Advertisement
ಅನುಕ್ರಮ

ಹ್ಯಾಪೀ ಫ್ರೆಂಡ್ ಶಿಫ್ ಡೇ……

Share

ಕಾಲೇಜು ಜೀವನದ ಆರಂಭದ ದಿನಗಳು. ಪ್ರತಿಯೊಂದು ಹೊಸತು. ಮನೆಬಿಟ್ಟು ಇರುವುದೂ ಮೊದಲ ಅನುಭವ. ಅತ್ತ ಅಲ್ಲಿಗೂ ಹೊಂದಿಕೊಳ್ಳಲಾಗದೇ ಅಪ್ಪ ಅಮ್ಮ ನ ನೆನಪುಗಳು ಒತ್ತರಿಸಿ ಬರುತ್ತಿದ್ದ ದಿನಗಳು . ಹಾಸ್ಟೆಲ್ ‌ನಲ್ಲಿ ಹೀಗಾದರೆ ತರಗತಿಯಲ್ಲಿ ಎಲ್ಲವೂ ಇಂಗ್ಲೀಷ್ ಮಯ.  ಒಟ್ಟಾರೆ ಒಂದು ರಜೆ ಸಿಕ್ಕಿದರೂ ಮನೆಗೆ ಓಡಿ ಬರುವ ತವಕ. ಹೀಗೆ ಒಂದು ಶನಿವಾರ ಮನೆಗೆ ಹೊರಡುವ ತಯಾರಿಯಲ್ಲಿ ಇದ್ದಾಗ ಈ ವಾರ ಯಾರು ಮನೆಗೆ ಹೋಗುವಂತಿಲ್ಲ ಎಂದು ಸೀನಿಯರ್ ಗಳ ಫರ್ಮಾನು ಹೊರಟಿತು. ಯಾಕೆ ಏನು ಎಂದು ಕೇಳಿದರೆ ಉತ್ತರವಿಲ್ಲ. ಇವತ್ತು ಹೋಗುವಂತಿಲ್ಲ ಎಂಬುದಷ್ಟೇ ಉತ್ತರ. ಸರಿ ಎಲ್ಲರೂ ಚಪ್ಪೆ ಮುಖ ಹಾಕಿ ಕೊಂಡು ಅವರವರ ರೂಮ್ ಸೇರಿಕೊಂಡಾಯಿತು.

ಎಂದಿನಂತೆ  ಮುಂಜಾನೆ ಎದ್ದಾಗ ಎಲ್ಲೆಲ್ಲೂ ಸಡಗರದ ವಾತಾವರಣ. ಊಟದ ಕೋಣೆಗೆ ಬಂದಾಗ ಹಿರಿಯ ವಿದ್ಯಾರ್ಥಿಗಳು ಎಲ್ಲರನ್ನೂ ಆತ್ಮೀಯ ವಾಗಿ ಸ್ವಾಗತಿಸಿದರು. ಎಲ್ಲರ ಕೈಗೂ ಒಂದು ಬ್ಯಾಂಡ್ ( ರಾಖಿ ಯಂತದ್ದು) ಅನ್ನು ಕಟ್ಟಿ ಪ್ರೀತಿ ಯಿಂದ “ಗೆಳೆಯರ ದಿನದ ಶುಭಾಶಯಗಳು “, .ಮುಂದಿನ ದಿನಗಳಲ್ಲಿ ನಾವೆಲ್ಲರೂ ಪ್ರೀತಿಯಿಂದ ಜೊತೆಯಲ್ಲಿ ಇರೋಣ ಎಂದು ಹಾರೈಸಿದರು. ‌
ಹೀಗೆ ಕೇಳಿಯೇ ಗೊತ್ತಿಲ್ಲದ ಆಚರಣೆಯೊಂದರ ಪರಿಚಯ ನಮಗಾಯಿತು. ಹಳ್ಳಿಗಳಲ್ಲಿ ಇಂದಿಗೂ ಈ ಆಚರಣೆಗಳೆಲ್ಲ ಇಲ್ಲ. ಆದರೆ ಇಂದು ಸಮೂಹ ಮಾಧ್ಯಮಗಳ ಪ್ರಚಾರಗಳಿಂದಾಗಿ ಯುವಜನತೆಯ ನೆಚ್ಚಿನ ದಿನವಾಗಿದೆ. ಈ ದಿನದ ನೆಪದಿಂದಾಗಿ ಹಲವರು ಗೆಳೆಯರಾಗಿದ್ದಾರೆ. ಅಗತ್ಯವಿದ್ದೊ ಇಲ್ಲದೆಯೋ ಶುಭಾಶಯಗಳ ವಿನಿಮಯದ ಅನಿವಾರ್ಯತೆ ತಲೆದೋರಿದೆ. ವಿದೇಶೀ ಕಂಪೆನಿಗಳ ಪ್ರಚಾರಗಳಿಂದ ಇಂದು ಪ್ರಪಂಚದೆಲ್ಲೆಡೆ ಗೆಳೆಯರ ದಿನವನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ.
1935 ರಲ್ಲಿ ಅಮೇರಿಕಾದಲ್ಲಿ ಈ ಆಚರಣೆ ಆರಂಭವಾಯಿತು. ಜುಲೈ 26 ರಂದು ಈ ಆಚರಣೆ ಆರಂಭವಾಯಿತು. ಆದರೆ ಭಾರತದಲ್ಲಿ   ಆಗಸ್ಟ್ ತಿಂಗಳ ಮೊದಲ ಆದಿತ್ಯವಾರದಂದು ಫ್ರೆಂಡ್ ಶಿಫ್ ಡೇ ಯನ್ನು ಸಂಭ್ರಮಿಸುತ್ತಾರೆ. ನಿಧಾನಕ್ಕೆ ಇದು ಪ್ರಪಂಚದೆಲ್ಲೆಡೆ  ಹಬ್ಬಿತು. ವಾಣಿಜ್ಯ ಉದ್ದೇಶದಿಂದ ಗ್ರೀಟಿಂಗ್ ಕಾರ್ಡ್ ಕಂಪೆನಿಗಳು ಜಾಸ್ತಿಯಾಗಿ ಪ್ರಚಾರ ಕೊಡಲಾರಂಭಿಸಿದರು. ಸೋಷಿಯಲ್‌ ಮೀಡಿಯಾಗಳ ಉಪಯೋಗ ಹೆಚ್ಚುತ್ತಿದ್ದಂತೆ ಗೆಳೆಯರ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ, ಅಜ್ಜಂದಿರ ದಿನ ಹೀಗೆ ಹತ್ತು ಹಲವು ದಿನಗಳ ಆಚರಣಿಗಳು ಚಾಲ್ತಿಗೆ ಬಂದವು. ಆದರೆ ಭಾರತೀಯರಾದ ನಮಗೆ ಪ್ರತಿ ದಿನವೂ ಹಬ್ಬವೇ, ಯಾವಾಗಲೂ  ಆಚರಣೆಗಳೇ. ಹಿರಿಯರನ್ನು ಗೌರವಿಸುವುದು ನಮ್ಮ ರಕ್ತ ದಲ್ಲೇ ಬಂದಿದೆ. ಅದಕ್ಕೊಂದು ದಿನ ಬೇಕಾಗಿಲ್ಲ. ಗೆಳೆತನವೆಂಬುದು ಒಂದು ಕಾರ್ಡ್,ಗಿಪ್ಟ್ ಕೊಟ್ಟು ಪಡೆಯುವಂತಹುದಲ್ಲ. ನಮ್ಮಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕಷ್ಟಕರ ಸಂಧರ್ಭದಲ್ಲಿ ಜೊತೆಯಾಗುವ ಗೆಳೆಯರಿದ್ದಾರೆ. ಅವರ ಮಧ್ಯದಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳಿಗೆ ಅವಕಾಶವಿಲ್ಲ. ನಂಬಿಕೆ, ಪ್ರೀತಿ, ವಿಶ್ವಾಸಗಳಿಗಷ್ಟೇ ಬೆಲೆ. ನಿಜವಾದ ಗೆಳೆತನವು ಮೌನವನ್ನು, ಮಾತನ್ನು, ಪ್ರೀತಿ ಯನ್ನು, ಜಗಳವನ್ನು ಸಮಾನವಾಗಿ ಸ್ವೀಕರಿಸುವ ಸೌಜನ್ಯ ವನ್ನು ಉಳಿಸಿಕೊಳ್ಳುತ್ತದೆ. ಎಷ್ಟೋ ವರ್ಷಗಳು ಸಂಪರ್ಕ ದಲ್ಲಿ ಇಲ್ಲದಿದ್ದರೂ  ಭೇಟಿಯಾದಾಗ  ಅದೇ ಬಾಲ್ಯ ದ ಒಡನಾಟವೇ. ಯಾವುದೇ ಹಮ್ಮುಬಿಮ್ಮುಗಳಿಗೆ ಆಸ್ಪದ ಇಲ್ಲವೇ ಇಲ್ಲ. ಅಲ್ಲಿ ಗೆಳೆತನ ದ ಮಾತುಗಳು ಮಾತ್ರ. ಗೆಳೆಯರ ದಿನದ ನೆಪದಲ್ಲಿ ಎಲ್ಲರೂ ನೆನಪಾದರು. “ಹ್ಯಾಪಿ ಪ್ರೆಂಡ್ ಶಿಪ್ ಡೇ.”
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೀಟನಾಶಕವೇ ರೈತರ ಜೀವಕ್ಕೆ ಕಂಟಕ…? ರಾಜಸ್ಥಾನದಲ್ಲಿ 2 ವರ್ಷದಲ್ಲಿ 535 ರೈತರ ಸಾವು – ಬೆಚ್ಚಿಬೀಳಿಸಿದ ವರದಿ..!

ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…

20 minutes ago

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…

2 hours ago

ಹವಾಮಾನ ವರದಿ | 07.06.2026 | ಜೂನ್ 8ರಿಂದ ರಾಜ್ಯದಲ್ಲಿ ಮುಂಗಾರು ಚುರುಕು| ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…

8 hours ago

“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ

ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…

23 hours ago

ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ

ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್‌ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…

23 hours ago

ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…

1 day ago