Advertisement
MIRROR FOCUS

ಬತ್ತಿದ ನದಿಗೆ ನೀರು ಹರಿಸಿದ ಕರುಣಾಮಯಿ ಕೃಷಿಕ | ವನ್ಯಜೀವಿಗಳ ದಾಹ ನೀಗಿಸಲು ಶಿವಮೊಗ್ಗದ ರೈತನ ಹೊಸ ಪ್ರಯತ್ನ

Share

 ನದಿ ಪಾತ್ರದಲ್ಲಿ ವಾಸಿಸುವ ಅನೇಕ ಕೃಷಿಕರು(Farmer) ನದಿ ನೀರನ್ನು(Watre) ಅವಲಂಬಿಸಿ ಕೃಷಿ ಚಟುವಟಿಕೆ(Agriculture) ಮಾಡುತ್ತಾರೆ. ಹಾಗೆ ಬೇಸಗೆಯಲ್ಲಿ(summer) ಬೋರ್‌ ವೆಲ್‌(Bore well), ಬಾವಿ(Well), ಕೆರೆ(Lake) ಬತ್ತಿದಾಗ ಅನೇಕರು ಮೊರೆ ಹೋಗೋದು ನದಿ ನೀರನ್ನು(River water). ಆದರೆ ನದಿ ನೀರೆ ಬತ್ತಿ ಹೋದರೆ ಏನು ಮಾಡೋದು. ಮನುಷ್ಯರಾದ ನಾವು ಹೇಗೋ ಬೇರೆಡೆ ಹೋಗಿ ನೀರು ತರಬಹುದು. ಆದರೆ ಪ್ರಾಣಿ ಪಕ್ಷಿಗಳು(Animal-Birds) ಏನು ಮಾಡೋದು. ಆದರೆ ಇಲ್ಲೋಬ್ಬ ರೈತ ಕೇವಲ ಪ್ರಾಣಿ ಪಕ್ಷಿಗಳಿಗಾಗಿ ನದಿಗೇ ತನ್ನ ಕೊಳವೇ ಬಾವಿಯಿಂದ ನೀರನ್ನು ಹರಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರೈತನೊಬ್ಬ ನದಿಗೆ (River) ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ : ಹೌದು, ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸುಡೂರಿನ ಮಂಜುನಾಥ ಭಟ್‌ ಎಂಬ ರೈತರು ಈ ರೀತಿಯಾಗಿ ನದಿಗೆ ನೀರು ಹರಿಸುವ ಕಾಯಕ ಮಾಡುತ್ತಾ ಬಂದಿರುವುದಾಗಿ ‘ಉದಯವಾಣಿ’ ವರದಿ ಮಾಡಿದೆ. ಇವರ ಕೃಷಿ ಜಮೀನಿಗೆ ಪಕ್ಕದಲ್ಲೇ ಕುಮುದ್ವತಿ ನದಿ ಹರಿಯುತ್ತದೆ. ಆದರೆ, ಈ ಬಾರಿಯ ಸುಡು ಬಿಸಿಲಿನಿಂದ ನದಿಯೂ ಬತ್ತಿ ಹೋಗಿದೆ.

ಪ್ರತಿ ಬೇಸಿಗೆಯಲ್ಲೂ ಈ ಕುಮುದ್ವತಿ ನದಿಯನ್ನೇ ಪ್ರಾಣಿ, ಪಕ್ಷಿಗಳು ಅವಲಂಬಿಸಿಕೊಂಡು ಬಂದಿದೆ. ಈ ಸಲ ನದಿಯಲ್ಲೇ ನೀರು ಇಲ್ಲದ್ದಾಗಿದ್ದು ಪ್ರಾಣಿ, ಪಕ್ಷಿಗಳ ದಾಹಕ್ಕೆ ಮಂಜುನಾಥ ಭಟ್‌ ಅವರು ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿದಿನ ತಮ್ಮ ಕೃಷಿಗೆ ಬಳಸುವ ಕೊಳವೆಬಾವಿಯ ನೀರನ್ನು ಪೈಪ್‌ ಬಳಸಿ ನದಿಗೆ ಜೋಡಿಸಿ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಕರೆಂಟ್‌ ಇಲ್ಲದೇ ಹೋದಲ್ಲಿ ಡೀಸೆಲ್‌ ಎಂಜಿನ್‌ ಮೋಟಾರ್‌ ಬಳಸಿ ನೀರು ಹರಿಸುತ್ತಾ ಬಂದಿದ್ದಾರೆ. ಇದರಿಂದಾಗಿ ವನ್ಯಜೀವಿಗಳು ನೀರು ಕುಡಿದು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

2 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

3 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

4 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago