Advertisement
ಅಂಕಣ

ಹೊರಡುವ ಮುನ್ನ

Share
ಪ್ರೀತಿಸಿದವಳ ಜೊತೆ ನಡೆದವಳು
ಎದೆ ಹಾಲನುಣಿಸಿದವಳ ಮರೆತಳು
ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು
ಇನಿಯನ ಪ್ರೀತಿಯೇ ಹೆಚ್ಚೆಂದಳು ||೧||
ಹೆತ್ತವರಿಗೆ ಮಗಳು ತೊರೆದ ನೋವು
ಸುತ್ತಣದವರ ಚುಚ್ಚು ಮಾತಿನ ನೋವು
ಕಾಣಲಿಲ್ಲ ಅವಳಿಗೆ ಹೆತ್ತೆವರ ಕಣ್ಣೀರು
ಅವಳಿಗೀಗ ಅವನ ಪ್ರೀತಿಯೇ ಎಳನೀರು ||೨||
ಜಗವ ಸುತ್ತಿಸಿದ ಪ್ರೇಮಿಯ ಕೈ ಖಾಲಿಯಾಗಿದೆ
ದುಡಿವ ಅನಿವಾರ್ಯತೆ ಬದುಕಲ್ಲಿ ಎದುರಾಗಿದೆ
ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಾಗಿದೆ
ಮನೆಯಲ್ಲಿ ಜಗಳವೀಗ ಶುರುವಾಗಿದೆ ||೩||
ಆಕೆಯೀಗ ತುಂಬು ಗರ್ಭವತಿ
ಅವನಿಗಿಲ್ಲ ಅವಳಲ್ಲಿ ಮೊದಲಿನಂತೆ ಪ್ರೀತಿ
ಅವಳ ಬಾಳಾಗಿದೆ ಇಂದು ಅವನ ಕೈಸೆರೆ
ಅವಳಿಗೀಗ ಬೇಕಿದೆ ಹೆತ್ತವರ ಒಲವಿನಾಸರೆ ||೪||
ಮನವಿನಿಂದು ತಪ್ಪಿಗಾಗಿ ಮರುಗುತಿದೆ
ಹೆತ್ತವರ ಆಸರೆಗಾಗಿ ಪರಿತಪಿಸುತ್ತಿದೆ
ಕ್ಷಮೆಕೋರಲು ಮನವಿಂದು ಕಾಯುತಿದೆ
ಮಾಡಿದ ತಪ್ಪು ಮನವನ್ನು ಚುಚ್ಚುತ್ತಿದೆ ||೫||
ಪ್ರೀತಿಸುವ ಮುನ್ನ ಯೋಚಿಸಬೇಕು ಕಂದಾ
ಹೆತ್ತವರ ಒಪ್ಪಿಸಿ ನಡೆದರೆ ಆನಂದಾ
ಮುತ್ತಿನ ಮತ್ತಿನಿಂದೆ ನೀ‌ ಹೊರಡಬೇಡ
ತುತ್ತನ್ನು ಕಡೆಗಣಿಸಿ ನಡೆಯಬೇಡ ||೬||
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

10 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago