ಗುತ್ತಿಗಾರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಾದ ಕೂಜುಗೋಡು ಕಟ್ಟೆಮನೆ ನಾಗಪ್ಪ ಮಾಸ್ಟರ್ ಹಾಗು ಕೇಪಳಕಜೆ ಪುರುಷೋತ್ತಮ ಮಾಸ್ಟರ್ ದಂಪತಿಗಳಿಗೆ ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇವರ ಮನೆಗೆ ತೆರಳಿ ಶಾಲು, ಹಾರ, ಪೇಟ ತೊಡಿಸಿ ಸನ್ಮಾನಪತ್ರ ನೀಡಿ ಗೌರವಿಸಿದರು.
ಲಯನ್ಸ್ ಅಧ್ಯಕ್ಷ ಮೋಹನ.ಕೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ವೆಂಕಪ್ಪ ಕೇನಾಜೆ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಹಾಗೂ ಸನ್ಮಾನಿತರಿಗೆ ಅಭಿನಂದಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಕೆ. ಬಾಲಕೃಷ್ಣ, ಡಿ.ಯಸ್.ಧರ್ಮಪಾಲ, ಲಿಜೊ ಜೊಸ್, ಕುಶಾಲಪ್ಪ ಮಾಸ್ಟರ್, ಯಂ.ಡಿ.ವಿಜಯಕುಮಾರ್, ಯಂ,ಕೆ. ಮೋಹನ್ ಕುಮಾರ್, ಪಿ.ಸಿ.ಜಯರಾಮ, ಡಿ.ಆರ್.ಉದಯಕುಮಾರ್, ನವೀನ್ ಬಾಳುಗೋಡು, ರಾಜೇಶ್ ಉತ್ರಂಬೆ, ನಾಗೇಶ್ ಪಾರೆಪ್ಪಾಡಿ, ಶಿವರಾಮ ಚಿಲ್ತಡ್ಕ, ಲಯನೆಸ್ ಕ್ಲಬ್ ನ ಚೆನ್ನಮ್ಮ ಮೋಹನ್ ಭಾಗವಹಿಸಿದ್ದರು. ಕೆ.ವಿ. ಸುಧಿರ್ ದಂಪತಿಗಳು, ಶಿಕ್ಷಕಿ ಶೇಷಮ್ಮ ಕೆ, ನಿವೃತ್ತ ಯೋಧ ಜತ್ತಪ್ಪ ಗೌಡ ಓಟೆಡ್ಕ, ಚಂದ್ರಕಾಂತ ಕಲ್ಲುರಾಯ, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು. ಎಂ. ಕೆ. ಮೋಹನ ಕುಮಾರ್ ವಂದಿಸಿದರು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…