ಅನುಕ್ರಮ

ಯೋಗದಿಂದ ಮರೆಯಾಗುತ್ತೆ ರೋಗ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಡಾ.ಆದಿತ್ಯ ಚಣಿಲ BHMS(Intern)
ಯೋಗದಿಂದ ವಿವಿಧ ರೋಗಗಳು ದೂರವಾಗುತ್ತದೆ , ಈ ಬಗ್ಗೆ ಇಲ್ಲಿದೆ ಮಾಹಿತಿ
*ಮತ್ಯಾಸನ*
ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ಒತ್ತು ಕೊಡುವ ಈ ಆಸನ ಥೈರೊಯ್ಡ್ ಗ್ಲಾನ್ಡ್ ಗೆ ಹೆಚ್ಚಿನ ಉಪಯೋಗ ಕೊಡುತ್ತದೆ.
ಈ ಆಸನ ಮಾಡುವುದರಿಂದಾಗಿ ಉಲ್ಲಾಸ ಹೆಚ್ಚುತ್ತದೆ ತಲೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ ಕುತ್ತಿಗೆಯ ತೊಂದರೆಗಳು ಕಡಿಮೆ ಆಗುತ್ತದೆ
*ಧನುರಾಸನ*
ಈ ಆಸನ ಹೆಚ್ಚಿನ ಶಕ್ತಿಯನ್ನು ಸಂತಾನೋತ್ಪತ್ತಿ ಮಾಡುವಂತಹ ಗ್ರಂಥಿಗಳಿಗೆ ಕೊಡುತ್ತದೆ. ಇದರಿಂದ PCOD ಅಂತಹ ರೋಗಗಳು ಬರುವುದನ್ನು ತಡೆಯುತ್ತದೆ
*ಭುಜಂಗಾಸನ*
ಇದು ಅಂಡಾಶಯದ ಚಲನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ
ಇದರಿಂದ PCOD ಅಂತಹ ರೋಗಗಳು ಬರುವುದನ್ನು ತಡೆಯುತ್ತದೆ
*ಶಿಶುವಾಸನ* –
ಬೆನ್ನು ಮೂಳೆಗಳಿಗೆ ಇದು ಸಹಾಯ ಮಾಡುತ್ತದೆ.
ಇದರಿಂದ ಯಾವುದೇ ತರಹವಾದ ಗಂಟಿಗೆ ಸಂಬಂಧಪಟ್ಟ ಕಾಯಿಲೆಗಳಿಗಿದು ಉತ್ತಮ
*ವೃಕ್ಷಾಸನ*
ಇದು ಬೆನ್ನು ಮೂಳೆಗಳ ಬಲಹೆಚ್ಚಿಸುತ್ತದೆ
ಬೆನ್ನಿನ ಸಂಬಂಧಿತ ಕಾಯಿಲೆಗಳಿಗಿದು ಸೂಕ್ತ ಆಸನ
*ಅರ್ಧ ಮತ್ಸಇಂದ್ರಿಯಾಸನ*
ಇದು ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ
*ಆಪನಾಸನ*
ಇದು ಹೊಟ್ಟೆಯ ತೊಂದ್ರೆಗಳಿಗೆ ಸೂಕ್ತ ಆಸನ
ಈ ಆಸನದಿಂದ ಹೆಚ್ಚಿನ ಶಕ್ತಿ ದೊರಕುತ್ತದೆ ಹೊಟ್ಟೆಯ ಮುಸಲ್ ಗಳಿಗೆ
*ಪದ್ಮಾಸನ*
ಇದು ಎಲ್ಲರಿಗೂ ತಿಳಿದಿರುವ ಆಸನ ಇಂದರಿಂದ ಅತಿ ಹೆಚ್ಚಿನ ಉಪಯೋಗವಿದೆ ಏಂನೆಂದರೆ ತಲೆನೋವು (ಮೈಗರಿನ್) ಮತ್ತು ಇದು ಮನಸನ್ನು ಶಾಂತಗೊಳಿಸುತ್ತದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಟ್ಟಿನ ತೊಂದರೆಯನ್ನು ನಿವಾರಿಸುತ್ತದೆ . ಎಲ್ಲ ಗಂಟುಗಳ ತೊಂದರೆಗಳನ್ನು ನಿವಾರಿಸುತ್ತದೆ . ಜೀರ್ಣಕ್ರಿಯೆಗೆ ಸಹಕಾರಿ . ಏಕಾಗ್ರತೆ ಹೆಚ್ಚಿಸುತ್ತದೆ
*ಶಿರ್ಸಾಸನ*
ಇದನ್ನು ಯೋಗದ ರಾಜ ಆಸನ ಎಂದೇ ಕರೆಯುತ್ತಾರೆ ಇದು ರಕ್ತ ಮೆದುಳಿಗೆ ತಲುಪಲು ಸಹಾಯ ಮಾಡುತ್ತದೆ .
ಈ ಆಸನ ಇಡೀ ಶರೀರವನ್ನ ಕಾಪಾಡುತ್ತದೆ , .ಏಕಾಗ್ರತೆಯನ್ನು ಹೆಚ್ಚಿಸುತ್ತದೆ , ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ , ಮನಸ್ಸಿನ ಸ್ಥಿಮಿತವನ್ನು ಕಾಪಾಡುತ್ತದೆ , ನಿದ್ರಾಹೀನತೆ ತಡೆಯುತ್ತದೆ , ಮರೆವಿನ ಕಾಯಿಲೆಯನ್ನು ತಡೆಯುತ್ತದೆ , ಕೋಪ ಭಯ ಇತ್ಯಾದಿಯನ್ನು ತಡೆಯುತ್ತದೆ , ಶರೀರದ ಚೈತನ್ಯ ಹೆಚ್ಚಿಸುತ್ತದೆ, ಇದನ್ನು ದಿನಕ್ಕೆ ಕನಿಷ್ಠ 5 ನಿಮಿಷ ಮಾಡತಕ್ಕದ್ದು.
*ಅರ್ಧ ಬೇಕಾಸನ*
ಇದು ಯಕೃತ್(ಲಿವರ್)ತೊಂದರೆಯಿದ್ದವರಿಗೆ ಹೇಳಿಮಾಡಿಸಿದ ಆಸನ
*ಸುಖಾಸನ*
ಇದು ನಿಮ್ಮ ಮನಸ್ಸಿಗೆ ಸಂಬಂದಿಸಿದ ಕಾಯಿಲೆಗಳಿಗೆ ರಾಮಬಾಣ
*ನೌಕಾಸನ*
ಇದು ನಿಮ್ಮ ಹೊಟ್ಟೆಯ ಅಂಗಗಳ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ , ಬೊಜ್ಜುತನ ನಿವಾರಣೆಗೆ ಸಹಕಾರಿ, ಜೀರ್ಣಕ್ರಿಯೆ ಸುಧಾರಿಸುವಲ್ಲಿ ಸಹಕಾರಿ.
ಕೊನೆಯದಾಗಿ ಯಾವುದೇ ಆಸನಗಳನ್ನು ಶುರುಮಾಡುವುದು ಎಷ್ಟೇ ಕಷ್ಟವಾದರು ಬಿಡುವುದು ಸುಲಭ,  ಆದರೆ ಅದರ ಮುಂದಿನ ಪರಿಣಾಮ ಒಂದೊಮ್ಮೆ ತೀರ ಆಗಿರಬಹುದು. ಇದರ ಜೊತೆಗೆ ಸರಿಯಾದ ಮಾಹಿತಿ ಪಡೆದೇ ಯೋಗವನ್ನು  ಮಾಡಬೇಕು.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ 4-5 ದಿನಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ತೀವ್ರ ತಾಪಮಾನ | ದಕ್ಷಿಣದಲ್ಲಿ ಉತ್ತಮ ಮಳೆ |

ಜೂನ್‌ 12 ರಿಂದ 15 ರವರೆಗೆ ಕರ್ನಾಟಕದಲ್ಲಿ  ಮತ್ತು ಜೂನ್ 13 ರಿಂದ…

4 hours ago

ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ

ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…

5 hours ago

11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ತಗ್ಗಿದೆ – ಸಚಿವ ಪ್ರಹ್ಲಾದ್ ಜೋಶಿ

ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…

5 hours ago

25 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ -ಸಚಿವ ನಿತಿನ್‌ ಗಡ್ಕರಿ

ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್‌ಗಿಂತ  ಹೆಚ್ಚಿನ…

5 hours ago

ಧನ, ಧಾನ್ಯ, ಸಂಪತ್ತಿಗಾಗಿ ಇಂತಹ ಕೆಲಸಗಳನ್ನು ಮಾಡಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಪ್ರೋಟಾನ್ ಥೆರಪಿ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ | ಕಿದ್ವಾಯಿ ಆಸ್ಪತ್ರೆಯಲ್ಲಿ ಸೌಲಭ್ಯ ಜಾರಿಗೆ ಪ್ರಸ್ತಾವನೆ

ಅತ್ಯಾಧುನಿಕವಾದ ಪ್ರೋಟಾನ್ ರೇಡಿಯೋ ಥೆರಪಿ ಮೂಲಕ ಕ್ಯಾನ್ಸರ್ ಶುಶ್ರೂಷೆಗೆ ಅಗತ್ಯ ಆರ್ಥಿಕ ನೆರವು…

15 hours ago