ಸುಳ್ಯ : ಪ್ರಕೃತಿಯೇ ನಮಗೆ ಗುರು .ಆದರಿಂದ ನಾವು ಅನೇಕ ಪಾಠಕಲಿಯಬಹುದು.ಕಾಗೆ ಆಹಾರ ಕಂಡೊಡನೆ ತನ್ನೆಲ್ಲ ಬಳಗವನ್ನು ಕರೆಯುವ ಸಂಘಟನೆಯ ಪಾಠ . ಇರುವೆಯಿಂದ ಶಿಸ್ತು. ನಾಯಿಂದ ನಿಷ್ಠೆ ಹೀಗೆ ಹತ್ತಾರು ಮೌಲ್ಯಗಳು ಪ್ರಕೃತಿ ನೀಡುತ್ತಿದೆ . ಜಗತ್ತಿಗೆ ವೇದ, ಯೋಗ, ಜ್ಞಾನ, ತಂತ್ರಜ್ಞಾನವನ್ನು ಪರಿಚಯಿಸಿದ ದೇಶ ಭಾರತ ಎಂದು ಮಂಗಳೂರು ವಿಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ರಾಜೇಶ್ ಯಂ. ತಿಳಿಸಿದರು.
ಅವರು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸುಳ್ಯ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ನಡೆದ ಶ್ರೀಗುರು ಪೂಜಾ ಉತ್ಸವದಲ್ಲಿ ಬೌದ್ಧಿಕ್ ನೀಡಿದರು.
ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ವಿ.ದಾಮೋದರ ಗೌಡ ವಹಿಸಿ, ವಿವೇಕವಿಲ್ಲದ ಜ್ಞಾನ ಸಮಾಜಕ್ಕೆ ಅಪಾಯಕಾರಿ ಹೆಚ್ಚು ಹೆಚ್ಚು ಕಲಿತಂತೆ ನಮ್ಮಲ್ಲಿ ಆಂತರಿಕ ಪರಿವರ್ತನೆಯಾಗಿ ಕಲಿತ ವಿದ್ಯೆ ಸಾರ್ಥಕಗೊಳ್ಳಬೇಕು. ಗುರು ಪೂರ್ಣಿಮೆ ಗುರು ಶಿಷ್ಯರ ಅನುಸಂಧಾನ ಎಂದರು.
ಸುಳ್ಯ ತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ವೇದಿಕೆಯಲ್ಲಿದ್ದರು. ನೂರಾರು ಸ್ವಯಂಸೇವಕರು ಭಾಗವಹಿಸಿ ಗುರುವಂದನೆ ಸಲ್ಲಿಸಿದರು. ಸತೀಶ ಕಾಟೂರು, ರಾಜೇಶ್ ಮೇನಾಲ, ಸುದರ್ಶನ ಸೂರ್ತಿಲ ಮೊದಲಾದವರು ಸಹಕರಿಸಿದರು.
ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…
ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…
https://youtu.be/_3oJulDTrjI?si=aPComSJYcu2B1sEJ
https://youtu.be/Ib0MXjaQy6I?si=OmzjryKVT7d-aHdZ