ಸುಳ್ಯ: ತಾಲೂಕಿನ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಭಾನುವಾರ ಚುನಾವಣೆ ನಡೆದ ಐವರ್ನಾಡು , ಪಂಜ, ಅರಂತೋಡುಗಳಲ್ಲಿ ಅಚ್ಚರಿಯ ಗೆಲುವು ದಾಖಲಾಗಿದೆ. ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಐವರ್ನಾಡು ಸಹಕಾರಿ ಸಂಘದಲ್ಲಿ ಎನ್ ಎನ್ ಮನ್ಮಥ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆದ್ದುಕೊಂಡರೆ, ಈ ಹಿಂದೆ ಅವಿರೋಧವಾಗಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಒಟ್ಟು 12 ಸ್ಥಾನಗಳನ್ನೂ ಗೆದ್ದುಕೊಂಡಿದೆ.
ಪಂಜದಲ್ಲಿ ಚಂದ್ರಶೇಖರ ಶಾಸ್ತ್ರಿ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ, ಎಲ್ಲಾ 12 ಸ್ಥಾನಗಳನ್ನೂ ಈ ತಂಡ ಗೆದ್ದಿದೆ.
ಅರಂತೋಡಿನಲ್ಲಿ ಸಂತೋಷ್ ಕುತ್ತಮೊಟ್ಟೆ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎಲ್ಲರೂ ಸಹಕಾರ ಭಾರತಿ-ಬಿಜೆಪಿ ನೇತೃತ್ವದ ತಂಡ ಎಂದೇ ಹೇಳಿದೆ.
ಪಂಜದಲ್ಲಿ
ಸುಳ್ಯ ತಾಲೂಕಿನ ಇತಿಹಾಸದಲ್ಲಿ ಬಿಜೆಪಿ-ಸಹಕಾರ ಭಾರತಿ ಅಥವಾ ಸಂಘಪರಿವಾರದ ಸಂಘಟನೆಯಿಂದಲೇ ಅಧಿಕೃತ ಅಭ್ಯರ್ಥಿಗಳಲ್ಲ ಎಂದು ಘೋಷಣೆ ಬಳಿಕವೂ ತಂಡವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಘಟನಾತ್ಮಕವಾಗಿ ಬೆಳೆದಿರುವ ಸುಳ್ಯದ ಸಹಕಾರಿ ಕ್ಷೇತ್ರವು ಬಿಜೆಪಿ-ಸಹಕಾರ ಭಾರತಿಯಲ್ಲಿ ಈಗ ವಿಘಟನೆಯ ಹಾದಿಯಲ್ಲಿ ಸಾಗಿದೆಯೇ ಎಂಬ ಬಹುದೊಡ್ಡ ಪ್ರಶ್ನೆ ಈಗ ಇದೆ.
ಡಿಸಿಸಿ ಬ್ಯಾಂಕ್ ಅಡ್ಡಮತದಾನದ ಬಳಿಕ ಸುಳ್ಯದಲ್ಲಿ ಸಹಕಾರ ಭಾರತಿ-ಬಿಜೆಪಿಯಲ್ಲಿ ದೈವಸ್ಥಾನದಿಂದ ಆರಂಭವಾಗಿ ಕಾನೂನು ಚೌಕಟ್ಟು, ಸಂಘಟನೆಯ ನಿರ್ಧಾರದವರೆಗೆ ನಡೆದ ವಿದ್ಯಮಾನಗಳು ಈಗ ಮತ್ತೊಮ್ಮೆ ಗೆಲುವು ಸಾಧಿಸುವವರೆಗೆ ತಲುಪಿದೆ. ಈ ಹಿಂದೆ ನೆಲ್ಲೂರು ಕೆಮ್ರಾಜೆಯಲ್ಲೂ ಇದೇ ರೀತಿ ನಡೆದಿತ್ತು.
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…