ಸುಳ್ಯ : ಪ್ರಕೃತಿಯೇ ನಮಗೆ ಗುರು .ಆದರಿಂದ ನಾವು ಅನೇಕ ಪಾಠಕಲಿಯಬಹುದು.ಕಾಗೆ ಆಹಾರ ಕಂಡೊಡನೆ ತನ್ನೆಲ್ಲ ಬಳಗವನ್ನು ಕರೆಯುವ ಸಂಘಟನೆಯ ಪಾಠ . ಇರುವೆಯಿಂದ ಶಿಸ್ತು. ನಾಯಿಂದ ನಿಷ್ಠೆ ಹೀಗೆ ಹತ್ತಾರು ಮೌಲ್ಯಗಳು ಪ್ರಕೃತಿ ನೀಡುತ್ತಿದೆ . ಜಗತ್ತಿಗೆ ವೇದ, ಯೋಗ, ಜ್ಞಾನ, ತಂತ್ರಜ್ಞಾನವನ್ನು ಪರಿಚಯಿಸಿದ ದೇಶ ಭಾರತ ಎಂದು ಮಂಗಳೂರು ವಿಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ರಾಜೇಶ್ ಯಂ. ತಿಳಿಸಿದರು.
ಅವರು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸುಳ್ಯ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ನಡೆದ ಶ್ರೀಗುರು ಪೂಜಾ ಉತ್ಸವದಲ್ಲಿ ಬೌದ್ಧಿಕ್ ನೀಡಿದರು.
ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ವಿ.ದಾಮೋದರ ಗೌಡ ವಹಿಸಿ, ವಿವೇಕವಿಲ್ಲದ ಜ್ಞಾನ ಸಮಾಜಕ್ಕೆ ಅಪಾಯಕಾರಿ ಹೆಚ್ಚು ಹೆಚ್ಚು ಕಲಿತಂತೆ ನಮ್ಮಲ್ಲಿ ಆಂತರಿಕ ಪರಿವರ್ತನೆಯಾಗಿ ಕಲಿತ ವಿದ್ಯೆ ಸಾರ್ಥಕಗೊಳ್ಳಬೇಕು. ಗುರು ಪೂರ್ಣಿಮೆ ಗುರು ಶಿಷ್ಯರ ಅನುಸಂಧಾನ ಎಂದರು.
ಸುಳ್ಯ ತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ವೇದಿಕೆಯಲ್ಲಿದ್ದರು. ನೂರಾರು ಸ್ವಯಂಸೇವಕರು ಭಾಗವಹಿಸಿ ಗುರುವಂದನೆ ಸಲ್ಲಿಸಿದರು. ಸತೀಶ ಕಾಟೂರು, ರಾಜೇಶ್ ಮೇನಾಲ, ಸುದರ್ಶನ ಸೂರ್ತಿಲ ಮೊದಲಾದವರು ಸಹಕರಿಸಿದರು.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…