The Rural Mirror ಕಾಳಜಿ

#SwachhBharat | ತಿಪ್ಪೆಕಾಳಿ ರಂಗನಾಥ್ ನೈಜ ಸ್ವಚ್ಛತಾ ಸೇನಾನಿ | ಗಾಂಧಿಯ ಕನಸು ನನಸು ಮಾಡಲು ಟೊಂಕಕಟ್ಟಿ ನಿಂತ ವ್ಯಾಪಾರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೈಸೂರಿನ ತಲಕಾಡಿನ ಗ್ರಾಮದಲ್ಲಿರುವ ತಿಪ್ಪೆಕಾಳಿ ರಂಗನಾಥ್‌ ತಾವು ಸ್ವಯಂ ಪ್ರೇರಣೆಯಿಂದ ಒಬ್ಬಂಟಿಯಾಗಿ ಸ್ವಚ್ಛತಾ ಸೇವೆ ನಡೆಸುತ್ತಾ ಬಂದಿದ್ದಾರೆ. 54 ವರ್ಷದ ತಿಪ್ಪೆಕಾಳಿ ರಂಗನಾಥ್ ನಿಜವಾದ ಸ್ವಚ್ಛತಾ ಸೇನಾನಿ. ಗ್ರಾಮದಲ್ಲಿ ತನ್ನದೇ ಆದ ನ್ಯಾಯಬೆಲೆ ಅಂಗಡಿ ಹೊಂದಿರುವ ಅವರು, ಪ್ರತಿ ಶನಿವಾರದ ದಿನ ತನ್ನ ಸ್ವಚ್ಛತಾ ರಥದ ಮೂಲಕ ಕ್ಲೀನ್‌ ಮಾಡುತ್ತಾ ಬಂದಿದ್ದಾರೆ. ಹೀಗೆ ಇವ್ರ ಸ್ವಚ್ಛತಾ ಅಭಿಯಾನವು ಈಗ 24 ವರ್ಷಗಳನ್ನ ಪೂರೈಸಿದೆ.

Advertisement

ಸ್ವಚ್ಛತೆಯೇ ಸೇವೆ..! : ಸ್ವಚ್ಛ ಭಾರತ ಯೋಜನೆ ಜಾರಿಗೂ ಮುನ್ನವೇ, ಗಾಂಧೀಜಿ #Gandhiji ಅವರ ಕನಸನ್ನು ನನಸು ಮಾಡಲು ಟೊಂಕಕಟ್ಟಿ ನಿಂತವರು ಈ ತಿಪ್ಪೆಕಾಳಿ ರಂಗನಾಥ್‌ ಅವರು. ತಮ್ಮ ಬೈಕ್‌ಗೆ ಟ್ರಾಲಿಯನ್ನ ಕಟ್ಟಿಕೊಂಡು ಓಡಾಡುವ ಇವ್ರು ಆ ಮೂಲಕ ತಾವು ಸ್ವಚ್ಛ ಮಾಡಿದ ಬಳಿಕ ಸಂಗ್ರಹವಾಗುವ ಕಸ ಕಡ್ಡಿಗಳನ್ನ ಅದರ ಸಹಾಯದಿಂದ ಕೊಂಡೊಯ್ದು ವಿಲೇವಾರಿ ಮಾಡುತ್ತಾರೆ. ಶಾಲಾ ಶೌಚಾಲಯದಿಂದ ಹಿಡಿದು ಚರಂಡಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವರು ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾರೆ.

ಪ್ರಶಸ್ತಿಗಳ ಗೌರವ : ಮೈಸೂರು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಬೆಂಗಳೂರು ಇವರಿಂದ ಗೌರವ ಡಾಕ್ಟರೇಟ್ ನೀಡಿ ತಿಪ್ಪೆಕಾಳಿ ರಂಗನಾಥ್‌ ಅವರನ್ನ ಗೌರವಿಸಲಾಗಿದೆ. ಆರಂಭದಲ್ಲಿ ರಂಗನಾಥ್‌ ಅವರು ಈ ಕೆಲಸಕ್ಕೆ ಇಳಿದಾಗ ಕುಟುಂಬಿಕರಿಂದಲೇ ಸಾಕಷ್ಟು ಅಪಸ್ವರ ಬಂದಿತ್ತು. ಆದ್ರೀಗ ಅವ್ರೆಲ್ಲ ರಂಗನಾಥ್‌ ಅವರ ಜೊತೆಗಿದ್ದು ಅವರ ಸಹಾಯಕ್ಕೆ ನಿಲ್ಲುತ್ತಾ ಬಂದಿರುವುದು ವಿಶೇಷ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

20 hours ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

1 day ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

1 day ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

1 day ago