ಸ್ಕ್ರ್ಯಾಪ್ ಟೈರ್‌ ಹೆಸರಿನಲ್ಲಿ ಬಂದರಿಗೆ ಬಂದ ಅಡಿಕೆ ವಶಕ್ಕೆ ಪಡೆದ ಡಿಆರ್‌ಐ | 39.44 ಟನ್‌ ಅಡಿಕೆ ವಶಕ್ಕೆ | ಅಡಿಕೆ ಆಮದು ತಡೆಗೆ ಸತತ ಪ್ರಯತ್ನ |

October 27, 2023
4:25 PM
ಸ್ಕ್ರ್ಯಾಪ್ ಟೈರ್‌ ಹೆಸರಿನಲ್ಲಿ  ಅಕ್ರಮವಾಗಿ ಅಡಿಕೆ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಡಿಆರ್‌ಐ ಪತ್ತೆ ಮಾಡಿದೆ. ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ . 10 ಕಂಟೈನರ್ ಗಳಲ್ಲಿ ಒಟ್ಟು 39.44 ಟನ್ ಅಡಿಕೆ ಬರುತ್ತಿತ್ತು. ಇದೀಗ ಡಿಆರ್‌ಐ ಕಾರ್ಯಾಚರಣೆಯಿಂದ ಅಕ್ರಮವಾಗಿ ನಡೆಯುತ್ತಿದ್ದ ಅಡಿಕೆ ಸಾಗಾಟಕ್ಕೆ ತಡೆಯಾಗಿದೆ.

ಗುಜರಾತ್‌ನ ಮುಂದ್ರಾ ಬಂದರು ಮೂಲಕ ಆಗಮನವಾಗಿದ್ದ 39.44 ಟನ್ ಅಡಕೆಯನ್ನು(Arecanut) ಡಿಆರ್‌ಐ ವಶಪಡಿಸಿಕೊಂಡಿದೆ. ಸ್ಕ್ರ್ಯಾಪ್ ಟೈರ್‌ ಹೆಸರಿನಲ್ಲಿ ಅಕ್ರಮವಾಗಿ ಅಡಿಕೆ ಸಾಗಿಸಲಾಗುತ್ತಿತ್ತು. 10 ಕಂಟೈನರ್ ಗಳಲ್ಲಿ ಒಟ್ಟು 39.44 ಟನ್ ಅಡಿಕೆ ಬರುತ್ತಿತ್ತು. ಇದನ್ನು ಡಿಆರ್‌ಐ ವಶಪಡಿಸಿಕೊಂಡಿದೆ. ಇದೀಗ ಅಡಿಕೆ ಅಕ್ರಮ ಸಾಗಾಟಕ್ಕೆ ಬ್ರೇಕ್‌ ಬೀಳುತ್ತಿದ್ದು, ಇದು ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಧಾರಣೆ ಏರಿಕೆಯ ನಿರೀಕ್ಷೆ ಇದೆ.

ಗುಜರಾತ್‌ ಮುಂದ್ರಾ ಬಂದರು ಮೂಲಕ  ಕಸ್ಟಮ್ಸ್ ಸುಂಕ ತಪ್ಪಿಸಿ ಅಡಿಕೆ ಕಳ್ಳಸಾಗಣೆ ಮಾಡುವ ಜಾಲವನ್ನು ಡಿಆರ್‌ಐ ಬೇಧಿಸಿದೆ. ಇದಕ್ಕೂ ಮುನ್ನ ಇದೇ ಬಂದರಿನಿಂದ ಇದೇ ಮಾದರಿಯಲ್ಲಿ ವಶಪಡಿಸಿಕೊಂಡ ಹಲವು ಪ್ರಕರಣಗಳು ನಡೆದಿದೆ. ಹೀಗಾಗಿ  ಕೇಂದ್ರ ಮತ್ತು ಗುಜರಾತ್‌ನ ಭದ್ರತಾ ಏಜೆನ್ಸಿಗಳು ಅಂತಹ ಅಂಶಗಳು ಮತ್ತು ಕಳ್ಳಸಾಗಾಣಿಕೆ ವಸ್ತುಗಳ ಮೇಲೆ, ಸಾಗಾಣಿಕೆದಾರರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸುತ್ತವೆ. ಆದ್ದರಿಂದ, ಇದೀಗ ಇನ್ನೊಂದು ಪ್ರಕರಣ ಪತ್ತೆಯಾಗಿದೆ.

ಮಾಹಿತಿಯ ಪ್ರಕಾರ, ದುಬೈನಿಂದ ವಡೋದರಾ ಸಂಸ್ಥೆಯು ಈ ಅಡಿಕೆಯನ್ನು ಬುಕಿಂಗ್‌ ಮಾಡಿದೆ. ಸ್ಕ್ರ್ಯಾಪ್ ಟೈರ್‌ಗಳ ಹೆಸರಿನಲ್ಲಿ ಅಕ್ರಮವಾಗಿ ಅಡಿಕೆಯನ್ನು ಸಾಗಿಸಲಾಗುತ್ತಿತ್ತು. ಇದೀಗ ಮತ್ತೊಂದು ಭಾರೀ ಪ್ರಮಾಣದ ಅಡಿಕೆಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

39.44 tonnes of Arecanuts were seized through Mundra port in Gujarat. Arecanuts were being transported illegally in the name of scrap tyres. A total of 39.44 tons of Arecanuts were coming in 10 containers. It has been seized by DRI.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ
March 14, 2026
2:43 PM
by: ಸಾಯಿಶೇಖರ್ ಕರಿಕಳ
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?
March 14, 2026
7:21 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
March 14, 2026
7:01 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror