ಸುಳ್ಯ: ದೀಪಾವಳಿ ಎಂದರೆ ದೀಪಗಳ ಹಬ್ಬ ಎಂಬುದರ ಜೊತೆಗೆ ಶಾಫಿಂಗ್ ಹಬ್ಬವೂ ಹೌದು. ವಸ್ತ್ರ, ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳ ಖರೀದಿಗೆ ದೀಪಾವಳಿ ಸೂಕ್ತ ಸಮಯ. ಆದುದರಿಂದಲೇ ವ್ಯಾಪಾರ ಸಂಸ್ಥೆಗಳು, ಮಾರಾಟ ಮಳಿಗೆಗಳು ನವ ನವೀನ ವೈವಿಧ್ಯಮಯ ವಸ್ತುಗಳ ಶೇಖರಣೆಯೊಂದಿಗೆ, ಆಕರ್ಷಕ ದರ ಮತ್ತು ದರ ಕಡಿತದೊಂದಿಗೆ ಗ್ರಾಹಕರನ್ನು ಸೆಳೆಯುತ್ತವೆ. ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಇಲೆಕ್ಟ್ತಾನಿಕ್ಸ್ ಸಾಧನಗಳನ್ನು ಖರೀದಿಸುವ ಮನಸ್ಸು ಮಾಡಿದಲ್ಲಿ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಸತೀಶ್ ಕಾಟೂರು ಮಾಲಕತ್ವದ ‘ಶ್ರೀ ಇನ್ಫೋ’ಗೆ ಬರಬಹುದು.
ಹೊಸ ಹೊಸ ವಸ್ತುಗಳೊಂದಿಗೆ, ಆಕರ್ಷಕ ದರದಲ್ಲಿ ‘ಶ್ರೀ ಇನ್ಫೋ’ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ವಿವಿಧ ಕಂಪೆನಿಗಳ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಗಳು, ಸಿಸಿ ಕ್ಯಾಮರಾ, ಇನ್ವರ್ಟರ್ ಗಳು, ಯುಪಿಎಸ್, ಬ್ಯಾಟರಿಗಳು, ಟಿವಿ ಮತ್ತು ಮಲ್ಟಿ ಮೀಡಿಯ ಸಿಸ್ಟಂಗಳು ಮಳಿಗೆಯಲ್ಲಿ ಗ್ರಾಹಕರನ್ನು ಕಾಯುತಿದೆ. ದೀಪಾವಳಿ ಪ್ರಯುಕ್ತ ಮಾರಾಟ ಮೆಗಾ ಮೇಳವನ್ನು ಹಮ್ಮಿಕೊಂಡಿದ್ದು ಶೆ.15 ರಿಂದ ಶೆ.20 ರಷ್ಟು ದರ ಕಡಿತ ಮಾಡಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಅಕರ್ಷಕ ಗಿಪ್ಟ್ ಗಳನ್ನೂ ನೀಡಲಾಗುತ್ತದೆ. ಹೆಚ್.ಪಿ, ಡೆಲ್, ಆಸಸ್ ಮತ್ತಿತರ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಅಲ್ಲದೆ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಸರ್ವೀಸ್, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಸರ್ವೀಸ್ ಕೂಡ ನೀಡಲಾಗುತ್ತದೆ. ನವೆಂಬರ್ ತಿಂಗಳ ಕೊನೆಯವರೆಗೆ ಮೆಗಾ ಮೇಳ ಮುಂದುವರಿಯಲಿದೆ ಎಂದು ಸತೀಶ್ ಕಾಟೂರು ತಿಳಿಸಿದ್ದಾರೆ. ‘ಶ್ರೀ ಇನ್ಫೋ’ ಸಂಸ್ಥೆ ಜಾಲ್ಸೂರಿನಲ್ಲಿಯೂ ಕಾರ್ಯಾಚರಿಸುತ್ತಿದ್ದು ಇಲ್ಲಿ ವೈವಿಧ್ಯಮಯ ಟಿವಿ ಮತ್ತು ಮಲ್ಟಿ ಮೀಡಿಯಾ ಸಿಸ್ಟಂಗಳು ಹಾಗು ಆಕರ್ಷಕ ಮೊಬೈಲ್ ಗಳು ಆಕರ್ಷಕ ದರದಲ್ಲಿ ಲಭ್ಯವಿದೆ.
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…
ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…
ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…