ಬರ್ವಿುಂಗ್ಹ್ಯಾಂ: ಇಲ್ಲಿನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ದ ಭಾರತಕ್ಕೆ 31ರನ್ ಗಳ ಸೋಲು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆಂಗ್ಲ ಪಡೆ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಕಲೆ ಹಾಕುವ ಮೂಲಕ 31 ರನ್ ಅಂತರದಲ್ಲಿ ಆಂಗ್ಲ ಪಡೆಗೆ ಶರಣಾಯಿತು.
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಶೂನ್ಯ ಸಾಧನೆ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್ ಶರ್ಮಾ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ 146 ರನ್ ಜತೆಯಾಟ ನೀಡಿದರು. ಆದರೆ ಈ ವೇಳೆ 66 ರನ್ ಗಳಿಸಿದ್ದ ಕೊಹ್ಲಿ ಫ್ಲಂಕೆಟ್ ಓವರ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಸ್ವಲ್ಪದರಲ್ಲೇ 102 ರನ್ ಗಳಿಸಿದ್ದ ರೋಹಿತ್ ಶರ್ಮಾ, ಕ್ರಿಸ್ ವೋಕ್ಸ್ ಓವರ್ನಲ್ಲಿ ಕ್ಯಾಚಿತ್ತರು.
ಬಳಿಕ ರಿಷಭ ಪಂತ್ (32) ಹಾಗೂ ಹಾರ್ದಿಕ್ ಪಾಂಡ್ಯ (45) ವೇಗವಾಗಿ ರನ್ ಗಳಿಸಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರೂ ವಿಕೆಟ್ ನೀಡಿದ್ದು ಭಾರತದ ಸೋಲಿಗೆ ಕಾರಣವಾಯಿತು. ಉಳಿದಂತೆ ಎಂ.ಎಸ್. ಧೋನಿ (42*) ಹಾಗೂ ಕೇದರ್ ಜಾಧವ್ (12*) ರನ್ ಗಳಿಸಿದರು. ಧೋನಿ ಮತ್ತು ಜಾಧವ್ ಗೆ ಕೊನೆಯ ಓವರ್ ಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸಲು ಸಾಧ್ಯವಾಗದೆ ಇದ್ದುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.
ಇಂಗ್ಲೆಂಡ್ ಪರ ಲಿಯಾಮ್ ಫ್ಲಂಕೆಟ್ ಪ್ರಮುಖ ಮೂರು ವಿಕೆಟ್ ಕಬಳಿಸಿ ಮಿಂಚಿದರೆ, ಕ್ರಿಸ್ ವೋಕ್ಸ್ ಎರಡು ವಿಕೆಟ್ ಪಡೆಯುವ ಮೂಲಕ ಆಂಗ್ಲ ಪಡೆಗೆ ಗೆಲುವನ್ನು ತಂದುಕೊಟ್ಟರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಆಂಗ್ಲ ಪಡೆ ಪರ ಆರಂಭಿಕರಾದ ಜಾಸನ್ ರಾಯ್ ಮತ್ತು ಜಾನಿ ಬೇರ್ಸ್ಟೋ 22.1 ಓವರ್ಗಳಲ್ಲಿ 160 ರನ್ಗಳ ಉತ್ತಮ ಜೊತೆಯಾಟವಾಡಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣರಾದರು. 66 ರನ್ ಗಳಿಸಿದ್ದ ಜಾಸನ್ ರಾಯ್ ಕುಲದೀಪ್ಗೆ ಬಲಿಯಾದರು. ಇದರ ಬೆನ್ನಲ್ಲೇ 111 ರನ್ ಗಳಿಸಿ ಆಡುತ್ತಿದ್ದ ಬೇರ್ಸ್ಟೋ ಶಮಿ ಓವರ್ನಲ್ಲಿ ಕ್ಯಾಚಿತ್ತರು. ಪ್ರಮುಖ ಎರಡು ವಿಕೆಟ್ ಉರುಳಿದ ಬಳಿಕ ಆಂಗ್ಲ ಪಡೆಯ ರನ್ ವೇಗಕ್ಕೆ ಕಡಿವಾಣ ಬಿದ್ದಿತು.
ಬೇರ್ಸ್ಟೋ ಬಳಿಕ ಬಂದ ಜೋ ರೂಟ್ 44 ರನ್ ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ನಾಯಕ ಇಯಾನ್ ಮಾರ್ಗನ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಬೆನ್ ಸ್ಟೋಕ್ಸ್ (79 ರನ್, 54 ಎಸೆತ,6 ಬೌ, 3 ಸಿ) ರನ್ ಗಳಿಸುವ ಮೂಲಕ ಆಂಗ್ಲ ಪಡೆ ಮುನ್ನೂರು ರನ್ ಗಡಿ ದಾಟುವಲ್ಲಿ ನೆರವಾದರು. ಉಳಿದಂತೆ ಜಾಸ್ ಬಟ್ಲರ್ (20), ಕ್ರಿಸ್ ವೋಕ್ಸ್ (7) ರನ್ ಗಳಿಸಿದರೆ, ಲಿಯಾಮ್ ಫ್ಲಂಕೆಟ್ (1) ಜೋಫ್ರಾ ಆರ್ಚರ್ (0) ಅಜೇಯರಾಗಿ ಉಳಿದರು.
ಟೀಂ ಇಂಡಿಯಾ ಪರ ಮಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಜಸ್ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…