Advertisement
ಸುದ್ದಿಗಳು

ಸಹಕಾರಿ ಕ್ಷೇತ್ರದ ಚುನಾವಣೆ : ಐವರ್ನಾಡು, ಪಂಜ, ಅರಂತೋಡಿನಲ್ಲಿ ಅಚ್ಚರಿಯ ಗೆಲುವು…!

Share

ಸುಳ್ಯ: ತಾಲೂಕಿನ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಭಾನುವಾರ ಚುನಾವಣೆ ನಡೆದ ಐವರ್ನಾಡು , ಪಂಜ, ಅರಂತೋಡುಗಳಲ್ಲಿ    ಅಚ್ಚರಿಯ ಗೆಲುವು ದಾಖಲಾಗಿದೆ. ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಐವರ್ನಾಡು ಸಹಕಾರಿ ಸಂಘದಲ್ಲಿ  ಎನ್ ಎನ್ ಮನ್ಮಥ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ  8 ಸ್ಥಾನಗಳನ್ನು ಗೆದ್ದುಕೊಂಡರೆ, ಈ ಹಿಂದೆ ಅವಿರೋಧವಾಗಿ 4 ಸ್ಥಾನಗಳನ್ನು  ಗೆಲ್ಲುವ ಮೂಲಕ ಒಟ್ಟು 12 ಸ್ಥಾನಗಳನ್ನೂ ಗೆದ್ದುಕೊಂಡಿದೆ.

ಪಂಜದಲ್ಲಿ ಚಂದ್ರಶೇಖರ ಶಾಸ್ತ್ರಿ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು   ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ, ಎಲ್ಲಾ 12 ಸ್ಥಾನಗಳನ್ನೂ ಈ ತಂಡ ಗೆದ್ದಿದೆ.

ಅರಂತೋಡಿನಲ್ಲಿ ಸಂತೋಷ್ ಕುತ್ತಮೊಟ್ಟೆ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎಲ್ಲರೂ ಸಹಕಾರ ಭಾರತಿ-ಬಿಜೆಪಿ ನೇತೃತ್ವದ ತಂಡ ಎಂದೇ ಹೇಳಿದೆ.

ಪಂಜದಲ್ಲಿ

ಸುಳ್ಯ ತಾಲೂಕಿನ ಇತಿಹಾಸದಲ್ಲಿ  ಬಿಜೆಪಿ-ಸಹಕಾರ ಭಾರತಿ ಅಥವಾ ಸಂಘಪರಿವಾರದ ಸಂಘಟನೆಯಿಂದಲೇ ಅಧಿಕೃತ ಅಭ್ಯರ್ಥಿಗಳಲ್ಲ ಎಂದು ಘೋಷಣೆ ಬಳಿಕವೂ ತಂಡವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಘಟನಾತ್ಮಕವಾಗಿ ಬೆಳೆದಿರುವ ಸುಳ್ಯದ  ಸಹಕಾರಿ ಕ್ಷೇತ್ರವು ಬಿಜೆಪಿ-ಸಹಕಾರ ಭಾರತಿಯಲ್ಲಿ ಈಗ ವಿಘಟನೆಯ ಹಾದಿಯಲ್ಲಿ  ಸಾಗಿದೆಯೇ ಎಂಬ ಬಹುದೊಡ್ಡ ಪ್ರಶ್ನೆ ಈಗ ಇದೆ.

ಡಿಸಿಸಿ ಬ್ಯಾಂಕ್  ಅಡ್ಡಮತದಾನದ ಬಳಿಕ ಸುಳ್ಯದಲ್ಲಿ ಸಹಕಾರ ಭಾರತಿ-ಬಿಜೆಪಿಯಲ್ಲಿ ದೈವಸ್ಥಾನದಿಂದ ಆರಂಭವಾಗಿ ಕಾನೂನು ಚೌಕಟ್ಟು, ಸಂಘಟನೆಯ ನಿರ್ಧಾರದವರೆಗೆ  ನಡೆದ ವಿದ್ಯಮಾನಗಳು ಈಗ ಮತ್ತೊಮ್ಮೆ ಗೆಲುವು ಸಾಧಿಸುವವರೆಗೆ ತಲುಪಿದೆ. ಈ ಹಿಂದೆ ನೆಲ್ಲೂರು ಕೆಮ್ರಾಜೆಯಲ್ಲೂ ಇದೇ ರೀತಿ ನಡೆದಿತ್ತು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭ – ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಉದ್ಯಮಕ್ಕೆ ಹೊಸ ದಿಕ್ಕು

ಸುಳ್ಯದ ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭವಾಗಿದೆ. ಮೌಲ್ಯವರ್ಧನೆಯ…

1 day ago

ಅಡಿಕೆ ಎಲೆಚುಕ್ಕೆ ರೋಗದ ವಿರುದ್ಧ ಹೋರಾಟ – ಸಮುದಾಯ ಮಟ್ಟದಲ್ಲಿ ಕ್ರಿಯಾ ಯೋಜನೆಗೆ ಸಂಸದ ಬ್ರಿಜೇಶ್ ಚೌಟ ಕರೆ

ಗುತ್ತಿಗಾರಿನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಸಮುದಾಯದ…

1 day ago

ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…

3 days ago

ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…

4 days ago

ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…

4 days ago

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

5 days ago