Advertisement
MIRROR FOCUS

ಅಂಬಾನಿ ಪುತ್ರನ ಪ್ರೀವೆಡ್ಡಿಂಗ್‌ ಫೋಟೋಗ್ರಾಫರ್‌ ವಿವೇಕ ಗೌಡರ ಪ್ರವಾಸದ ಚಿತ್ರ ಪ್ರದರ್ಶನ ಪುತ್ತೂರಿನಲ್ಲಿ | ಪುತ್ತೂರಿನ ಪರ್ಪುಂಜದ ಸೌಗಂಧಿಕಾದಲ್ಲಿ ಮನ ಸೆಳೆವ ಚಿತ್ರಗಳು ಇವೆ ಬನ್ನಿ |

Share

ದೇಶದೆಲ್ಲೆಡೆ  ಈಗ ಸದ್ದು ಮಾಡಿದ  ಸುದ್ದಿ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರನ  ಪ್ರೀವೆಡ್ಡಿಂಗ್‌ ಕಾರ್ಯಕ್ರಮ‌. ಆದರೆ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ  ಪ್ರೀವೆಡ್ಡಿಂಗ್‌, ಮದುವೆ ಮಹೋತ್ಸವ ಕಾರ್ಯಕ್ರಮವೂ ಹಾಗೇ ಸದ್ದು ಮಾಡಿತ್ತು, ಅಂದು ಫೋಟೋಗ್ರಾಫರ್ ಆಗಿ ತೆರಳಿದ್ದ ಮಂಗಳೂರಿನ ವಿವೇಕ್‌ ಗೌಡ ಅವರು ಪರಿಸರ, ಪ್ರಯಾಣ ಸೇರಿದಂತೆ ಇತರ ಆಸಕ್ತಿಯನ್ನೂ ಹೊಂದಿದ್ದಾರೆ. ಅವರು ಕ್ಲಿಕ್ಕಿಸಿರುವ ವಿವಿಧ ಛಾಯಾಚಿತ್ರಗಳ ಪ್ರದರ್ಶನ ಪುತ್ತೂರಿನ ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯಲ್ಲಿ  ಛಾಯಾಚಿತ್ರ ಪ್ರದರ್ಶನ ” ಜರ್ನಿ” ಆರಂಭಗೊಂಡಿದೆ.

ಯುಗಾದಿ ಆಚರಣೆಯೊಂದಿಗೆ ಮಂಗಳವಾರ ಸಂಜೆ ಚಿತ್ರ ಪ್ರದರ್ಶನ ಉದ್ಘಾಟನೆಗೊಂಡಿತು.ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಪರಿಸರವಾದಿ ಹೋರಾಟಗಾರ ಕಲಾವಿದ ದಿನೇಶ ಹೊಳ್ಳ ಮತ್ತು ಶಶಿಧರ ಶೆಟ್ಟಿ ಜನಪರ ಹೋರಾಟಗಾರ ಮಂಗಳೂರು ಮತ್ತು ಉರಗ ರಕ್ಷಕ ಕಿರಣ ಉದ್ಘಾಟಿಸಿದರು.

ಚಿತ್ರ ಕಲಾವಿದ ಮತ್ತು ಪರಿಸರವಾದಿ ದಿನೇಶ ಹೊಳ್ಳ ಮಾತನಾಡಿ,  ಮಾನವರು ಸಹಜವಾಗಿ ಪರಿಸರ ದೊಂದಗಿನ ಒಡನಾಟದೊಂದಿಗೆ ಜೀವಿಸುವ ಮಹತ್ವದ ಕುರಿತು ಮಾತನಾಡಿದರು. ವಿವೇಕರ ಛಾಯಾಚಿತ್ರಗಳಲ್ಲಿ ಜೀವನ ಪ್ರೀತಿ ತುಂಬಿದೆ ಎಂದು ಶುಭ ಹಾರೈಸಿದರು.

ಅತಿಥಿ ಶಶಿಧರ ಶೆಟ್ಟಿ ಮಾತನಾಡಿ ಸೌಗಂಧಿಕಾ ಪರಿಸರದಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ಪರಿಸರಸ್ನೇಹಿ ಚಟುವಟಿಕೆಗಳು ನಡೆಯುತ್ತಿರಲಿ ಎಂದರು. ಪರಿಸರದ, ಸಮಾಜದ ನಡುವಿನ ಫೋಟೊಗಳ ಜೊತೆ ಮಾತನಾಡುವ ಮನಸುಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಉರಗ ತಜ್ಞ ಕಿರಣ್ ನಮ್ಮ ಸುತ್ತಮುತ್ತಲಿನ ಹಾವುಗಳ ಬಗ್ಗೆ  ಮಾಹಿತಿಗಳನ್ನು ನೀಡಿದರು. ಸುನಿಲ್ ಅತ್ತಾವರ ಹಾಡಿರುವ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಚಂದ್ರ ಸೌಗಂಧಿಕಾ ಪ್ರಸ್ತಾವನೆ ಮಾಡಿದರು. ಹರೀಶ್ ರಾಜಕುಮಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸೌಗಂಧಿಕಾ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನವು ಏಪ್ರಿಲ್ 28ರಂದು ಕೊನೆಯಾಗಲಿದೆ. ಆಸಕ್ತರು ಬಂದು ವೀಕ್ಷಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿವೇಕ್‌ ಗೌಡ ಅವರು ಪ್ರವಾಸ ಪ್ರಿಯರೂ ಹೌದು, ಪರಿಸರ ಪ್ರೇಮಿಯೂ ಹೌದು. ಮಾನವೀಯ ಮೌಲ್ಯಗಳನ್ನು ತಿಳಿಸುವ ಫೋಟೊಗಳನ್ನು ತೆಗೆದಿರುವ ವಿವೇಕ್‌ ಅವರು ಫೋಟೋಗ್ರಫಿಗಾಗಿಯೇ ದೇಶದ ವಿವಿದೆಡೆ ಸುತ್ತಾಡಿದ್ದಾರೆ. ಮಂಗಳೂರಿನಲ್ಲಿರುವ ವಿವೇಕ್‌ ಅವರು ದೇಶದ ವಿವಿಧ ಕಡೆಗಳಲ್ಲಿ ಪ್ರಮುಖರ ಫೋಟೊಗ್ರಫಿಯಲ್ಲೂ ಭಾಗಿಯಾಗಿದ್ದಾರೆ.

ಪರಿಸರದ ಒಡನಾಟವು ಹೆಚ್ಚು ಖುಷಿ ನೀಡುತ್ತದೆ ಎನ್ನುವ ವಿವೇಕ ಗೌಡ, ಉದ್ಯೋಗ ಹಾಗೂ ಆಸಕ್ತಿ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಆಸಕ್ತಿಗಳು ಹೆಚ್ಚು ಖುಷಿ ನೀಡುತ್ತವೆ ಎನ್ನುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

7 hours ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

10 hours ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

20 hours ago

ಗೋಮಯದಿಂದ ಗ್ರೀನ್‌ ಎನರ್ಜಿ | ದೆಹಲಿಯಲ್ಲಿ 300 ಟನ್ ಜೈವಿಕ ಅನಿಲ ಘಟಕ – ಯಮುನಾ ಮಾಲಿನ್ಯ ತಡೆಗೆ ಮೆಗಾ ಪ್ಲಾನ್‌

ದೆಹಲಿಯ ಗಾಜಿಪುರದಲ್ಲಿ ದಿನಕ್ಕೆ 300 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪನೆಗೆ…

20 hours ago

ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?

ಇಂಡೋ ಫಾಲಿ ಮತ್ತು ಬರ್ಮಾ ಗೋಟಾ ಅಡಿಕೆ ಆಮದು ಹೆಚ್ಚಾದರೂ ಮಂಗಳೂರು ಚಾಲಿ…

1 day ago