1998 OR2 ಎಂಬ ಹೆಸರಿನ ಕ್ಷುದ್ರ ಗ್ರಹವೊಂದು ಭಾರತೀಯ ಕಾಲಮಾನ ಪ್ರಕಾರ ಈ ಮಧ್ಯಾಹ್ನ 3.26 ಕ್ಕೆ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ.
ವಿಶ್ವದಾದ್ಯಂತ ಕೊರೊನಾ ಸೋಂಕು ಬಾಧಿಸಿರುವ ಈ ಸಮಯದಲ್ಲಿ ವಿಚಿತ್ರವೆಂದರೆ ಮುಖಕವಚ ಧರಿಸಿದಂತೆ ದೂರದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಕ್ಷುದ್ರ ಗ್ರಹ ಭೂಕಕ್ಷೆಗಿಂತ 6.2 ಮಿಲಿಯನ್ ಕಿ.ಮೀ.ದೂರದಲ್ಲಿ ಹಾದುಹೋಗಲಿದ್ದು , ಭೂಮಿಗೆ ಯಾವುದೇ ಹಾನಿ ತಂದೊಡ್ಡದು ಎಂದು ನಾಸಾ ತಿಳಿಸಿದೆ.
ಎವರೆಸ್ಟ್ ಶಿಖರದಷ್ಟು ಅಂದರೆ ಹೆಚ್ಚು ಕಡಿಮೆ 1.5 ಕಿ.ಮೀ.ನಷ್ಟು ದೊಡ್ಡದಾದ ಈ ಕ್ಷುದ್ರ ಗ್ರಹದ ಪಥವನ್ನು ಅಮೇರಿಕಾದ ಬಾಹ್ಯಾಕಾಶದಿಂದ ಸಂಸ್ಥೆ – ನಾಸಾ ಅನೇಕ ದಿನಗಳಿಂದ ಗಮನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಕಕ್ಷೆಯ ಸಮೀಪ ಹಾದುಹೋಗುತ್ತಿರುವ ದೊಡ್ಡಮಟ್ಟಿನ ಕ್ಷುದ್ರ ಗ್ರಹ ಇದೆಂದು ಹೇಳಲಾಗುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಕ್ಷುದ್ರ ಗ್ರಹ ಪತನದಿಂದಾಗಿ ಡೈನೋಸಾರ್ ನಂತಹ ಬೃಹತ್ ಜೀವಿಗಳ ನಾಶ ಆಗಿರಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡಪ್ರಮಾಣದ ಕ್ಷುದ್ರ ಗ್ರಹ ಪತನವಾದರೆ ಅಣುಬಾಂಬಿಗಿಂತಲೂ ಅದಷ್ಟೋ ಅಧಿಕ ಪ್ರಮಾಣದ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮಾಹಿತಿ :
ಪಿ ಜಿ ಎಸ್ ಎನ್ ಪ್ರಸಾದ್
ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣಗಳಿವೆ. ಉತ್ತರ…
ರಾಜಕೀಯ ಎನ್ನುವುದು ಕೃಷಿ ಹಾಗೂ ಅಡಿಕೆ ಬೆಳೆಗಾರರ ವಿಚಾರದಲ್ಲಿ ಕೂಡಾ ಹೇಗೆ ಇರುತ್ತದೆ,…
ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ.…
ದಾವಣಗೆರೆ ಜಿಲ್ಲೆಯ 6 ತಾಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 197…
ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ…
ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…