ಧರ್ಮಸ್ಥಳ: ಶಿವನನ್ನು ಲಯಕರ್ತ ಎಂದು ಕರೆಯುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಆದಿಯಿಂದ ಅಂತ್ಯದೆಡೆಗೆ ಹೋಗುತ್ತದೆ. ಶಾಶ್ವತವಾಗಿ ಈ ಪ್ರಪಂಚದಲ್ಲಿ ಯಾವುದೇ ಚರಾಚರ ವಸ್ತುಗಳು ಇರಲು ಸಾಧ್ಯವಿಲ್ಲ. ಎಲ್ಲವೂ ನಾಶವಾಗುವುದು ಸ್ವಾಭಾವಿಕ, ಇದು ಶಿವನ ತತ್ವ. ಪ್ರಪಂಚದಲ್ಲಿ ನಾನಾ ಧರ್ಮಗಳು ಚಾಲ್ತಿಯಲ್ಲಿದೆ. ಆದರೆ ಎಲ್ಲಾ ಧರ್ಮಗಳ ತಾತ್ಪರ್ಯವು ಮಾನವೀಯತೆ ಆಗಿದೆ. ಆದ ರೆಜನರು ಧರ್ಮವನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸವಾಗುವ ಕಾರಣ ಧಾರ್ಮಿಕ ಕ್ಲೇಶಗಳು ಸಮಾಜದಲ್ಲಿ ಉಂಟಾಗುತ್ತದೆ. ಧಾರ್ಮಿಕ ಮುಖಂಡರುಗಳು ಈ ವ್ಯತ್ಯಾಸಗಳನ್ನು ಹೊಗಲಾಡಿಸಲು ಪ್ರಯತ್ನಿಸಬೇಕಾಗಿದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ ದಿ ಯುನೈಡೆಡ್ ಮೆಥೊಡಿನಸ್ಸ್ ಚರ್ಚ್’ ವತಿಯಿಂದ ಶ್ರೀಕ್ಷೇತ್ರಕ್ಕೆ ಅಮೇರಿಕಾದಿಂದ ಬಂದಂತಹ ವಿದ್ಯಾರ್ಥಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ನಡೆಸುತ್ತಿರುವ ಜನಕಲ್ಯಾಣ ಕಾರ್ಯಕ್ರಮಗಳ ಅಧ್ಯಯನಕ್ಕೆ ಈ ತಂಡವು ಆಗಮಿಸಿತ್ತು. ಶ್ರೀ ಕ್ಷೇತ್ರದ ವಿವಿಧ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರು. ತಂಡದಲ್ಲಿ ಡಾ. ಇ.ವಿ.ಎಸ್ ಮಾಬೆನ್, ಪ್ರೊಫೆಸರ್, ಎ.ಜೆ. ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಕಲಾ ಸಾಯನ್ಸ್, ಬಿಷಬ್ ಸುದರ್ಶನ್ ದೇವಾಧಾರ್, ಮೆಥೋಡಿಸ್ಟ್ ಚರ್ಚ್, ನ್ಯೂ ಇಂಗ್ಲೆಂಡ್ ಕಾನ್ಪರೆಸ್ಸ್, ಬಿಷಬ್ ಈಸ್ಟರ್ಲಿಂಗ್ , ಟೆಡ್ಆಂಡರ್ಸನ್ ಮತ್ತು ಮೇರಿ ಆಂಡರ್ಸನ್ ಇವರು ವಿದ್ಯಾರ್ಥಿಗಳ ತಂಡವನ್ನು ಪ್ರತಿನಿಧಿಸಿದರು.
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…