Advertisement
ಅನುಕ್ರಮ

ಸಹಕಾರಿ ಮಾತುಕತೆ | ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು

Share

ಸಹಕಾರಿ-ಸಹಕಾರ ಕ್ಷೇತ್ರದ ಬಗ್ಗೆ ಆಳವಾದ ಮಾಹಿತಿ ಹಾಗೂ ಅದ್ಯಯನ ಮಾಡಿರುವ ಸುಳ್ಯ ತಾಲೂಕಿನ ರಾಧಾಕೃಷ್ಣ ಕೋಟೆ ಅವರು ಪ್ರಸ್ತುತ ಸಹಕಾರಿ ಕ್ಷೇತ್ರದ ಚರ್ಚೆ ಹಾಗೂ ರಾಜಕೀಯ ಚಟುವಟಿಕೆ ಪ್ರವೇಶದ ಬಗ್ಗೆ ಬರೆದಿದ್ದಾರೆ..


ಸಹಕಾರಿ ಕ್ಷೇತ್ರದಲ್ಲಿ ಇಲಾಖೆ- ಸದಸ್ಯರುˌ- ಆಡಳಿತಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ ನಿರ್ವಾಹಕರ ಪಾತ್ರದ ಬಗ್ಗೆ……

1) ಕಾನೂನು ನಿಯಮಗಳಿಗೆ ವಿರುಧ್ಧವಾಗಿ ಆಡಳಿತ ಮಂಡಳಿ ನಡೆದಾಗ ಅದನ್ನು ಪ್ರಶ್ನಿಸುವ ಅಧಿಕಾರ ಇಲಾಖೆಗಿದೆ.

2) ಸದಸ್ಯರು ಸಂಘದ ಪರಮೋಚ್ಚ ಅಧಿಕಾರಸ್ತರು ಎಂಬುದಾಗಿ ಸಾಮಾನ್ಯವಾಗಿ ಬಿಂಬಿಸಲ್ಪಟ್ಟಿದ್ದರೂ ಮಹಾಸಭೆಯ ಕಾರ್ಯಸೂಚಿˌ ಅಧ್ಯಕ್ಷರ ಅನುಮತಿಗನುಸರಿಸಿ ಸದಸ್ಯರ ಪ್ರಾಯೋಗಿಕ ಅಧಿಕಾರ ಸೀಮಿತ

3) ಆಡಳಿತ ಮಂಡಳಿ ಸಂಸ್ಥೆಯ ನೀತಿನಿಯಮಗಳನ್ನು ರೂಪಿಸುವˌ ದೈನಂದಿನ ಆಡಳಿತಕ್ಕೆ ಸೂತ್ರದಾರನಾಗಿರುವ ಅಧಿಕಾರ ಹೊಂದಿದೆ. ಕೆಲವೊಂದು ವಿಷಯಗಳ ನಿರ್ಣಯ ಕೈಗೊಳ್ಳುವರೇ ಆಡಳಿತಮಂಡಳಿ ಉಪವಿಧಿಗಳಲ್ಲಿ ಹೇಳಲಾದ ಉಪಸಮಿತಿಗಳಿಗೆ ಜವಾಬ್ದಾರಿ ನೀಡಬಹುದು

4) ಆಡಳಿತಮಂಡಳಿ ನಿರ್ಣಯಗಳು ದೈನಂದಿನ ಚಟುವಟಿಕೆಗಳನ್ನು ಕಾನೂನುˌ ನಿಯಮˌ ಉಪವಿಧಿಗನುಸಾರವಾಗಿ ಜ್ಯಾರಿ ನಿರ್ದೇಶನದ ಅಧಿಕಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗಿರುತ್ತದೆ

5) ಅಧ್ಯಕ್ಷರು ಸಂಸ್ಥೆಯ ಸರ್ವಕಾರ್ಯಗಳನ್ನು ಗಮನಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚೌಕಟ್ಟಿನೊಳಗಡೆ ಮಾರ್ಗದರ್ಶನ ನೀಡುವ ಸರ್ವ ಅಧಿಕಾರವನ್ನು ಹೊಂದಿರುತ್ತಾರೆ.

ಇಂದು ಸಾಮಾನ್ಯವಾಗಿ ಆಡಳಿತಮಂಡಳಿಗಳು ಸದಸ್ಯರಿಂದ ಚುನಾಯಿಸಲ್ಪಟ್ಟರೂ ರಾಜಕೀಯ ಪಕ್ಷಗಳ ಅಥವಾ ಕೆಲವು ಸಂಘಟನೆಗಳ ಹಿನ್ನಲೆಯ ಪ್ರಾತಿನಿಧ್ಯದಿಂದ ಕೂಡಿರುತ್ತದೆ. ಈ ರೀತಿಯ ಆಯ್ಕೆ ಇಂದು ಸರ್ವೇ ಸಾಮಾನ್ಯ ವಿಷಯˌ ಒಪ್ಪಿಕೊಳ್ಳೋಣ. ಅಲ್ಲಿಗೆ ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು.

ಇಂತಹ ಸಂಘಟನೆಗಳ ಪ್ರಮುಖರಿಗೆ ಸಹಕಾರಿ ಸಂಘಗಳ ಆಡಳಿತದ ಆಳವಾದ ಅರಿವು ಖಂಡಿತ ಇರಲಾರದು.ಆಡಳಿತದ ಸಂಪೂರ್ಣಅರಿವಿಲ್ಲದ
ಪ್ರಮುಖರು ಸಹಕಾರ ಸಂಘಗಳ ಆಡಳಿತಾತ್ಮಕ  ನಿರ್ಣಯಗಳಲ್ಲಿ ಆಡಳಿತ ಮಂಡಳಿಯ ಬಹುಸಂಖ್ಯೆಯ ಸದಸ್ಯರಿಗೆ ಸಮ್ಮತಿ ಇಲ್ಲದೇ ಇದ್ದರೂ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲಂತಹ ವಿಷಯಗಳಿಗೆ ಒತ್ತಡಹೇರುವುದು ಸಾಧುವೇ? ಸಮಂಜಸವೇ?

ಬರಹ : ರಾಧಾಕೃಷ್ಣ ಕೋಟೆ

ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

2 hours ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

9 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

16 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

2 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

2 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

2 days ago