ದೇಶದೆಲ್ಲೆಡೆ ಈಗ ಸದ್ದು ಮಾಡಿದ ಸುದ್ದಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರನ ಪ್ರೀವೆಡ್ಡಿಂಗ್ ಕಾರ್ಯಕ್ರಮ. ಆದರೆ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಪ್ರೀವೆಡ್ಡಿಂಗ್, ಮದುವೆ ಮಹೋತ್ಸವ ಕಾರ್ಯಕ್ರಮವೂ ಹಾಗೇ ಸದ್ದು ಮಾಡಿತ್ತು, ಅಂದು ಫೋಟೋಗ್ರಾಫರ್ ಆಗಿ ತೆರಳಿದ್ದ ಮಂಗಳೂರಿನ ವಿವೇಕ್ ಗೌಡ ಅವರು ಪರಿಸರ, ಪ್ರಯಾಣ ಸೇರಿದಂತೆ ಇತರ ಆಸಕ್ತಿಯನ್ನೂ ಹೊಂದಿದ್ದಾರೆ. ಅವರು ಕ್ಲಿಕ್ಕಿಸಿರುವ ವಿವಿಧ ಛಾಯಾಚಿತ್ರಗಳ ಪ್ರದರ್ಶನ ಪುತ್ತೂರಿನ ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯಲ್ಲಿ ಛಾಯಾಚಿತ್ರ ಪ್ರದರ್ಶನ ” ಜರ್ನಿ” ಆರಂಭಗೊಂಡಿದೆ.
ಯುಗಾದಿ ಆಚರಣೆಯೊಂದಿಗೆ ಮಂಗಳವಾರ ಸಂಜೆ ಚಿತ್ರ ಪ್ರದರ್ಶನ ಉದ್ಘಾಟನೆಗೊಂಡಿತು.ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಪರಿಸರವಾದಿ ಹೋರಾಟಗಾರ ಕಲಾವಿದ ದಿನೇಶ ಹೊಳ್ಳ ಮತ್ತು ಶಶಿಧರ ಶೆಟ್ಟಿ ಜನಪರ ಹೋರಾಟಗಾರ ಮಂಗಳೂರು ಮತ್ತು ಉರಗ ರಕ್ಷಕ ಕಿರಣ ಉದ್ಘಾಟಿಸಿದರು.
ಚಿತ್ರ ಕಲಾವಿದ ಮತ್ತು ಪರಿಸರವಾದಿ ದಿನೇಶ ಹೊಳ್ಳ ಮಾತನಾಡಿ, ಮಾನವರು ಸಹಜವಾಗಿ ಪರಿಸರ ದೊಂದಗಿನ ಒಡನಾಟದೊಂದಿಗೆ ಜೀವಿಸುವ ಮಹತ್ವದ ಕುರಿತು ಮಾತನಾಡಿದರು. ವಿವೇಕರ ಛಾಯಾಚಿತ್ರಗಳಲ್ಲಿ ಜೀವನ ಪ್ರೀತಿ ತುಂಬಿದೆ ಎಂದು ಶುಭ ಹಾರೈಸಿದರು.
ಅತಿಥಿ ಶಶಿಧರ ಶೆಟ್ಟಿ ಮಾತನಾಡಿ ಸೌಗಂಧಿಕಾ ಪರಿಸರದಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ಪರಿಸರಸ್ನೇಹಿ ಚಟುವಟಿಕೆಗಳು ನಡೆಯುತ್ತಿರಲಿ ಎಂದರು. ಪರಿಸರದ, ಸಮಾಜದ ನಡುವಿನ ಫೋಟೊಗಳ ಜೊತೆ ಮಾತನಾಡುವ ಮನಸುಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.
ಉರಗ ತಜ್ಞ ಕಿರಣ್ ನಮ್ಮ ಸುತ್ತಮುತ್ತಲಿನ ಹಾವುಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಸುನಿಲ್ ಅತ್ತಾವರ ಹಾಡಿರುವ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಚಂದ್ರ ಸೌಗಂಧಿಕಾ ಪ್ರಸ್ತಾವನೆ ಮಾಡಿದರು. ಹರೀಶ್ ರಾಜಕುಮಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸೌಗಂಧಿಕಾ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನವು ಏಪ್ರಿಲ್ 28ರಂದು ಕೊನೆಯಾಗಲಿದೆ. ಆಸಕ್ತರು ಬಂದು ವೀಕ್ಷಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ವಿವೇಕ್ ಗೌಡ ಅವರು ಪ್ರವಾಸ ಪ್ರಿಯರೂ ಹೌದು, ಪರಿಸರ ಪ್ರೇಮಿಯೂ ಹೌದು. ಮಾನವೀಯ ಮೌಲ್ಯಗಳನ್ನು ತಿಳಿಸುವ ಫೋಟೊಗಳನ್ನು ತೆಗೆದಿರುವ ವಿವೇಕ್ ಅವರು ಫೋಟೋಗ್ರಫಿಗಾಗಿಯೇ ದೇಶದ ವಿವಿದೆಡೆ ಸುತ್ತಾಡಿದ್ದಾರೆ. ಮಂಗಳೂರಿನಲ್ಲಿರುವ ವಿವೇಕ್ ಅವರು ದೇಶದ ವಿವಿಧ ಕಡೆಗಳಲ್ಲಿ ಪ್ರಮುಖರ ಫೋಟೊಗ್ರಫಿಯಲ್ಲೂ ಭಾಗಿಯಾಗಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…
ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…
ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…
ಒಡಿಶಾದ ಬಾಲಸೋರ್ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…
ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…
ತಂದೆಯ ನೆನಪಿಗಾಗಿ ಇಂದೋರ್ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…