀಕಾರ ಹಾಗೂ ಎರಡನೇ ಬಾರಿ ಎನ್.ಡಿ.ಎ ಸರಕಾರ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೇರುವ ಸಂಭ್ರಮವನ್ನು ಆಚರಿಸಲು ಸುಳ್ಯದಲ್ಲೂ ಕಾರ್ಯಕರ್ತರು, ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಸಾರ್ವಜನಿಕರಿಗೆ ವಿತರಿಸಲು 10 ಸಾವಿರ ಲಡ್ಡು ಸಿದ್ಧಪಡಿಸಲಾಗಿದೆ. ಮೂರು ಸಾವಿರ ಚಹಾ ವಿತರಣೆ ನಡೆಯಲಿದೆ. ಮೋದಿ ಅಭಿಮಾನಿಗಳಾದ ದಿನೇಶ್ ಎ.ಎಸ್.ನೇತೃತ್ವದ ಅಮ್ಮ ಫ್ಲವರ್ ಸ್ಟಾಲ್, ಹರಿಪ್ರಸಾದ್ ಅವರ ಕೀರ್ತನ್ ಕೆಟರರ್ಸ್, ಸತ್ಯಪ್ರಸಾದ್ ಅವರ ಜ್ಯೋತಿ ಫ್ಲವರ್ ಸ್ಟಾಲ್, ರಾಂಪ್ರಸಾದ್ ಅವರ ಪೂರ್ಣಿಮಾ ಟ್ರಾವೆಲ್ಸ್ ಜಂಟಿಯಾಗಿ ಸಂಜೆ ಲಡ್ಡು ಮತ್ತು ಚಹಾ ವಿತರಿಸುವರು. ಇದಕ್ಕಾಗಿ ಕಳೆದ ಎರಡು ದಿನಗಳಿಂದ 11 ಮಂದಿ ಸೇರಿ ಹತ್ತು ಸಾವಿರ ಲಡ್ಡು ತಯಾರಿಸಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಇವರು ಇಡೀ ನಗರದಲ್ಲಿ 15 ಸಾವಿರ ಲಡ್ಡು ಹಂಚಿದ್ದರು.
“ಮೋದಿಯವರು ಮತ್ತೆ ಪ್ರಧಾನಿಯಾಗಿ ಅಧಿಕ್ಕಾರಕ್ಕೇರುವುದು ತುಂಬಾ ಖುಷಿ ಕೊಟ್ಟಿದೆ. ಆದುದರಿಂದ ಎಲ್ಲರಿಗೂ ಸಿಹಿ ನೀಡಿ ಸಂಭ್ರಮ ಹಚ್ಚಿಕೊಳ್ಳಬೇಕು ಎಂಬ ನೆಲೆಯಲ್ಲಿ ಲಡ್ಡು ಹಂಚಲಾಗುವುದು” ಎಂದು ಜ್ಯೋತಿ ಫ್ಲವರ್ ಸ್ಟಾಲ್ ನ ಸತ್ಯಪ್ರಸಾದ್ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ.
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…
ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್ ದಾಟಿದ್ದು, ತೆಂಗಿನ…
ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು “ಇಂದೋರ್ ಘೋಷಣೆ” ಅಂಗೀಕರಿಸಿದ್ದು, ಆಹಾರ ಭದ್ರತೆ, ಡಿಜಿಟಲ್…
2026ರಲ್ಲಿ ಎಲ್ನಿನೊ ಅಧಿಕೃತವಾಗಿ ಆರಂಭಗೊಂಡಿದ್ದು, ಇದು ಅತ್ಯಂತ ಪ್ರಬಲ "ಸೂಪರ್ ಎಲ್ನಿನೊ" ಆಗುವ…
ಉತ್ತರ ಪ್ರದೇಶ ಸರ್ಕಾರವು ಭಾರತೀಯ ಸೇನೆಗೆ ದೇಶೀ ಹಸುವಿನ ಹಾಲಿನ ಉತ್ಪನ್ನಗಳನ್ನು ಪೂರೈಸಲು…
ಎಳೆಕಾಯಿ ಹಾಗೂ ಬಲಿತ ಅಡಿಕೆ ಒಡೆದು ಬೀಳುತ್ತಿರುವ ಸಮಸ್ಯೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.…