Advertisement
ಯಕ್ಷಗಾನ : ಮಾತು-ಮಸೆತ

ಶಾಸ್ತ್ರದಲ್ಲಿ ಅನುಮಾನ, ಕರ್ಮಕಾಂಡದಲ್ಲಿ ಯಾರಿಗಾದರೂ ಜಿಜ್ಞಾಸೆ ಬಂದರೆ…….

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ

(ಯಯಾತಿ ಮಹಾರಾಜನು ದೇವಯಾನಿಯನ್ನು ವಿವಾಹವಾಗಲು ಧರ್ಮಸೂಕ್ಷ್ಮದ ಪ್ರಶ್ನೆಯನ್ನು ಶುಕ್ರಾಚಾರ್ಯರ ಮುಂದಿಟ್ಟಾಗ)

“ಕುಮಾರ.. ನಾಲ್ಕು ವರ್ಣ ವಿಭಾಗ. ಇದು ಸಮಾಜದ ಸ್ವಾಸ್ಥ್ಯಕ್ಕೆ. ಕ್ಷತ್ರಿಯ ನೀನು. ನಾವು ಬ್ರಾಹ್ಮಣರು. ಸರ್ವೇಸಾಮಾನ್ಯವಾಗಿ ವೈದಿಕ ಪುತ್ರಿಯನ್ನು ಸಾಮಾನ್ಯ ಓರ್ವ ಕ್ಷತ್ರಿಯ ವಿವಾಹವಾಗಕೂಡದು. ವರ್ಣಸಂಕರ ಉಂಟಾಗುತ್ತದೆ. ರಾಜನು ಕ್ಷತ್ರಿಯನೇ ಅಂತ ಮುದ್ರೆ ಒತ್ತುವುದಕ್ಕೆ ಕಷ್ಟವಾಗುತ್ತದೆ. ಬ್ರಾಹ್ಮಣರಿಂದ ಮಂಗಳಸ್ನಾನವನ್ನು ಮಾಡಿಸಿಕೊಂಡು, ಕುಟುಂಬವನ್ನು ವಿಚ್ಛೇದಿಸಿಕೊಂಡು ಅಂತ ಹೇಳದಿದ್ರೂ ಕೇವಲ ಕೌಟುಂಬಿಕವಾದ ವ್ಯಕ್ತಿತ್ವವನ್ನು ಕಳೆದುಕೊಂಡು ರಾಜನು ಹೇಗಿರುತ್ತಾನೆ? ಆಚಾರ ಹೀಗುಂಟು. ಅಭಿಷೇಚನಗೊಂಡಂತಹ ಒಬ್ಬ ರಾಜ ಸೂತಕ ಪಾತಕಗಳಿಗಿಂತ ಹೊರಗಿರುತ್ತಾನೆ. ಪರಿಶುದ್ಧನಾಗಿರುತ್ತಾನೆ. ಆವಾಗ ಬ್ರಾಹ್ಮಣರು, ಇತರೇ ಜನಗಳು ಆ ರಾಜನಿಗೆ ನಾಲ್ಕು ವರ್ಣವನ್ನು ರಕ್ಷಿಸಿದ ಒಂದು ದಿವ್ಯತ್ವವನ್ನು ಆರೋಪಿಸುತ್ತಾರೆ.

ಅಶ್ವಮೇಧಕ್ಕೆ ಕುದುರೆಯನ್ನು ಪೂಜಿಸಿ ಕಳುಹಿಸುತ್ತೇವೆ. ಅದನ್ನು ‘ಕುದುರೆ’ ಅಂತ ಅಂಗೀಕರಿಸುವುದಕ್ಕೆ ಸಾಧ್ಯವಿಲ್ಲ ತಾನೆ? ಅಂತೆಯೇ ಅರಸುಗಳಿಗೆ ಎತ್ತಣದ ಜಾತಿ”? ಅರಸರ ಜಾತಿ ಅಂತಂದ್ರೆ ಅರಸರದ್ದೇ. ರೂಢಿಯಿದೆ, ಸಂದರ್ಭ ಬಂದಾಗ ಕ್ಷತ್ರಿಯನಾದವನು ಬ್ರಾಹ್ಮಣ ವಧುವನ್ನು ಕೈ ಹಿಡಿಯಬಹುದು. ಬ್ರಾಹ್ಮಣರಂತೂ ಕ್ಷತ್ರಿಯರಲ್ಲಿ ಅರಸು ಮಕ್ಕಳನ್ನು ಸೃಷ್ಟಿಸುವುದು ಇದ್ದೇ ಇದೆ. ಆ ಅನುಲೋಮ, ಪ್ರತಿಲೋಮ ಪದ್ಧತಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಅಪೂರ್ವ, ಅಪರೂಪ.

ವಿಪ್ರರಾದಂತಹ ನಮಗೆ ಹೇಗೆ ಗರ್ಭಾದಿ ಕೊನೆಯ ಹಂತದವರೆಗೆ ಸಂಸ್ಕಾರಗಳಿವೆಯೋ ಹಾಗೆ ಕ್ಷತ್ರಿಯರಾದ ನಿಮಗೂ ಇದೆ. ಉಪನೀತನಾದವನು ಗೃಹಸ್ಥಾಶ್ರಮ ಸ್ವೀಕಾರ ಮಾಡುವಾಗ ಅವನು ಔಪಾಸನೆ ಮಾಡಬೇಕಾಗುತ್ತದೆ. ಇಷ್ಟನ್ನು ಮುಂದಿಟ್ಟುಕೊಂಡು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದರೂ ಈಗ ಜಾತ್ಯತೀತನಾಗಿ ಇರುವುದರಿಂದ, ಒಂದು ರೀತಿಯ ದೈವೀ ಆವೇಶ ನಿನ್ನಲ್ಲಿ ಉಂಟು ಅಂತ ಕಂಡುಕೊಂಡ ಈ ಶುಕ್ರಾಚಾರ್ಯ, ವಿದ್ಯುಕ್ತವಾಗಿ ನನ್ನ ಮಗಳನ್ನು ಧಾರೆ ಎರೆದು ಕೊಡುವುದಕ್ಕೆ ಸಿದ್ಧನಾಗಿದ್ದಾನೆ. ಇದನ್ನು ಯಾರಾದರೂ ಆಕ್ಷೇಪಿಸುವ ಸಾಧಾರಣ ಬ್ರಾಹ್ಮಣರು ಇದ್ದರೆ, ಯಾರವರು? ಶಾಸ್ತ್ರದಲ್ಲಿ ಅನುಮಾನ ಬಂದರೆ, ಕರ್ಮಕಾಂಡದಲ್ಲಿ ಯಾರಿಗಾದರೂ ಜಿಜ್ಞಾಸೆ ಬಂದರೆ, ಕೊನೆಯ ತೀರ್ಮಾನ ಹೇಳುವವನು ನಾನೇ…”

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

1 day ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

2 days ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

2 days ago