ಸವಣೂರು: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿರವರು ವಿಶೇಷ ಈದ್ ನಮಾಝಿನ ಮೊದಲು ಈದ್ ಸಂದೇಶ ನೀಡಿದ ಅವರು `ಕಳೆದ ಒಂದು ತಿಂಗಳಿನಿಂದ ರಂಝಾನ್ ಉಪವಾಸ ಆಚರಿಸುತ್ತಾ ನಾವು ಆತ್ಮ ಸಂಸ್ಕರಣೆಗೆ ಒಡ್ಡಿಕೊಂಡಿದ್ದೇವೆ.ಅನುಗ್ರಹೀತ ರಂಝಾನ್ ಮಾಸ ನಮ್ಮಿಂದ ವಿದಾಯ ಕೋರಿದೆ. ರಂಝಾನಿನಲ್ಲಿ ನಮ್ಮ ಜೀವನಕ್ರಮದಲ್ಲಿ ಯಾವ ರೀತಿಯ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆಯೋ ಅದನ್ನು ಮುಂಬರುವ ದಿನಗಳಲ್ಲಿ ಅನುಸರಿಸುವ ಮೂಲಕ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಲು ಪರಿಶ್ರಮಿಸೋಣ.ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾದ ಈದ್ ಉಲ್ ಫಿತ್ರ್ ನಾಡಿನೆಲ್ಲೆಡೆ ಹರ್ಷೋಲ್ಲಾಸವನ್ನು ಉಂಟುಮಾಡಲಿ’ ಎಂದು ಶುಭ ಹಾರೈಸಿದರು.
ವಿಶೇಷ ಈದ್ ನಮಾಝಿನ ಬಳಿಕ ಕುತುಬಾ ಪಾರಾಯಣ ನಡೆಯಿತು. ನಂತರ ಅಗಲಿದ ಗುರುಹಿರಿಯರ ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಮಾಝಿನ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ಸಲ್ಲಿಸುವ ಮೂಲಕ ಈದ್ ಉಲ್ ಫಿತ್ರ್ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…