ಸುಳ್ಯ: ನಮ್ಮತನ ಕಳೆದುಕೊಳ್ಳದ ಸತ್ಸಂಗದಿಂದ ಸಂಸ್ಕಾರ ಮೂಡುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ಅವರು ಬುಧವಾರ ಕುರುಂಜಿಭಾಗ್ನಲ್ಲಿ ಡಾ.ಡಿ.ವಿ.ಲೀಲಾಧರ್ ಅವರ ಶ್ರೀವಿಷ್ಣು ಗೃಹ ಮತ್ತು ಗೃಹ ಸಮುಚ್ಚಯದ ಗುರುಪ್ರವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನೆಯಿಂದಲೇ ಸಂಸ್ಕಾರ ಆರಂಭ. ಆ ಮನೆ ಮತ್ತು ಮನೆ ಮಂದಿಯಲ್ಲಿ ಸಂಸ್ಕಾರ ಇದ್ದಾಗ ಮನೆಗೆ ಬಂದವರಿಗೂ ಅದು ವೇದ್ಯವಾಗಿ ಅವರು ಸಂಸ್ಕಾರವಂತರಾಗಲು ಅವಕಾಶ ದೊರಕುತ್ತದೆ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳಾದ ಧರ್ಮಪಾಲನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಿವಾನಂದನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಶ್ರೀಶೈಲಾನಂದಾನಾಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು, ಅಕಾಡೆಮಿ ಆಫ್ ಲಿಬರಲ್ ಆಫ್ ಎಜುಕೇಶನ್ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್, ಸಮುಚ್ಚಯದ ಡಿ.ಕೆ.ವೀರಪ್ಪ ಗೌಡ, ಡಿ.ವಿ.ಸತೀಶ್, ಡಾ.ಲೀಲಾಧರ್ ಇದ್ದರು. ಕೆ.ಆರ್.ಗಂಗಾಧರ್ ಪ್ರಸ್ತಾವಿಕ ಮಾತನಾಡಿದರು.
ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…
ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…
ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…
ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…
ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್ನಿಂದ 2025-26ರಲ್ಲಿ…
ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…