ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಉಂಟಾದ ಈ ಬಾರಿಯ ಚಂಡಮಾರುತ ನಿಸರ್ಗ ಮಹಾರಾಷ್ಟ್ರದ ಮುಂಬೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಅಪಾಯದಿಂದ ಪಾರಾಗಿದೆ. ಆದರೆ ಈ ಚಂಡಮಾರುತ ಇನ್ನೊಂದು ಶುಭ ಸುದ್ದಿಯನ್ನೂ ನೀಡಿದೆ. ಇದು ಪರಿಶುದ್ಧವಾದ ಗಾಳಿ. ಇದಕ್ಕೆ ಕಾರಣ ಲಾಕ್ಡೌನ್. ಅಂದರೆ ಪರಿಸರ ಮಾಲಿನ್ಯದಿಂದ ಬಹುಪಾಲು ಮುಕ್ತಿ.
ಪರಿಸರ ಮಾಲಿನ್ಯ ಅಥವಾ ಗಾಳಿಯ ಶುದ್ಧತೆಯನ್ನು ಆಗಾಗ ಪರಿಶೀಲನೆ ಮಾಡಲಾಗುತ್ತದೆ. ಆದರೆ ಪ್ರತೀ ಬಾರಿ ಚಂಡಮಾರುತ ಹಾಗೂ ಭಾರೀ ಗಾಳಿ ಬಂದಾಗ ವಾಯು ಶುದ್ಧತೆಯನ್ನು ಅಥವಾ ವಾಯು ಗುಣಮಟ್ಟದ ಸೂಚ್ಯಂಕ (AQI) ಪರಿಶೀಲನೆ ಮಾಡಲಾಗುತ್ತದೆ. ಈ ಬಾರಿಯ ನಿಸರ್ಗ ಚಂಡಮಾರುತದ ಬಳಿಕ ಪರಿಶೀಲನೆ ಮಾಡಿದಾಗ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 22 ಕ್ಕೆ ದಾಖಲಾಗಿದ್ದು ಇದು ಇತ್ತೀಚೆಗಿನ ವರದಿಯ ಪ್ರಕಾರ ಗಾಳಿಯ ಶುದ್ಧತೆ ಉತ್ತಮ ಗುಣಮಟ್ಟದ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಇದು ಈ ವರ್ಷದ ಅತ್ಯಂತ ಉತ್ತಮ ದಾಖಲಾತಿ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಹೇಳಿದೆ.
ಸ್ವಚ್ಛವಾದ ಗಾಳಿಯು ಈಗ ಸಿಗುವಂತಾಗಿದೆ. ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು ಇದರ ಸಂಕೇತವಾಗಿದೆ. ವಾಯುಸಾಂದ್ರತೆ ಈ ಹಿಂದೆ 60 ಮೈಕ್ರೊಗ್ರಾಂಗಳಷ್ಟುಇದ್ದರೆ ಈಗ ತೀರಾ ಇಳಿಕೆಯಾಗಿದ್ದು 22 ಮೈಕ್ರೊಗ್ರಾಂಗಳಷ್ಟು ದಾಖಲಾಗಿದೆ.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ…
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…
ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…
ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…