Advertisement
ರಾಷ್ಟ್ರೀಯ

ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ಸೋಲು

Share

ಬರ್ವಿುಂಗ್​ಹ್ಯಾಂ: ಇಲ್ಲಿನ ಎಜ್​ಬಾಸ್ಟನ್​ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ದ ಭಾರತಕ್ಕೆ 31ರನ್ ಗಳ ಸೋಲು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 337 ರನ್​ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 306 ರನ್​ ಕಲೆ ಹಾಕುವ ಮೂಲಕ 31 ರನ್​ ಅಂತರದಲ್ಲಿ ಆಂಗ್ಲ ಪಡೆಗೆ ಶರಣಾಯಿತು.

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್​. ರಾಹುಲ್​ ಶೂನ್ಯ ಸಾಧನೆ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್​ ಶರ್ಮಾ ಜತೆಗೂಡಿದ ನಾಯಕ ವಿರಾಟ್​ ಕೊಹ್ಲಿ 146 ರನ್​ ಜತೆಯಾಟ ನೀಡಿದರು. ಆದರೆ ಈ ವೇಳೆ 66 ರನ್​ ಗಳಿಸಿದ್ದ ಕೊಹ್ಲಿ ಫ್ಲಂಕೆಟ್​ ಓವರ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಸ್ವಲ್ಪದರಲ್ಲೇ 102 ರನ್​ ಗಳಿಸಿದ್ದ ರೋಹಿತ್​ ಶರ್ಮಾ, ಕ್ರಿಸ್​ ವೋಕ್ಸ್​ ಓವರ್​ನಲ್ಲಿ ಕ್ಯಾಚಿತ್ತರು.

ಬಳಿಕ ರಿಷಭ ಪಂತ್ ​(32) ಹಾಗೂ ಹಾರ್ದಿಕ್​ ಪಾಂಡ್ಯ (45) ವೇಗವಾಗಿ ರನ್​ ಗಳಿಸಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರೂ ವಿಕೆಟ್​ ನೀಡಿದ್ದು ಭಾರತದ ಸೋಲಿಗೆ ಕಾರಣವಾಯಿತು. ಉಳಿದಂತೆ ಎಂ.ಎಸ್​. ಧೋನಿ (42*) ಹಾಗೂ ಕೇದರ್​ ಜಾಧವ್​ (12*) ರನ್​ ಗಳಿಸಿದರು. ಧೋನಿ ಮತ್ತು ಜಾಧವ್ ಗೆ ಕೊನೆಯ ಓವರ್ ಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸಲು ಸಾಧ್ಯವಾಗದೆ ಇದ್ದುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಇಂಗ್ಲೆಂಡ್​ ಪರ ಲಿಯಾಮ್​ ಫ್ಲಂಕೆಟ್ ಪ್ರಮುಖ​ ಮೂರು ವಿಕೆಟ್​ ಕಬಳಿಸಿ ಮಿಂಚಿದರೆ, ಕ್ರಿಸ್​ ವೋಕ್ಸ್​ ಎರಡು ವಿಕೆಟ್​ ಪಡೆಯುವ ಮೂಲಕ ಆಂಗ್ಲ ಪಡೆಗೆ ಗೆಲುವನ್ನು ತಂದುಕೊಟ್ಟರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ಆಂಗ್ಲ ಪಡೆ ಪರ ಆರಂಭಿಕರಾದ ಜಾಸನ್​ ರಾಯ್​ ಮತ್ತು ಜಾನಿ ಬೇರ್​ಸ್ಟೋ 22.1 ಓವರ್​ಗಳಲ್ಲಿ 160 ರನ್​ಗಳ ಉತ್ತಮ ಜೊತೆಯಾಟವಾಡಿ ಇಂಗ್ಲೆಂಡ್​ ತಂಡ ಬೃಹತ್​ ಮೊತ್ತ ಕಲೆ ಹಾಕಲು ಕಾರಣರಾದರು. 66 ರನ್​ ಗಳಿಸಿದ್ದ ಜಾಸನ್​ ರಾಯ್​ ಕುಲದೀಪ್​ಗೆ ಬಲಿಯಾದರು. ಇದರ ಬೆನ್ನಲ್ಲೇ 111 ರನ್​ ಗಳಿಸಿ ಆಡುತ್ತಿದ್ದ ಬೇರ್​ಸ್ಟೋ ಶಮಿ ಓವರ್​ನಲ್ಲಿ ಕ್ಯಾಚಿತ್ತರು. ಪ್ರಮುಖ ಎರಡು ವಿಕೆಟ್​ ಉರುಳಿದ ಬಳಿಕ ಆಂಗ್ಲ ಪಡೆಯ ರನ್​ ವೇಗಕ್ಕೆ ಕಡಿವಾಣ ಬಿದ್ದಿತು.

ಬೇರ್​ಸ್ಟೋ ಬಳಿಕ ಬಂದ ಜೋ ರೂಟ್​ 44 ರನ್​ ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ನಾಯಕ ಇಯಾನ್​ ಮಾರ್ಗನ್​ ಕೇವಲ ಒಂದು ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಆದರೆ, ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಬೆನ್​ ಸ್ಟೋಕ್ಸ್​ (79 ರನ್​, 54 ಎಸೆತ,6 ಬೌ, 3 ಸಿ) ರನ್​ ಗಳಿಸುವ ಮೂಲಕ ಆಂಗ್ಲ ಪಡೆ ಮುನ್ನೂರು ರನ್​ ಗಡಿ ದಾಟುವಲ್ಲಿ ನೆರವಾದರು. ಉಳಿದಂತೆ ಜಾಸ್​ ಬಟ್ಲರ್​ (20), ಕ್ರಿಸ್​ ವೋಕ್ಸ್​ (7) ರನ್​ ಗಳಿಸಿದರೆ, ಲಿಯಾಮ್​ ಫ್ಲಂಕೆಟ್ (1)​ ಜೋಫ್ರಾ ಆರ್ಚರ್​ (0) ಅಜೇಯರಾಗಿ ಉಳಿದರು.
ಟೀಂ ಇಂಡಿಯಾ ಪರ ಮಹಮ್ಮದ್​​ ಶಮಿ 5 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಜಸ್​ಪ್ರೀತ್​ ಬೂಮ್ರಾ ಹಾಗೂ ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ ಪಡೆದರು.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

6 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

14 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

20 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

20 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

21 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

21 hours ago