ಸುಳ್ಯ: ದಕ್ಷಿಣ ಭಾರತದ ಪ್ರತಿಷ್ಠಿತ ಸಮನ್ವಯ ವಿದ್ಯಾಸಮುಚ್ಚಯ ಜಾಮಿಯ್ಯ ಸಅದಿಯ್ಯ ಅರಬಿಯ್ಯ, ದೇಳಿ, ಕಾಸರಗೋಡು ಇದರ ಸುವರ್ಣ ಮಹೋತ್ಸವದ ಪ್ರಚಾರ ಪೂರ್ವಭಾವಿ ಸಭೆ ಹಾಗು ಸುಳ್ಯ ತಾಲೂಕು ಸಅದೀಸ್ ಸಂಗಮವು, ತಾಲೂಕು ಸಅದೀಸ್ ಅಧ್ಯಕ್ಷರಾದ ಯು.ಎಸ್. ಕುಞ್ಞಿಕ್ಕೋಯ ತಙಳ್ ಸಅದಿ ಯವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಸಮಾರಂಭವನ್ನು ಸಯ್ಯಿದ್ ತ್ವಾಹಿರ್ ತಙಳ್ ಸಅದಿ ಉದ್ಘಾಟಿಸಿದರು. ಅಬ್ದುಲ್ಲಾಹಿ ಸಅದಿ ಅಜ್ಜಾವರ ವಿಷಯ ಮಂಡಿಸಿ ಮಾತನಾಡಿದರು. ಸಅದಿಯ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ, ತಾಲೂಕಿನಾದ್ಯಂತ ಸಮ್ಮೇಳನ ಪ್ರಚಾರ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.
ಚರ್ಚೆಯಲ್ಲಿ ಸಅದೀಸ್ ನಾಯಕರಾದ ಜಿ.ಎಸ್.ಅಬ್ದುಲ್ ಕಾದರ್ ಸಅದಿ ಅಜ್ಜಾವರ, ಹನೀಫ್ ಸಅದಿ ಪಂಜಿಕ್ಕಲ್, ಅಬ್ದುರ್ರಹ್ಮಾನ್ ಸಅದಿ ಕನಕಮಜಲು, ನೌಫಲ್ ಸಅದಿ ಜಾಲ್ಸೂರ್, ಸಿದ್ದೀಖ್ ಸಅದಿ ಎಣ್ಮೂರ್, ಉಬೈದ್ ಸಅದಿ ಅಡ್ಕಾರ್, ಹಸನ್ ಸಅದಿ ಪೈಂಬೆಚ್ಚಾಲು, ಇರ್ಷಾದ್ ಸ ಅದಿ ಎಣ್ಮೂರ್, ಸಿರಾಜ್ ಸಅದಿ ಅಲೆಕ್ಕಾಡಿ ಮೊದಲಾದವರು ಭಾಗವಹಿಸಿದರು. ಅಬ್ದುಲ್ಲಾಹಿ ಸಅದಿ ಸ್ವಾಗತಿಸಿ, ವಂದಿಸಿದರು.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…
ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…
ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…