1998 OR2 ಎಂಬ ಹೆಸರಿನ ಕ್ಷುದ್ರ ಗ್ರಹವೊಂದು ಭಾರತೀಯ ಕಾಲಮಾನ ಪ್ರಕಾರ ಈ ಮಧ್ಯಾಹ್ನ 3.26 ಕ್ಕೆ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ.
ವಿಶ್ವದಾದ್ಯಂತ ಕೊರೊನಾ ಸೋಂಕು ಬಾಧಿಸಿರುವ ಈ ಸಮಯದಲ್ಲಿ ವಿಚಿತ್ರವೆಂದರೆ ಮುಖಕವಚ ಧರಿಸಿದಂತೆ ದೂರದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಕ್ಷುದ್ರ ಗ್ರಹ ಭೂಕಕ್ಷೆಗಿಂತ 6.2 ಮಿಲಿಯನ್ ಕಿ.ಮೀ.ದೂರದಲ್ಲಿ ಹಾದುಹೋಗಲಿದ್ದು , ಭೂಮಿಗೆ ಯಾವುದೇ ಹಾನಿ ತಂದೊಡ್ಡದು ಎಂದು ನಾಸಾ ತಿಳಿಸಿದೆ.
ಎವರೆಸ್ಟ್ ಶಿಖರದಷ್ಟು ಅಂದರೆ ಹೆಚ್ಚು ಕಡಿಮೆ 1.5 ಕಿ.ಮೀ.ನಷ್ಟು ದೊಡ್ಡದಾದ ಈ ಕ್ಷುದ್ರ ಗ್ರಹದ ಪಥವನ್ನು ಅಮೇರಿಕಾದ ಬಾಹ್ಯಾಕಾಶದಿಂದ ಸಂಸ್ಥೆ – ನಾಸಾ ಅನೇಕ ದಿನಗಳಿಂದ ಗಮನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಕಕ್ಷೆಯ ಸಮೀಪ ಹಾದುಹೋಗುತ್ತಿರುವ ದೊಡ್ಡಮಟ್ಟಿನ ಕ್ಷುದ್ರ ಗ್ರಹ ಇದೆಂದು ಹೇಳಲಾಗುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಕ್ಷುದ್ರ ಗ್ರಹ ಪತನದಿಂದಾಗಿ ಡೈನೋಸಾರ್ ನಂತಹ ಬೃಹತ್ ಜೀವಿಗಳ ನಾಶ ಆಗಿರಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡಪ್ರಮಾಣದ ಕ್ಷುದ್ರ ಗ್ರಹ ಪತನವಾದರೆ ಅಣುಬಾಂಬಿಗಿಂತಲೂ ಅದಷ್ಟೋ ಅಧಿಕ ಪ್ರಮಾಣದ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮಾಹಿತಿ :
ಪಿ ಜಿ ಎಸ್ ಎನ್ ಪ್ರಸಾದ್
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…