ಪುತ್ತೂರು: ಸಾಮಾಜಿಕ, ಧಾರ್ಮಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಉದ್ಯಮಿ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಪ್ರೇರಣೆಗೊಂಡ ಯುವಕರು ರಚಿಸಿದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಎ.ಆರ್ ವಾರಿಯರ್ಸ್ ಮೂಲಕ ಇತ್ತೀಚೆಗೆ ಮೃತಪಟ್ಟ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲರ ಸವಿನೆನಪುಗಳ ಜೊತೆಗೆ ಪ್ರತಿ ತಿಂಗಳು ಒಂದು ಅಶಕ್ತ ಕುಟುಂಬಕ್ಕೆ ಆಹಾರ ಧಾನ್ಯ ನೀಡುವ ಯೋಜನೆಯ ಪ್ರಥಮ ಹಂತವಾಗಿ ಕಳೆದ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಪುತ್ತೂರು ತಾಲೂಕಿನ ಬೀರಾವು ನಿವಾಸಿ ಹರೀಶ್ ಅವರ ಮನೆಗೆ ಆಹಾರ ಧಾನ್ಯಗಳನ್ನು ಎ.ಆರ್ ವಾರಿಯರ್ಸ್ ನ ಸದಸ್ಯರು ಒದಗಿಸಿದರು.
ಈ ಸಂದರ್ಭದಲ್ಲಿ ಪ್ರಜ್ವಲ್ ರೈ ಸವಣೂರು, ಧನು ಪಟ್ಲ ಕಲ್ಲೇಗ, ಕಮಲ್ ಕುಲಾಲ್, ಸುಜಿತ್ ಬಂಗೇರ ಸಂಟ್ಯಾರ್, ಪ್ರಜನ್ ರೈ ತೊಟ್ಲ, ಭರತ್ ಶೆಟ್ಟಿ, ರಾಕೇಶ್ ಈಶ್ವರಮಂಗಲ, ಮನೋಜ್ ಸಂಟ್ಯಾರ್ ಉಪಸ್ಥಿತರಿದ್ದರು. ಎ ಆರ್ ವಾರಿಯರ್ಸ್ ಬಳಗದ ಮೂಲಕ ಇತ್ತೀಚೆಗೆ ನೂರಾರು ಯುವಕರು ಸೇರಿ ನೆರೆ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಶ್ರಮದಾನ ಕಾರ್ಯ ಮಾಡಿತ್ತು.
ಒಂದು ತಿಂಗಳ ತಡದ ಬಳಿಕ ಮಲೆನಾಡು ಮತ್ತು ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಲ್ಲಿ…
ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್ ಬಳಸಿ ವಿಜ್ಞಾನಿಗಳು ವಸಡು…
ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…
ರಂಬುಟಾನ್ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…
ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…