ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಯಯಾತಿ ಮಹಾರಾಜನು ದೇವಯಾನಿಯನ್ನು ವಿವಾಹವಾಗಲು ಧರ್ಮಸೂಕ್ಷ್ಮದ ಪ್ರಶ್ನೆಯನ್ನು ಶುಕ್ರಾಚಾರ್ಯರ ಮುಂದಿಟ್ಟಾಗ)
“ಕುಮಾರ.. ನಾಲ್ಕು ವರ್ಣ ವಿಭಾಗ. ಇದು ಸಮಾಜದ ಸ್ವಾಸ್ಥ್ಯಕ್ಕೆ. ಕ್ಷತ್ರಿಯ ನೀನು. ನಾವು ಬ್ರಾಹ್ಮಣರು. ಸರ್ವೇಸಾಮಾನ್ಯವಾಗಿ ವೈದಿಕ ಪುತ್ರಿಯನ್ನು ಸಾಮಾನ್ಯ ಓರ್ವ ಕ್ಷತ್ರಿಯ ವಿವಾಹವಾಗಕೂಡದು. ವರ್ಣಸಂಕರ ಉಂಟಾಗುತ್ತದೆ. ರಾಜನು ಕ್ಷತ್ರಿಯನೇ ಅಂತ ಮುದ್ರೆ ಒತ್ತುವುದಕ್ಕೆ ಕಷ್ಟವಾಗುತ್ತದೆ. ಬ್ರಾಹ್ಮಣರಿಂದ ಮಂಗಳಸ್ನಾನವನ್ನು ಮಾಡಿಸಿಕೊಂಡು, ಕುಟುಂಬವನ್ನು ವಿಚ್ಛೇದಿಸಿಕೊಂಡು ಅಂತ ಹೇಳದಿದ್ರೂ ಕೇವಲ ಕೌಟುಂಬಿಕವಾದ ವ್ಯಕ್ತಿತ್ವವನ್ನು ಕಳೆದುಕೊಂಡು ರಾಜನು ಹೇಗಿರುತ್ತಾನೆ? ಆಚಾರ ಹೀಗುಂಟು. ಅಭಿಷೇಚನಗೊಂಡಂತಹ ಒಬ್ಬ ರಾಜ ಸೂತಕ ಪಾತಕಗಳಿಗಿಂತ ಹೊರಗಿರುತ್ತಾನೆ. ಪರಿಶುದ್ಧನಾಗಿರುತ್ತಾನೆ. ಆವಾಗ ಬ್ರಾಹ್ಮಣರು, ಇತರೇ ಜನಗಳು ಆ ರಾಜನಿಗೆ ನಾಲ್ಕು ವರ್ಣವನ್ನು ರಕ್ಷಿಸಿದ ಒಂದು ದಿವ್ಯತ್ವವನ್ನು ಆರೋಪಿಸುತ್ತಾರೆ.
ಅಶ್ವಮೇಧಕ್ಕೆ ಕುದುರೆಯನ್ನು ಪೂಜಿಸಿ ಕಳುಹಿಸುತ್ತೇವೆ. ಅದನ್ನು ‘ಕುದುರೆ’ ಅಂತ ಅಂಗೀಕರಿಸುವುದಕ್ಕೆ ಸಾಧ್ಯವಿಲ್ಲ ತಾನೆ? ಅಂತೆಯೇ ಅರಸುಗಳಿಗೆ ಎತ್ತಣದ ಜಾತಿ”? ಅರಸರ ಜಾತಿ ಅಂತಂದ್ರೆ ಅರಸರದ್ದೇ. ರೂಢಿಯಿದೆ, ಸಂದರ್ಭ ಬಂದಾಗ ಕ್ಷತ್ರಿಯನಾದವನು ಬ್ರಾಹ್ಮಣ ವಧುವನ್ನು ಕೈ ಹಿಡಿಯಬಹುದು. ಬ್ರಾಹ್ಮಣರಂತೂ ಕ್ಷತ್ರಿಯರಲ್ಲಿ ಅರಸು ಮಕ್ಕಳನ್ನು ಸೃಷ್ಟಿಸುವುದು ಇದ್ದೇ ಇದೆ. ಆ ಅನುಲೋಮ, ಪ್ರತಿಲೋಮ ಪದ್ಧತಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಅಪೂರ್ವ, ಅಪರೂಪ.
ವಿಪ್ರರಾದಂತಹ ನಮಗೆ ಹೇಗೆ ಗರ್ಭಾದಿ ಕೊನೆಯ ಹಂತದವರೆಗೆ ಸಂಸ್ಕಾರಗಳಿವೆಯೋ ಹಾಗೆ ಕ್ಷತ್ರಿಯರಾದ ನಿಮಗೂ ಇದೆ. ಉಪನೀತನಾದವನು ಗೃಹಸ್ಥಾಶ್ರಮ ಸ್ವೀಕಾರ ಮಾಡುವಾಗ ಅವನು ಔಪಾಸನೆ ಮಾಡಬೇಕಾಗುತ್ತದೆ. ಇಷ್ಟನ್ನು ಮುಂದಿಟ್ಟುಕೊಂಡು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದರೂ ಈಗ ಜಾತ್ಯತೀತನಾಗಿ ಇರುವುದರಿಂದ, ಒಂದು ರೀತಿಯ ದೈವೀ ಆವೇಶ ನಿನ್ನಲ್ಲಿ ಉಂಟು ಅಂತ ಕಂಡುಕೊಂಡ ಈ ಶುಕ್ರಾಚಾರ್ಯ, ವಿದ್ಯುಕ್ತವಾಗಿ ನನ್ನ ಮಗಳನ್ನು ಧಾರೆ ಎರೆದು ಕೊಡುವುದಕ್ಕೆ ಸಿದ್ಧನಾಗಿದ್ದಾನೆ. ಇದನ್ನು ಯಾರಾದರೂ ಆಕ್ಷೇಪಿಸುವ ಸಾಧಾರಣ ಬ್ರಾಹ್ಮಣರು ಇದ್ದರೆ, ಯಾರವರು? ಶಾಸ್ತ್ರದಲ್ಲಿ ಅನುಮಾನ ಬಂದರೆ, ಕರ್ಮಕಾಂಡದಲ್ಲಿ ಯಾರಿಗಾದರೂ ಜಿಜ್ಞಾಸೆ ಬಂದರೆ, ಕೊನೆಯ ತೀರ್ಮಾನ ಹೇಳುವವನು ನಾನೇ…”
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…