ಲಾಕ್ಡೌನ್ ನಡುವೆ ಧೈರ್ಯ ತುಂಬುವ, ಭರವಸೆ ನೀಡುವ ಸಂಗತಿ ಇದು. ದೇಶದಲ್ಲಿ ಇಂತಹ ನೂರಾರು ಸಂಗತಿಗಳು ನಡೆದಿದೆ. ಇದುವರೆಗೂ ಕೊರೊನಾ ವೈರಸ್ ಭಯವೇ ತುಂಬಿತೇ ಹೊರತು ಜಾಗೃತಿ ಇನ್ನೂ ಸರಿಯಾಗಿ ಮೂಡಿಲ್ಲ. ಈ ನಡುವೆಯೇ ಅನೇಕ ಧೈರ್ಯ ತುಂಬುವ ಸಂಗತಿಗಳು ನಡೆದು ಹೋದವು. ಅದಕ್ಕೀಗ ಮನ್ನಣೆ ಸಿಕ್ಕಿದೆ……
ಮಧುರೈ: ಶಿಕ್ಷಣಕ್ಕಾಗಿ ತಂದೆ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣವನ್ನು ಲಾಕ್ಡೌನ್ ಸಮಯದಲ್ಲಿ ಬಡವರಿಗೆ ನೀಡುವಂತೆ ತಂದೆಗೆ ಸೂಚಿಸಿ ಅನುಷ್ಠಾನ ಮಾಡಿದ ತಮಿಳುನಾಡಿನ ಮಧುರೈ ನಿವಾಸಿ ಸೆಲೂನ್ ಮಾಲಕ ಮೋಹನ್ ಅವರ ಪುತ್ರಿ 13 ವರ್ಷದ ನೇತ್ರಾ ಎಂಬಾಕೆಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇಮಕ ಮಾಡಲಾಗಿದೆ.
ತಮಿಳುನಾಡಿನ ಮಧುರೈಯಲ್ಲಿರುವ 13 ವರ್ಷದ ನೇತ್ರಾ, ಕೊರೊನಾ ವೈರಸ್ ಸಂದರ್ಭದಲ್ಲಿ ಬಡವರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವಂತೆ ತನ್ನ ತಂದೆಗೆ ಮನವಿ ಮಾಡಿದ್ದಳು. ನೇತ್ರಾಳ ತಂದೆ ಸೆಲೂನ್ ನಡೆಸುತ್ತಿದ್ದು ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಿದ್ದರು. ಕೊರೊನಾ ಲಾಕ್ಡೌನ್ ಸಂದರ್ಭ ಬಡವರ ಸಂಕಷ್ಟ ನೋಡಿದ ನೇತ್ರಾ ನಾಗರಿಕ ಸೇವೆ ಮಾಡಲು ತನ್ನ ವಿದ್ಯಾಭ್ಯಾಸಕ್ಕಾಗಿ ಸಂಗ್ರಹಿಸಿದ್ದ ಹಣವನ್ನು ನೀಡುವಂತೆ ತಂದೆಯಲ್ಲಿ ಮನವಿ ಮಾಡಿದ್ದಳು. ಇದಕ್ಕೆ ಸ್ಪಂದಿಸಿದ ಮನೆಯವರು ಮಗಳ ಬೇಡಿಕೆಯನ್ನು ಈಡೇರಿಸಲು ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನು ಬಳಸಿಕೊಂಡು ಲಾಕ್ಡೌನ್ ಮಧ್ಯೆ 600 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸಿದರು. ಇದರ ಫಲವಾಗಿ ಇದೀಗ ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇತ್ರಾಳನ್ನು ನೇಮಕ ಮಾಡಿದೆ.
ನ್ಯೂಯಾರ್ಕ್ನಲ್ಲಿ ನಡೆಯುವ ವಿಶ್ವಸಂಸ್ಥೆಯ (ಯುಎನ್) ಸಮಾವೇಶಗಳಲ್ಲಿ ಮತ್ತು ಜಿನೀವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್ಎಡಿಎಪಿ ಘೋಷಣೆ ಮಾಡಿದೆ. ಇದೇ ಸಂದರ್ಭ ವಿಶ್ವ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾತನಾಡಲು ಆಕೆಗೆ ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ, ಇನ್ನಷ್ಟು ಬಡವರನ್ನು ತಲುಪಲು ಸಹಕಾರ ಮಾಡಲಾಗುತ್ತದೆ ಎಂದೂ ಹೇಳಿದೆ.
ಕೊರೊನಾ ಲಾಕ್ಡೌನ್ ಸಂದರ್ಭ ಎರಡು ತಿಂಗಳುಗಳ ಕಾಲ ಸೆಲೂನ್ ಮುಚ್ಚಲಾಗಿತ್ತು, ಯಾವುದೇ ಆದಾಯ ಇರಲಿಲ್ಲ. ಹೀಗಿದ್ದರೂ ಈ ನಿಸ್ವಾರ್ಥ ಸೇವೆ ಮಾಡಿರುವ ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.
ಇದೀಗ 13 ವರ್ಷದ ನೇತ್ರಾ ಸೇವೆಯ ಮೂಲಕ ಗ್ರಾಮ ಮಟ್ಟದಿಂದ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾಳೆ.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…