ಮಡಿಕೇರಿ : ಭಾರತೀಯ ಸೇನೆಗೆ ಸೇರಲು ಮಡಿಕೇರಿಯಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಆರಂಭಿಸಿದ ಲಿಖಿತ ಪರೀಕ್ಷೆಯ ಉಚಿತ ಕಾರ್ಯಾಗಾರವನ್ನು ನಿವೃತ್ತ ಯೋಧರಾದ ಗಣೇಶ್ ಪೊನ್ನಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸೇನೆಗೆ ಸೇರಲು ಈಗಾಗಲೇ ಮೆಡಿಕಲ್ ಹಾಗೂ ಫಿಸಿಕಲ್ ವಿಭಾಗದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಘಟ್ಟ ಲಿಖಿತ ಪರೀಕ್ಷೆ ಎದುರಿಸುವುದಾಗಿದೆ. ಕುಶಾಲನಗರದ ನಿವೃತ್ತ ಯೋಧರಾದ ಜನಾರ್ಧನ್ ಅವರ ಪರಿಶ್ರಮದಿಂದ ಬಹಳಷ್ಟು ಯುವಕರು ಇತ್ತೀಚಿನ ವರ್ಷಗಳಲ್ಲಿ ಆಯ್ಕೆಯಾಗುತ್ತಿರುವುದು ಸಂತಸದ ವಿಚಾರ. ಅಭ್ಯರ್ಥಿಗಳು ಸೇನೆಗೆ ಸೇರುವುದು ಅದೊಂದು ಬದುಕಿನ ಸೌಭಾಗ್ಯ ಎಂಬಂತೆ ಸ್ವೀಕರಿಸಿ ದೇಶ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕು, ಸತತವಾದ ಅಧ್ಯಯನ ಹಾಗೂ ಪರಿಶ್ರಮದಿಂದ ಸೇನಾ ಲಿಖಿತ ಪರೀಕ್ಷೆ ಎದುರಿಸಲು ಕರೆಕೊಟ್ಟರು.
ನಿವೃತ್ತ ಹವಾಲ್ದಾರ್ ಜನಾರ್ಧನ್ ಮಾತನಾಡಿ, ಸೇನೆಗೆ ಸೇರುವ ಮಕ್ಕಳಿಗೆ ನಾವು ಉಚಿತವಾದ ಸೇವೆ ಒದಗಿಸುತ್ತಿದ್ದೇವೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಜನವರಿ 16 ರ ವರೆಗೂ ಉಚಿತವಾಗಿ ಪ್ರತೀ ಶನಿವಾರ ಹಾಗೂ ಭಾನುವಾರಗಳಂದು ತರಗತಿ ಕೊಡಲಿದ್ದೇವೆ. ಅಭ್ಯರ್ಥಿಗಳು ಸಮಯ ಪಾಲನೆ ಮತ್ತು ಶಿಸ್ತಿನಿಂದ ಈ ಉಚಿತ ಶಿಬಿರದ ಸದುಪಯೋಗ ಪಡೆಯಲು ಕರೆಕೊಟ್ಟರು.
ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ನಾಯ್ಡು ಅವರು ಉಪಸ್ಥಿತರಿದ್ದರು.
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…