ಪುತ್ತೂರು: ಪರಿಶುದ್ಧವಾದ ಪ್ರಾಮಾಣಿಕತೆಗೆ ಚಿನ್ನದ ನಾಣ್ಯಗಳ ಉಡುಗೊರೆ…!. ಇದು ಸಿಕ್ಕಿದ್ದು ಹೋಟೆಲ್ ಸಿಬ್ಬಂದಿಗೆ. ಈ ಕೊಡುಗೆ ನೀಡಿದ್ದು ಪುತ್ತೂರಿನ ಮುಳಿಯ ಜ್ಯವೆಲ್ಸ್ ನ ಕೇಶವ ಪ್ರಸಾದ್ ಮುಳಿಯ. ಈ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯೂ ಹೌದು.
ಪ್ರಾಮಾಣಿಕತೆಗೆ ಶುದ್ಧ-ಪರಿಶುದ್ಧ ಅಂತ ಇಲ್ಲ ನಿಜ. ಆದರೆ ಇದು ಪರಿಶುದ್ಧ ಎನ್ನುವುದು ಏಕೆಂದರೆ ಮೂರೂವರೆ ಪವನ್ ಚಿನ್ನದ ಸಂಗತಿ ಇದು. ಕಾರ್ಯಕ್ರಮವೊಂದರಲ್ಲಿ ಕೇಶವ ಪ್ರಸಾದ್ ಮುಳಿಯ ಚಿನ್ನದ ಬ್ರಾಸ್ ಲೆಟ್ ಕಳೆದುಹೋಗಿತ್ತು. ಅದು ಪುತ್ತೂರಿನ ಹೋಟೆಲ್ ಹರಿಪ್ರಸಾದ್ ನ ನೌಕರಿಯಲ್ಲಿರುವ ಸತೀಶ್ ಮತ್ತು ರಾಮಣ್ಣರವರಿಗೆ ಸಿಕ್ಕಿತು. ಅವರು ಆ ಚಿನ್ನವನ್ನು ಕಾರ್ಯಕ್ರಮ ನಡೆಸಿದ್ದ ಮನೆಯವರಿಗೆ ಒಪ್ಪಿಸಿದರು. ನಂತರ ಆ ಮನೆಯವರ ಮೂಲಕ ಬ್ರಾಸ್ ಲೆಟ್ ಕೇಶವ ಪ್ರಸಾದ್ ಮುಳಿಯ ಅವರ ಕೈಸೇರಿತು. ಈ “ಚಿನ್ನದ” ಕತೆ ಹೀಗಿದೆ…
ಆ ಭಾನುವಾರ ದಿನಪೂರ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಳಿಯ ಜ್ಯವೆಲ್ಸ್ ನ ಕೇಶವ ಪ್ರಸಾದ್ ಮುಳಿಯ ಮನೆಗೆ ತಲಪುವಾಗ ರಾತ್ರಿಯಾಗಿತ್ತು. ಮರುದಿನ ಅರ್ಧ ತೋಳಿನ ಅಂಗಿ ಹಾಕಿದಾಗಲೇ ಬ್ರಾಸ್ಲೆಟ್ ಕಳೆದುಹೋಗಿರುವ ಸಂಗತಿ ಬೆಳಕಿಗೆ ಬಂತು. ಯಾವಾಗ ಕಳೆದುಕೊಂಡದ್ದು ಎಂದೇ ತಿಳಿದಿಲ್ಲ. ಸಿ.ಸಿ ಕೆಮರಾ, ಹೋದ ಸಮಾರಂಭಗಳೆಲ್ಲೆಲ್ಲಾ ವಿಚಾರಿಸಿದರೂ ಏನೂ ಸುಳಿವು ಸಿಗಲಿಲ್ಲ. ವಿಚಾರಿಸಲು ಕೊನೆಯದಾಗಿ ಬಾಕಿಯಾದ್ದು ವಿಟ್ಲದ ಡಾ. ರಾಮ್ಮೋಹನ ಅವರ ಮಗ ಡಾ.ಅರವಿಂದ್ ಅವರ ಬೆನಕದ ಗೃಹಪ್ರವೇಶದ ಕಾರ್ಯಕ್ರಮ. ಅಂತೂ ತನ್ನ ಗೆಳೆಯನಾದ ಅರವಿಂದ ಅವರಿಗೆ ಕೇಶವ ಪ್ರಸಾದ್ ಮುಳಿಯ ಅವರು ಫೋನ್ ಮಾಡಿದರು. ತಕ್ಷಣವೇ ತಮಗೆ ಲಭ್ಯವಾಗಿರುವ ಚಿನ್ನದ ಸರಪಳಿಯ ಫೋಟೊ ವ್ಯಾಟ್ಸಪ್ ಮೂಲಕ ಕಳುಹಿಸಿದಾಗ ಖಚಿತವಾಯಿತು.
ಬಳಿಕ ವಿಚಾರಿಸಿದಾಗ ಊಟ ಮಾಡುತ್ತಿದ್ದ ಜಾಗದಲ್ಲಿ ಆ ದಿನದ ಕ್ಯಾಟರಿಂಗ್ ವ್ಯವಸ್ಥೆ ವಹಿಸಿಕೊಂಡ ಹೋಟೆಲ್ ಹರಿಪ್ರಸಾದ್ ನಲ್ಲಿ ನೌಕರಿಯಲ್ಲಿರುವ ಸತೀಶ್ ಮತ್ತು ರಾಮಣ್ಣ ಅವರಿಗೆ ಸಿಕ್ಕಿತು ಅವರು ನಮಗೆ ಹಸ್ತಾಂತರಿಸಿದರು ಎಂದರು. ಬಡಿಸುವ ಕೌಂಟರ್ ಪಕ್ಕ ಹೊಳೆಯತ್ತಿದೆಯಲ್ಲಾ ಎಂದು ರಾಮಣ್ಣ ಅವರಿಗೆ ಅನಿಸಿತು. ಸತೀಶ್ ಅವರು ಅದನ್ನು ಕೈಯಿಂದ ಎತ್ತಿದಾಗ ಅದು ಬ್ರಾಸ್ಲೆಟ್ ಎಂದು ತಿಳಿಯಿತು ಎಂದು ತಿಳಿಸಿದರು. ಇವರ ಪ್ರಾಮಾಣಿಕತೆಗೆ ತುಂಬು ಹೃದಯದ ಧನ್ಯವಾದ ಹೇಳಲಾಯಿತು. ಈಗ ಉಡುಗೊರೆಯಾಗಿ ಚಿನ್ನದ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು.
( ನಿರೂಪಣೆ : ಕೃಷ್ಣವೇಣಿ ಪ್ರಸಾದ್ ಮುಳಿಯ)
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…