ಆಲಂಕಾರು: ಕಡಬ ಅಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಮಾಧವ ಸದನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ,ಸಾಹಿತಿ,ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ ” ವರ ಮಹಾಲಕ್ಷ್ಮಿ ವ್ರತದ ಮಹತ್ವ, ಅದರ ಪೌರಾಣಿಕ ಹಿನ್ನೆಲೆ ಹಾಗೂ ಆರೋಗ್ಯದ ಸಂಪತ್ತು ಪ್ರಾಪ್ತ ವಾಗುವ ಉಪಾಯಗಳು ಹಾಗೂ ದೇವಿ ಲಕ್ಷ್ಮಿ ಯ ಪಾತ್ರವನ್ನು ವರ್ಣಿಸಿದರಲ್ಲದೆ, ಲಕ್ಷ್ಮಿ ದೇವಿಯ ಹಲವಾರು ನಾಮ ಹಾಗೂ ಅರ್ಥವನ್ನೊಳ ಗೊಂಡ ಸ್ವರಚಿತ ಕವನವನ್ನು ಧಾರ್ಮಿಕ ಉಪಾನ್ಯಾಸಕ ರಾಗಿ ವಾಚಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮೈಸೂರಿನಲ್ಲಿರುವ ವಿಶ್ವಪ್ರಸಾದ್ ಆಳ್ವರವರು ಮಾಂಸಾಹಾರ ವರ್ಜ್ಯ ಮಾಡುವ ಉದ್ದೇಶ ಹಾಗೂ ಅದು ಹೇಗೆ ಜನಸಂಕುಲದ ಸಂಸ್ಕಾರವನ್ನು ಪರಿವರ್ತಿಸ ಬಲ್ಲದು ಎಂದು ವಿವರಿಸಿದರು.
ಅಧ್ಯಕ್ಷರಾಗಿ ಶಾಲಾ ಸಂಚಾಲಕ ಶ್ರೀಕೃಷ್ಣ ಕುಮಾರ್ ಇವರು ಶಿಸ್ತುಬದ್ಧ ನೀತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಸಂಸ್ಥೆ ನಿಗಾ ವಹಿಸುವುದಲ್ಲದೆ ಇಂತಹ ಹಬ್ಬ ಹರಿದಿನಗಳ ಆಚರಣೆ ಹಲವಾರು ವರ್ಷಗಳಿಂದಲೂ ನಡೆಸುತ್ತಿದ್ದು , ಉತ್ತಮ ಶಿಕ್ಷಣವೇ ತಮ್ಮ ಗುರಿ ಎಂದರು.
ಡಾ ಸುರೇಶ್ ಕೂಡೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆಶಾ ಎಸ್ ರೈ ಮತ್ತು ಚಂದ್ರಹಾಸ ನಿರೂಪಿಸಿದರು. ಭವಾನಿ ವಂದಿಸಿದರು.ವೇದಿಕೆಯಲ್ಲಿ ಅರ್ಚಕ ವೇದಮೂರ್ತಿ ಅನಂತರಾಮ ಶರವೂರು ಮತ್ತು ಕನಕಲತಾ ಉಪಸ್ಥಿತರಿದ್ದರು.
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …
ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ…
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…