ದೇಶದ ಅತಿ ದೊಡ್ಡ ಸಮಸ್ಯೆ ಅಂದರೆ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ. ನೀವು ದೇಶದ ಯಾವುದೇ ಮೂಲೆಗೆ ಹೋದರೂ, ಈ ಸಮಸ್ಯೆ ಇದ್ದಿದ್ದೇ. ಅಲ್ಲಿನ ಆಯಾಯ ಸರ್ಕಾರಗಳು ಕಸ ಮುಕ್ತಗೊಳಿಸಲು ಇನ್ನಿಲ್ಲದ ಶ್ರಮ ಹಾಕಿದರೂ ಯಶಸ್ವಿಯಾಗಿಲ್ಲ. ಈ ಕಸದ ಸಮಸ್ಯೆಯಿಂದ ಬೇಸತ್ತ ಕೇರಳ ಸರ್ಕಾರ ಹೊಸ ಆಫರ್ ಒಂದನ್ನು ಅಲ್ಲಿನ ನಾಗರೀಕರಿಗೆ ನೀಡಿದೆ. ಈ ಮೂಲಕವಾದರು ರಾಜ್ಯವನ್ನು ಕಸಮುಕ್ತಗೊಳಿಸಬಹುದಾ ಎಂದು ಯೋಚಿಸಿದೆ. ಇದು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ತಂದಿರುವ ‘ಮಾಲಿನ್ಯ ಮುಕ್ತಂ ನವ ಕೇರಳಂ’ ಅಭಿಯಾನದ ಒಂದು ಭಾಗವಾಗಿದೆ.
ತ್ಯಾಜ್ಯಮುಕ್ತ ರಾಜ್ಯವನ್ನಾಗಿ ಮಾಡಲು ಕಸದ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಸರ್ಕಾರವು ನಾಗರಿಕರಿಗೆ ವಿನಂತಿಸಿದೆ. ತ್ಯಾಜ್ಯದ ಫೋಟೋ ಕಳುಹಿಸುವವರಿಗೆ ಹಣ ನೀಡುವುದಾಗಿಯೂ ಸರ್ಕಾರ ಆಫರ್ ನೀಡಿದೆ. ನೀವು ಮಾಡಬೇಕಿರುವುದು ಇಷ್ಟೇ, ಎಲ್ಲೇ ಕಸ ಕಂಡರೂ ಕಸ ಕಂಡ ತಕ್ಷಣ ಫೋಟೊ ಅಥವಾ ವಿಡಿಯೋ ತೆಗೆದು ಸರಕಾರಕ್ಕೆ ಕಳುಹಿಸಬೇಕು.
ಇಷ್ಟೇ ಅಲ್ಲದೇ, ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ತಿಗಳು ಮತ್ತು ಜಲಮೂಲಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಎಸೆಯುತ್ತಿರುವವರ ಬಗ್ಗೆ ವರದಿ ಮಾಡಲು ಸರ್ಕಾರ ಸೂಚನೆ ನೀಡಿದೆ.ಈ ಫೋಟೋ-ವೀಡಿಯೋಗಳನ್ನು ಸರ್ಕಾರ ನೀಡುವ ವಾಟ್ಸಾಪ್ ಸಂಖ್ಯೆ ಮತ್ತು ಇ-ಮೇಲ್ಗೆ ಕಳುಹಿಸಬೇಕು. ಮಾಹಿತಿದಾರರ ಹೆಸರು ಅಥವಾ ವಿವರಗಳನ್ನು ಗೌಪ್ಯವಾಗಿ ಇಡುವುದಾಗಿಯೂ ಪ್ರಕಟಣೆ ಹೊರಡಿಸಲಾಗಿದೆ.
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…