Advertisement
ಕೃಷಿ

150 ರೂಪಾಯಿ ದಾಟಿದ ರಬ್ಬರ್ ಧಾರಣೆ

Share

ಸುಳ್ಯ: ಅನೇಕ ಸಮಯಗಳ ಬಳಿಕ ರಬ್ಬರ್ ಧಾರಣೆ 150 ರೂಪಾಯಿ ದಾಟಿದೆ. ಕಳೆದ ವಾರ 145 ರೂಪಾಯಿ ಆಸುಪಾಸಿನಲ್ಲಿ ಇದ್ದ ಧಾರಣೆ ಗುರುವಾರದಂದು 151 ರೂಪಾಯಿಗೆ ತಲಪಿದೆ.

ಕಳೆದ ವರ್ಷದ ಕೇರಳದಲ್ಲಿ ಉಂಟಾದ ವಾತಾವರಣದ ಪ್ರತಿಕೂಲ ಪರಿಸ್ಥಿತಿಯಿಂದ ಕೇರಳದಲ್ಲಿ ರಬ್ಬರ್ ಉತ್ಪಾದನೆಯಲ್ಲಿ  ಗಣನೀಯ ಇಳಿಕೆ ಕಂಡಿದ್ದರೆ ವಿದೇಶದಲ್ಲೂ ರಬ್ಬರ್ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ  ಧಾರಣೆ ಏರಿಕೆಯಾಗುತ್ತಿದೆ. ಇದೀಗ ಮಳೆಗಾಲ ಆರಂಭವಾದ ಬಳಿಕ ರಬ್ಬರ್ ಗೆ ಪ್ಲಾಸ್ಟಿಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಂತರ ಟ್ಯಾಪಿಂಗ್ ಆರಂಭವಾಗುವ ಹೊತ್ತಿಗೆ ಧಾರಣೆಯಲ್ಲಿ  ಇಳಿಕೆ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

2018 ರಲ್ಲಿ ವಿಶ್ವದ ಬಳಕೆಯಲ್ಲಿ ಶೇ 40 ರಷ್ಟು ರಬ್ಬರ್ ಬಳಕೆ ಇತ್ತು. ಇದೀಗ ಬಹುಪಾಲು ರಬ್ಬರ್ ಬಳಕೆ ಹೊಂದಿರುವ ಚೀನಾದ ಬಳಕೆ 2019 ರಲ್ಲಿ 3.2 ಶೇಕಡದಿಂದ 5.85 ಮಿ.ಟಿ.ಗೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಥಮಿಕ ಅಂದಾಜು ಪ್ರಕಾರ, ಭಾರತವು 2018 ರ ಅವಧಿಯಲ್ಲಿ 1.218 ಮೆಟ್ರಿಕ್ ಟನ್ ರಬ್ಬರ್ ಬಳಕೆ ಮಾಡಿದ್ದರೆ ಈ ವರ್ಷ ಶೇ 12.6 ರಷ್ಟು ಏರಿಕೆಯಾಗಿದೆ.
2010-12ರ ಅವಧಿಯಲ್ಲಿ ರಬ್ಬರ್ ಬೆಲೆಯಲ್ಲಿ ಗಣನೀಯ ಏರಿಕೆ ಇದೆ ಎಂದು ಈ ಹಿಂದೆ ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿ ಈಗಿನ ಧಾರಣೆ ಅದಕ್ಕೆ ಪೂರಕವಾಗುತ್ತಿದೆ.
ಆಗಸ್ಟ್ 2018 ರಲ್ಲಿ ಕೇರಳದ ಪ್ರವಾಹದಿಂದಾಗಿ ಈ ಪ್ರವಾಹವು ಮಣ್ಣಿನ ಗುಣಮಟ್ಟವನ್ನು ಕುಸಿದಿದೆ. ಹೀಗಾಗಿ ಇಳುವರಿಯಲ್ಲೂ ಕೊರತೆ ಕಂಡಿದೆ. ಇದೆಲ್ಲಾ ಸದ್ಯ ಬೆಲೆ ಏರಿಕೆಗೆ ಕಾರಣವಾಗಿದೆ.

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…

1 day ago

ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…

2 days ago

ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…

2 days ago

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

3 days ago

ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…

4 days ago

2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್

2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…

4 days ago