ಶಿಕ್ಷಕ-ವಿದ್ಯಾರ್ಥಿ ಸಂಬಂಧ ಗಟ್ಟಿಯಾಗಲಿ

September 11, 2019
4:00 PM

ಅಂದು ಶಿಕ್ಷಕರ ದಿನಾಚರಣೆ. ನಾನು ನನ್ನ ಪುತ್ರನೊಂದಿಗೆ ಅವನು ಕಲಿತ ಪುತ್ತೂರಿನ ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜರನ್ನು ಭೇಟಿ ಆಗುವ ಉದ್ದೇಶದಿಂದ ಅಂಬಿಕಾ ವಿದ್ಯಾಲಯಕ್ಕೆ ಹೋಗಿದ್ದೆವು.

Advertisement

ಅಲ್ಲಿ ಶಿಕ್ಷಕರ ಮತ್ತು ಮಕ್ಕಳ ಅದ್ಭುತವಾದ ,ಸಂಸ್ಕಾರಯುತ ಲೋಕ ನಮ್ಮ ಮುಂದೆ ತೆರೆದುಕೊಂಡಿತ್ತು.ಶಿಕ್ಷಕರ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಮಕ್ಕಳೊಂದಿಗೆ ನಾವೂ ಸಭಾಂಗಣದಲ್ಲಿ ಹೋಗಿ ಕುಳಿತೆವು.ಮಕ್ಕಳು ಶಿಕ್ಷಕರನ್ನು ಪಕ್ಕದಲ್ಲಿ ಕೂರಿಸಿ ತಮ್ಮದೇ ಕಲ್ಪನೆಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದರು. ಪುಟ್ಟ ಮಕ್ಕಳು ಗುರು ಹಿರಿಯರ ಚರಣಗಳಿಗೆ ಶಿರಬಾಗಿ ನಮಿಸಿ ಆಶೀರ್ವಾದ ಪಡಕೊಳ್ಳುವ ದೃಶ್ಯ ಕಂಡು ನಿಬ್ಬೆರಗಾದೆವು. ಕೆಲವು ಮಕ್ಕಳಂತೂ ನಮ್ಮೆಡೆಗೂ ಬಂದು ಹೂವನ್ನಿತ್ತು ಶಿರಬಾಗಿ ನಮಿಸಿ ಪ್ರೀತಿಯ ನುಡಿಗಳನ್ನಾಡಿದ್ದು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದ್ದೂ ನಿಜ.

ಈವತ್ತಿನ ತಳಕು ಬಳುಕಿನ ಸ್ವೇಚ್ಚಾ ಸಮಾಜದಲ್ಲಿ ಪುಟ್ಟ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ,ಬೆಳೆಸುವ ಪರಿ ನಿಜಕ್ಕೂ ಪ್ರಶಂಸನೀಯ. ಭಾರತೀಯತೆ,ಸನಾತನತೆ ಅವಿನಾಶಿನಿ ಎಂಬುದ ಕಂಡು ಮನಸ್ಸು ಸಂತಸಗೊಂಡದ್ದೂ ಹೌದು.
ವಂದೇ ಗುರೂಣಾಂ ಚರಣಾರವಿಂದೇ
ಸಂಧರ್ಶಿತಸ್ವಾತ್ಮ ಸುಖಾವಬೋಧೇ
ಜನಸ್ಯಯೇ ಜಾಂಗಲಿಕಾಯಮಾನೇ
ಸಂಸಾರ ಹಾಲಹಲಮೋಹಶಾಂತ್ಯೈ…
ಎಂದು ಮಕ್ಕಳು ಶಿಕ್ಷಕ ಸಮಾಜವನ್ನು ಪೂಜಿಸಿದ ಆ ಕ್ಷಣಗಳಲ್ಲಿ ನಾವೂ ಅಲ್ಲಿದ್ದುದು ನಿಜಕ್ಕೂ ಅವಿಸ್ಮರಣೀಯ. ಇಂಥಹ ಧನ್ಯ ಶಿಕ್ಷಕ ವಿದ್ಯಾರ್ಥಿ ಸಮೂಹ ದೇಶದೆಲ್ಲೆಡೆ ಬೆಳೆದು ಬರಲೆಂಬ ಆಶಯ ನಮ್ಮೆಲ್ಲರದಾಗಲಿ.

 

  • ಸುರೇಶ್ಚಂದ್ರ ಕಲ್ಮಡ್ಕ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group