Advertisement
The Rural Mirror ಫಾಲೋಅಪ್

ವಿದ್ಯುತ್ ಬಳಕೆದಾರರ ಪ್ರಯತ್ನ : ಸ್ಪಂದಿಸಿದ ಅರಣ್ಯ ಇಲಾಖೆ : ಬಳಕೆದಾರರಿಂದ ಶುರುವಾಗಿದೆ ಹಂತ ಹಂತದ ಹೋರಾಟ

Share

ಬೆಳ್ಳಾರೆ: ಕಳೆದ ಅನೇಕ ವರ್ಷಗಳಿಂದ ಮಾಡಾವು ಸಬ್ ಸ್ಟೇಶನ್ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಸ್ಟೇಶನ್ ಕಾಮಗಾರಿ ನಡೆದರೂ ವಿದ್ಯುತ್  ಲೈನ್ ಸಮಸ್ಯೆ ಇತ್ತು. ಇದಕ್ಕೆ ಪ್ರಮುಖವಾಗಿ ವಿವಿದೆಡೆ ಅರಣ್ಯ ಇಲಾಖೆ ಅಡ್ಡಿ ಹಾಗೂ ಇತರ ಸಮಸ್ಯೆಗಳು ಇದ್ದವು. ಇದೀಗ ವಿದ್ಯುತ್ ಬಳಕೆದಾರರು ಅರಣ್ಯ ಇಲಾಖೆಯನ್ನು  ಸಂಪರ್ಕಿಸಿ  ವಿದ್ಯುತ್ ಲೈನ್ ಗೆ ಅಡ್ಡಿ ಮಾಡದಂತೆ ವಿನಂತಿ ಮಾಡಿದ ಮೇರೆಗೆ ತಕ್ಷಣವೇ ಇಲಾಖೆಯು ಸ್ಪಂದಿಸಿ ಸಾರ್ವಜನಿಕ ಹಿತಾಸಕ್ತಿ ಬೇಡಿಕೆ ಆಧಾರದಲ್ಲಿ ತಕ್ಷಣವೇ ಮಹಜರು ನಡೆಸಿದರು ಮತ್ತು ಯಾವುದೇ ಆಕ್ಷೇಪವಿಲ್ಲ ಎಂದು ಸರ್ವಾನುಮತದಿಂದ ನಿರ್ಣಯಿಸಿದರು.

ಇದೀಗ ವಿದ್ಯುತ್ ಬಳಕೆದಾರರು ಸಮಸ್ಯೆಯನ್ನು  ಬಗೆಹರಿಸಿ ಅತಿ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆ ನಿವಾರಣೆಗೆ ಪ್ರಯತ್ನ ಮುಂದುವರಿಸಿದ್ದಾರೆ. ಇದಕ್ಕಾಗಿಯೇ  ಪುತ್ತೂರು ತಾಲೂಕು ಮಾಡಾವು ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ  ವಿವಿಧ ಸಂಘಟನೆಗಳನ್ನೊಳಗೊಂಡ  ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಬೆಳ್ಳಾರೆಯಲ್ಲಿ ರಚನೆಯಾಗಿ ಕೆಲಸ ನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲೇ ಸಬ್ ಸ್ಟೇಶನ್ ಚಾಲೂ ಆಗಲು ಪ್ರಯತ್ನ ನಡೆಸುತ್ತಿದೆ. ಪ್ರಮುಖವಾಗಿ ಜಯಪ್ರಸಾದ್ ಜೋಶಿ ಬೆಳ್ಳಾರೆ, ಸುರೇಶ್ಚಂದ್ರ ಕಲ್ಮಡ್ಕ , ರಮೇಶ್ ಕೋಟ್, ರಾಮಚಂದ್ರ ದೇವಸ್ಯ , ಭಾರತೀಯ ಕಿಸಾನ್ ಸಂಘದ ಪ್ರಮುಖರು ಸಕ್ರಿಯವಾಗಿ ಕೆಲಸ ಆರಂಭಿಸಿದ್ದಾರೆ.

ಸಬ್ ಸ್ಟೇಶನ್ ಗೆ ಬರುವ ವಿದ್ಯುತ್ ಲೈನ್ ನ ಕೆಲವು ಕಡೆ ಖಾಸಗಿ ವ್ಯಕ್ತಿಗಳು  ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕೆಲವು ಆಕ್ಷೇಪಣೆದಾರರನ್ನು ಮನವೊಲಿಸಿ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಅವರಲ್ಲಿ ಸಂವಾದ ನಡೆಸುವಂತೆ ಸಲಹೆ  ಮಾಡಲಾಗಿದ್ದು ಅದಕ್ಕೂ ಸ್ಪಂದನೆ ದೊರೆತಿದೆ.  ಆಕ್ಷೇಪಣೆದಾರರನ್ನು  ಸಂಪರ್ಕಿಸಿ ಅವರ ಸಮಸ್ಯೆಯನ್ನು ನೇರ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಕಾನೂನು ಬದ್ಧ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವ ಸಲಹೆ ನೀಡಲಾಗಿದೆ.  ಗುತ್ತಿಗೆದಾರರು ನಿಧಾನಗತಿ ಅನುಸರಿಸುತ್ತಿರುವುದನ್ನು ಹಾಗೂ ಪ್ರಗತಿ ಇಲ್ಲದಿರುವುದನ್ನು ಮನಗಂಡು ಅಧಿಕಾರಿಗಳ ಸಮಕ್ಷಮದಲ್ಲಿಯೇ ಅವರನ್ನು ವಿಚಾರಿಸಿ ಸೂಕ್ತ ಎಚ್ಚರಿಕೆ ನೀಡಿ ಸ್ಪಂದಿಸದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಲು ಬಳಕೆದಾರರು ಒತ್ತಾಯಿಸಿದ್ದಾರೆ.

ಕಾಮಗಾರಿ ವೇಗ ಪಡೆಯದೇ ಇದ್ದರೆ  ಮುಂದಿನ ಹಂತದಲ್ಲಿ ಇನ್ನೊಂದು ಸುತ್ತಿನ ಮನವಿ, ಹಕ್ಕೊತ್ತಾಯ, ಕಾರ್ಡ್ ಚಳವಳಿ ಇತ್ಯಾದಿಗಳನ್ನು ನಡೆಸಲಾಗುವುದು. ಜನ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಲ್ಲಿದ್ದು ಅವರದೂ ಈ ನಿಟ್ಟಿನಲ್ಲಿ ಪೂರಕ ಭರವಸೆಯ  ನಿರೀಕ್ಷೆ   ಇದೆ. ಈ ರೀತಿಯಾಗಿ ಹಂತ ಹಂತವಾಗಿ ಹಕ್ಕೊತ್ತಾಯಗಳನ್ನು ವಿದ್ಯುತ್ ವಿತರಣಾ  ಕೇಂದ್ರದ ಕಾರ್ಯಾರಂಭದವರೆಗೆ ಬಳಕೆದಾರರ ವೇದಿಕೆ ನಿರಂತರ ಪ್ರಯತ್ನ  ನಡೆಸಲಿದೆ. ಆದರೆ   ಎಲ್ಲರ ಸಹಕಾರದಿಂದ ಮತ್ತಷ್ಟು ವೇಗ ಪಡೆಯಲು ಸಾಧ್ಯವಿದೆ. ಹೀಗಾಗಿ  ಪ್ರಸ್ಥಾವಿತ 110 ಕೆ.ವಿ ಸ್ಟೇಷನ್‍ನಿಂದ ವಿದ್ಯುತ್ ಪಡೆಯುವ ಎಲ್ಲಾ ಬಳಕೆದಾರರು, ವ್ಯಾಪ್ತಿಯ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತ್‍ಗಳು ಎಲ್ಲಾ ಸ್ತರದ ನಾಗರಿಕರು ಪಕ್ಷ ಬೇಧ ಮರೆತು ಕೈಜೋಡಿಸಬೇಕು ಎಂದು ಸುಳ್ಯನ್ಯೂಸ್.ಕಾಂ   ಜೊತೆ ಮಾತನಾಡಿದ  ಬಳಕೆದಾರರ ವೇದಿಕೆ ಸಂಚಾಲಕ  ಜಯಪ್ರಸಾದ್ ಜೋಶಿ   ಮನವಿ ಮಾಡಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

3 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

3 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago