ಸುಳ್ಯ: ರಾಜ್ಯ ಸರಕಾರವು 16 ಅಕಾಡೆಮಿಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಿ ತಕ್ಷಣದಿಂದಲೇ ಜಾರಿ ಬರುವಂತೆ ಸರಕಾರ ಆದೇಶ ಮಾಡಿದೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಟಿ.ಎಸ್. ನಾಗಾಭರಣ- ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಬ್ಯಾರಿ ಅಕಾಡೆಮಿಗೆ- ರಹೀಂ ಉಚ್ಚಿಲ, ಡಾ.ಬಿ.ವಿ ವಸಂತ್ ಕುಮಾರ್- ಕನ್ನಡ ಸಾಹಿತ್ಯ ಅಕಾಡೆಮಿ, ಡಾ. ಎಂ.ಎನ್. ನಂದೀಶ್ ಹಂಜೆ- ಕನ್ನಡ ಪುಸ್ತಕ ಪ್ರಾಧಿಕಾರ, ಅಜರ್ಕಳ ಗಿರೀಶ್ ಭಟ್- ಕುವೆಂಪು ಭಾಷಾ ಭಾರತಿ , ಭೀಮಾಸೇನ- ಕರ್ನಾಟಕ ನಾಟಕ ಅಕಾಡೆಮಿ , ಅನೂರು ಅನಂತಕೃಷ್ಣ ಶರ್ಮ- ಸಂಗೀತ, ನೃತ್ಯ ಅಕಾಡೆಮಿ , ವೀರಣ್ಣ ಅರ್ಕಸಾಲಿ – ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಡಿ. ಮಹೇಂದ್ರ – ಕರ್ನಾಟಕ ಲಲಿತಾ ಕಲಾ ಅಕಾಡೆಮಿ , ಮಂಜಮ್ಮ ಜೋಗತಿ – ಕರ್ನಾಟಕ ಜಾನಪದ ಅಕಾಡೆಮಿ, ದಯಾನಂದ ಕತ್ತಲಸರ – ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ , ಪ್ರೊ. ಎಂ.ಎ ಹೆಗ್ಡೆ –ಕರ್ನಾಟಕ ಯಕ್ಷಗಾನ ಅಕಾಡೆಮಿ , ಡಾ. ಪಾರ್ವತಿ ಅಪ್ಪಯ್ಯ- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಡಾ. ಜಗದೀಶ್ ಪೈ – ಕೊಂಕಣಿ ಸಾಹಿತ್ಯ ಅಕಾಡೆಮಿ ಗೆ ಆಯ್ಕೆಯಾಗಿದ್ದಾರೆ.
ಅರೆಭಾಷೆ ಅಕಾಡೆಮಿ ಸದಸ್ಯರಾಗಿ ಸ್ಮಿತಾ ಅಮೃತರಾಜ್ , ಜಾನಕಿ ಬೈತಡ್ಕ, ಪ್ರೇಮಾ ರಾಘವಯ್ಯ,ಎ ಪಿ ಧನಂಜಯ, ಆನಂದ ದಂಬೆಕೋಡಿ, ಸೋಮಣ್ಣ ಆರ್ ಸೂರ್ತಲೆ ಆಯ್ಕೆಯಾಗಿದ್ದಾರೆ.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…
ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"