ಆಲಂಕಾರು: ಕಡಬ ಅಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಮಾಧವ ಸದನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ,ಸಾಹಿತಿ,ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ ” ವರ ಮಹಾಲಕ್ಷ್ಮಿ ವ್ರತದ ಮಹತ್ವ, ಅದರ ಪೌರಾಣಿಕ ಹಿನ್ನೆಲೆ ಹಾಗೂ ಆರೋಗ್ಯದ ಸಂಪತ್ತು ಪ್ರಾಪ್ತ ವಾಗುವ ಉಪಾಯಗಳು ಹಾಗೂ ದೇವಿ ಲಕ್ಷ್ಮಿ ಯ ಪಾತ್ರವನ್ನು ವರ್ಣಿಸಿದರಲ್ಲದೆ, ಲಕ್ಷ್ಮಿ ದೇವಿಯ ಹಲವಾರು ನಾಮ ಹಾಗೂ ಅರ್ಥವನ್ನೊಳ ಗೊಂಡ ಸ್ವರಚಿತ ಕವನವನ್ನು ಧಾರ್ಮಿಕ ಉಪಾನ್ಯಾಸಕ ರಾಗಿ ವಾಚಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮೈಸೂರಿನಲ್ಲಿರುವ ವಿಶ್ವಪ್ರಸಾದ್ ಆಳ್ವರವರು ಮಾಂಸಾಹಾರ ವರ್ಜ್ಯ ಮಾಡುವ ಉದ್ದೇಶ ಹಾಗೂ ಅದು ಹೇಗೆ ಜನಸಂಕುಲದ ಸಂಸ್ಕಾರವನ್ನು ಪರಿವರ್ತಿಸ ಬಲ್ಲದು ಎಂದು ವಿವರಿಸಿದರು.
ಅಧ್ಯಕ್ಷರಾಗಿ ಶಾಲಾ ಸಂಚಾಲಕ ಶ್ರೀಕೃಷ್ಣ ಕುಮಾರ್ ಇವರು ಶಿಸ್ತುಬದ್ಧ ನೀತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಸಂಸ್ಥೆ ನಿಗಾ ವಹಿಸುವುದಲ್ಲದೆ ಇಂತಹ ಹಬ್ಬ ಹರಿದಿನಗಳ ಆಚರಣೆ ಹಲವಾರು ವರ್ಷಗಳಿಂದಲೂ ನಡೆಸುತ್ತಿದ್ದು , ಉತ್ತಮ ಶಿಕ್ಷಣವೇ ತಮ್ಮ ಗುರಿ ಎಂದರು.
ಡಾ ಸುರೇಶ್ ಕೂಡೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆಶಾ ಎಸ್ ರೈ ಮತ್ತು ಚಂದ್ರಹಾಸ ನಿರೂಪಿಸಿದರು. ಭವಾನಿ ವಂದಿಸಿದರು.ವೇದಿಕೆಯಲ್ಲಿ ಅರ್ಚಕ ವೇದಮೂರ್ತಿ ಅನಂತರಾಮ ಶರವೂರು ಮತ್ತು ಕನಕಲತಾ ಉಪಸ್ಥಿತರಿದ್ದರು.
ಹಲಸಿನ ಕಾಯಿ ಬಳಸಿ ಸುಲಭವಾಗಿ ಮಾಡುವ ಕರಕರೆ ಬೋಂಡಾ – ಸಾಮಾನ್ಯ ಬೋಂಡಾ…
ಜೀವನವೆಂದರೆ ಕೇವಲ ಉಸಿರಾಟವಲ್ಲ; ಅದು ಅನುಭವಗಳ ಹೂಗುಚ್ಛ, ಭಾವನೆಗಳ ಹಬ್ಬ, ತತ್ತ್ವದ ಹಾದಿ.…
ಗೋವಾದಲ್ಲಿ ಗೇರು ತೋಟಗಳ ಮೇಲೆ ಕೋತಿಗಳ ದಾಳಿ ಆರಂಭವಾಗಿದೆ. ಇದು ಕರಾವಳಿ ಕರ್ನಾಟಕದ…
ಗ್ರಾಮೀಣ ಮಕ್ಕಳಿಗೆ ಮಣ್ಣಿನ ಪಾಠ, ಬದುಕಿನ ಶಿಕ್ಷಣ ಮತ್ತು ಅಂಕದ ಶಿಕ್ಷಣದ ನಡುವಿನ…
ಜಾಗತಿಕ ಕೋಕೋ ಬೆಲೆಗಳು ಒಂದು ವರ್ಷದ ಅವಧಿಯಲ್ಲಿ ಅರ್ಧದಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಪಶ್ಚಿಮ…
ಭಾರತ ಮತ್ತು ಬಾಂಗ್ಲಾದೇಶದಲ್ಲಿ ಮೂರು ನಿಪಾ ಪ್ರಕರಣಗಳು ದೃಢಪಟ್ಟಿದ್ದರೂ, ಜಾಗತಿಕ ಹಾಗೂ ಪ್ರಾದೇಶಿಕ…