ಯೋಗದಿಂದ ಮರೆಯಾಗುತ್ತೆ ರೋಗ

July 23, 2019
1:00 PM
ಡಾ.ಆದಿತ್ಯ ಚಣಿಲ BHMS(Intern)
ಯೋಗದಿಂದ ವಿವಿಧ ರೋಗಗಳು ದೂರವಾಗುತ್ತದೆ , ಈ ಬಗ್ಗೆ ಇಲ್ಲಿದೆ ಮಾಹಿತಿ
 *ಮತ್ಯಾಸನ* 
ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ಒತ್ತು ಕೊಡುವ ಈ ಆಸನ ಥೈರೊಯ್ಡ್ ಗ್ಲಾನ್ಡ್ ಗೆ ಹೆಚ್ಚಿನ ಉಪಯೋಗ ಕೊಡುತ್ತದೆ.
ಈ ಆಸನ ಮಾಡುವುದರಿಂದಾಗಿ ಉಲ್ಲಾಸ ಹೆಚ್ಚುತ್ತದೆ ತಲೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ ಕುತ್ತಿಗೆಯ ತೊಂದರೆಗಳು ಕಡಿಮೆ ಆಗುತ್ತದೆ
 *ಧನುರಾಸನ* 
ಈ ಆಸನ ಹೆಚ್ಚಿನ ಶಕ್ತಿಯನ್ನು ಸಂತಾನೋತ್ಪತ್ತಿ ಮಾಡುವಂತಹ ಗ್ರಂಥಿಗಳಿಗೆ ಕೊಡುತ್ತದೆ. ಇದರಿಂದ PCOD ಅಂತಹ ರೋಗಗಳು ಬರುವುದನ್ನು ತಡೆಯುತ್ತದೆ
 *ಭುಜಂಗಾಸನ* 
ಇದು ಅಂಡಾಶಯದ ಚಲನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ
ಇದರಿಂದ PCOD ಅಂತಹ ರೋಗಗಳು ಬರುವುದನ್ನು ತಡೆಯುತ್ತದೆ
 *ಶಿಶುವಾಸನ* –
ಬೆನ್ನು ಮೂಳೆಗಳಿಗೆ ಇದು ಸಹಾಯ ಮಾಡುತ್ತದೆ.
ಇದರಿಂದ ಯಾವುದೇ ತರಹವಾದ ಗಂಟಿಗೆ ಸಂಬಂಧಪಟ್ಟ ಕಾಯಿಲೆಗಳಿಗಿದು ಉತ್ತಮ
 *ವೃಕ್ಷಾಸನ* 
ಇದು ಬೆನ್ನು ಮೂಳೆಗಳ ಬಲಹೆಚ್ಚಿಸುತ್ತದೆ
ಬೆನ್ನಿನ ಸಂಬಂಧಿತ ಕಾಯಿಲೆಗಳಿಗಿದು ಸೂಕ್ತ ಆಸನ
 *ಅರ್ಧ ಮತ್ಸಇಂದ್ರಿಯಾಸನ* 
ಇದು ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ
 *ಆಪನಾಸನ* 
ಇದು ಹೊಟ್ಟೆಯ ತೊಂದ್ರೆಗಳಿಗೆ ಸೂಕ್ತ ಆಸನ
ಈ ಆಸನದಿಂದ ಹೆಚ್ಚಿನ ಶಕ್ತಿ ದೊರಕುತ್ತದೆ ಹೊಟ್ಟೆಯ ಮುಸಲ್ ಗಳಿಗೆ
 *ಪದ್ಮಾಸನ* 
ಇದು ಎಲ್ಲರಿಗೂ ತಿಳಿದಿರುವ ಆಸನ ಇಂದರಿಂದ ಅತಿ ಹೆಚ್ಚಿನ ಉಪಯೋಗವಿದೆ ಏಂನೆಂದರೆ ತಲೆನೋವು (ಮೈಗರಿನ್) ಮತ್ತು ಇದು ಮನಸನ್ನು ಶಾಂತಗೊಳಿಸುತ್ತದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಟ್ಟಿನ ತೊಂದರೆಯನ್ನು ನಿವಾರಿಸುತ್ತದೆ . ಎಲ್ಲ ಗಂಟುಗಳ ತೊಂದರೆಗಳನ್ನು ನಿವಾರಿಸುತ್ತದೆ . ಜೀರ್ಣಕ್ರಿಯೆಗೆ ಸಹಕಾರಿ . ಏಕಾಗ್ರತೆ ಹೆಚ್ಚಿಸುತ್ತದೆ
 *ಶಿರ್ಸಾಸನ* 
ಇದನ್ನು ಯೋಗದ ರಾಜ ಆಸನ ಎಂದೇ ಕರೆಯುತ್ತಾರೆ ಇದು ರಕ್ತ ಮೆದುಳಿಗೆ ತಲುಪಲು ಸಹಾಯ ಮಾಡುತ್ತದೆ .
ಈ ಆಸನ ಇಡೀ ಶರೀರವನ್ನ ಕಾಪಾಡುತ್ತದೆ , .ಏಕಾಗ್ರತೆಯನ್ನು ಹೆಚ್ಚಿಸುತ್ತದೆ , ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ , ಮನಸ್ಸಿನ ಸ್ಥಿಮಿತವನ್ನು ಕಾಪಾಡುತ್ತದೆ , ನಿದ್ರಾಹೀನತೆ ತಡೆಯುತ್ತದೆ , ಮರೆವಿನ ಕಾಯಿಲೆಯನ್ನು ತಡೆಯುತ್ತದೆ , ಕೋಪ ಭಯ ಇತ್ಯಾದಿಯನ್ನು ತಡೆಯುತ್ತದೆ , ಶರೀರದ ಚೈತನ್ಯ ಹೆಚ್ಚಿಸುತ್ತದೆ, ಇದನ್ನು ದಿನಕ್ಕೆ ಕನಿಷ್ಠ 5 ನಿಮಿಷ ಮಾಡತಕ್ಕದ್ದು.
 *ಅರ್ಧ ಬೇಕಾಸನ*
ಇದು ಯಕೃತ್(ಲಿವರ್)ತೊಂದರೆಯಿದ್ದವರಿಗೆ ಹೇಳಿಮಾಡಿಸಿದ ಆಸನ
 *ಸುಖಾಸನ*
ಇದು ನಿಮ್ಮ ಮನಸ್ಸಿಗೆ ಸಂಬಂದಿಸಿದ ಕಾಯಿಲೆಗಳಿಗೆ ರಾಮಬಾಣ
 *ನೌಕಾಸನ*
ಇದು ನಿಮ್ಮ ಹೊಟ್ಟೆಯ ಅಂಗಗಳ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ , ಬೊಜ್ಜುತನ ನಿವಾರಣೆಗೆ ಸಹಕಾರಿ, ಜೀರ್ಣಕ್ರಿಯೆ ಸುಧಾರಿಸುವಲ್ಲಿ ಸಹಕಾರಿ.
ಕೊನೆಯದಾಗಿ ಯಾವುದೇ ಆಸನಗಳನ್ನು ಶುರುಮಾಡುವುದು ಎಷ್ಟೇ ಕಷ್ಟವಾದರು ಬಿಡುವುದು ಸುಲಭ,  ಆದರೆ ಅದರ ಮುಂದಿನ ಪರಿಣಾಮ ಒಂದೊಮ್ಮೆ ತೀರ ಆಗಿರಬಹುದು. ಇದರ ಜೊತೆಗೆ ಸರಿಯಾದ ಮಾಹಿತಿ ಪಡೆದೇ ಯೋಗವನ್ನು  ಮಾಡಬೇಕು. 
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪದವಿಪೂರ್ವ ಶಿಕ್ಷಣ ಮತ್ತು ನೀಟ್ ಪರೀಕ್ಷೆಯ ಒತ್ತಡ : ಪರ್ಯಾಯ ದೃಷ್ಟಿಕೋನ
May 1, 2026
10:20 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್

You cannot copy content of this page - Copyright -The Rural Mirror