ಮುಂಬಯಿ: ದೇಶದ ಆರ್ಥಿಕ ಬೆಳವಣಿಗೆಯು 2021 ರ ವೇಳೆಗೆ ಚೇತರಿಸಿಕೊಳ್ಳಲಿದೆ. ಆ ಬಳಿಕ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಸೆಂಟ್ರಮ್ ಬ್ರೋಕರೇಜ್ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಹಣಕಾಸು ಸೇವೆಗಳ ಸೆಂಟ್ರಮ್ ಬ್ರೋಕರೇಜ್ ಸಂಸ್ಥೆಯ ಈ ಅಧ್ಯಯನ ವರದಿಯ ಪ್ರಕಾರ ಕಳೆದ 20 ವರ್ಷಗಳಲ್ಲಿ ಪ್ರಸ್ತುತ ಕುಸಿತವು ಅತ್ಯಂತ ತೀವ್ರವಾಗಿದೆ. ಇದರ ಪರಿಣಾಮ ಗ್ರಾಮೀಣ ಮತ್ತು ನಗರ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಇದು 2021 ರ ಮೊದಲ ಅಥವಾ ಎರಡನೇ ತ್ರೈಮಾಸಿಕದ ವೇಳೆಗೆ ಆರ್ಥಿಕ ಬೆಳವಣಿಗೆಯು ಮರುಕಳಿಸುತ್ತದೆ ಎಂದು ಹೇಳಿದೆ. ಈ ಹಿಂಜರಿತಕ್ಕೆ ನೋಟ್ ರದ್ದತಿ ಹಾಗೂ ಜಿಎಸ್ಟಿ ಏಕಕಾಲದಲ್ಲಿ ದೇಶವು ಎದುರಿಸಿದಾಗ ಉಂಟಾದ ಆಘಾತಗಳ ಪರಿಣಾಮವಾಗಿ ಆರ್ಥಿಕ ಹಿಂಜರಿತವುಂಟಾಗಿದೆ ಎಂದು ಬ್ರೋಕರೇಜ್ ತಿಳಿಸಿದೆ. 3 ವರ್ಷಗಳಲ್ಲಿ ಸತತ 3 ಆಘಾತಗಳನ್ನು ದೇಶವು ತಾಳಿಕೊಂಡಿತು. ಈಗ ಸರಕಾರದ ಮಧ್ಯಪ್ರವೇಶದಿಂದ ನಿಧಾನವಾಗಿ ಸರಿಯಾಗುತ್ತಿದೆ. 2021 ರ ಹಣಕಾಸು ವರ್ಷದ ಮೊದಲನೆ ಹಾಗೂ ಎರಡನೆ ತ್ರೈಮಾಸಿಕದಲ್ಲಿ ಆರ್ಥಿಕತೆಯು ಸಹಜತೆಯತ್ತ ಮರಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…
ಗ್ಯಾರಂಟಿ(Guarantee) ಘೋಷಣೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಒಂದು ವರ್ಷ…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…
ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…
ಮೇ 24ರಿಂದ ರಾಜ್ಯದಾದ್ಯಂತ ಮಳೆಯ ಪ್ರಮಾಣವೂ ಕಡಿಮೆಯಾಗುವ ಮುನ್ಸೂಚನೆ ಇದೆ. ಜೂನ್ ಮೊದಲ…
ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್…