Advertisement
MIRROR FOCUS

ರಬ್ಬರ್‌ ಬೆಳೆಗಾರರ ಸಂಕಷ್ಟವನ್ನು ಪ್ರಧಾನಿಗಳಿಗೆ ಪತ್ರದ ಮೂಲಕ ವಿವರಿಸಿದ ಕೃಷಿಕ | ರಬ್ಬರ್‌ ಆಮದು ಕಡಿವಾಣಕ್ಕೆ ಯತ್ನ ಎಂದ ಸಚಿವಾಲಯ |

Share

ರಬ್ಬರ್‌  ಧಾರಣೆ ಕಳೆದ ಕೆಲವು ಸಮಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ರಬ್ಬರ್‌ ಧಾರಣೆ ಏರಿಕೆಯಾಗದೆ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಬ್ಬರ್‌ ಬೆಳೆಗಾರ ಮತ್ತು ಉದ್ಯಮಿಯೂ ಆಗಿರುವ ಸುಳ್ಯ ತಾಲೂಕಿನ ಗುತ್ತಿಗಾರಿನ ಬಿ ಕೆ ಶ್ರೀಧರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಇದಕ್ಕೆ ವಾಣಿಜ್ಯ ಸಚಿವಾಲಯದಿಂದ ಉತ್ತರಿಸಿದ್ದು, ರಬ್ಬರ್‌ ಆಮದು ಕಡಿವಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರ ನೀಡಿದೆ.

ರಬ್ಬರ್‌ ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಿಸಿದ್ದ ರಬ್ಬರ್‌ ಬೆಳೆಗಾರ ಬಿ ಕೆ ಶ್ರೀಧರ್‌, ನೈಸರ್ಗಿಕ ರಬ್ಬರ್ ಬೆಲೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ರಬ್ಬರ್‌ ಬೆಳೆಗಾರರಿಗೆ ತೀರಾ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ರಬ್ಬರ್‌ ಬೆಳೆಗಾರರಿಗೆ ಪ್ರತಿ ವರ್ಷ 8 ತಿಂಗಳ ಟ್ಯಾಪಿಂಗ್ ಅವಧಿ ಮಾತ್ರಾ ಲಭ್ಯವಿದೆ. ಇದರಲ್ಲಿ ಎರಡು ಅವಧಿಯಲ್ಲಿ ತೋಟದ ಕಳೆ ತೆಗೆಯಬೇಕು, ಗೊಬ್ಬರ, ಔಷಧಿ ಬಳಕೆ ಇತ್ಯಾದಿ ನಡೆಯಬೇಕಿದೆ. ಮಳೆಗಾಲದಲ್ಲಿ ಟ್ಯಾಪಿಂಗ್ ಗೆ  ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಿದೆ. ಹೀಗಾಗಿ ಇದೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ತಾವುಗಳು ರಬ್ಬರ್ ಬೋರ್ಡ್ ಮತ್ತು ಟೈರ್ ಉತ್ಪಾದನಾ ಸಂಸ್ಥೆಗಳಿಗೆ ನೆರವು ನೀಡಬೇಕು ಎಂದು ಬಿ ಕೆ ಶ್ರೀಧರ್‌ ಅವರು ಪತ್ರದಲ್ಲಿ ಮನವಿ ಮಾಡಿದ್ದರು.

ಬಿ ಕೆ ಶ್ರೀಧರ್‌, ಗುತ್ತಿಗಾರು

ಈಗಿನ ಬೆಲೆ ಹಾಗೂ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರಬ್ಬರ್‌ ಧಾರಣೆಯು 170 ರೂಪಾಯಿಗಿಂತ ಕಡಿಮೆ ಬಾರದಂತೆ ಸ್ಥಿರತೆಯಾಗಲು ಕ್ರಮ ಆಗಬೇಕಿದೆ. ಇದಕ್ಕಾಗಿ ರಬ್ಬರ್‌ ಉದ್ಯಮಗಳಿಗೆ ದೇಶೀಯ ರಬ್ಬರ್‌ ಬಳಕೆಗೆ ಸೂಚನೆ, ರಬ್ಬರ್‌ ಆಮದು ಕಡಿತ, ಆಮದು ನೀತಿಗಳ ಪ್ರಭಾವವನ್ನು ಕಡಿಮೆ ಮಾಡುವುದು ಸೇರಿದಂತೆ ರಬ್ಬರ್ ಆಮದನ್ನು ಅವಲಂಬಿಸದೆ ದೇಶೀಯ ರಬ್ಬರ್ ಉತ್ಪಾದನೆಗೆ ಆದ್ಯತೆ ನೀಡುವ ‌ ವ್ಯವಸ್ಥೆ ಮಾಡಬೇಕು. ಸರಾಸರಿ ರಬ್ಬರ್ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 200 ರೂಪಾಯಿಗಳಿಗೆ ಅವಕಾಶವಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಈ ಪತ್ರಕ್ಕೆ ವಾಣಿಜ್ಯ ಸಚಿವಾಲಯದಿಂದ ಉತ್ತರ ಬಂದಿದ್ದು, ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಮುಕ್ತ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ ಹಾಗೂ ಅಂತರಾಷ್ಟ್ರೀಯ ರಬ್ಬರ್ ಬೆಲೆಗಳು ದೇಶಿಯ ಮೇಲೂ ಪ್ರಭಾವ ಬೀರುತ್ತವೆ ಎಂದು ಸಚಿವಾಲಯ ತಿಳಿಸಿದೆ.

ದೇಶೀಯ ಬೆಲೆಗಳ ಮೇಲೆ ಅಂತಾರಾಷ್ಟ್ರೀಯ ರಬ್ಬರ್ ಬೆಲೆಗಳ ಪ್ರಭಾವವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಆಮದು ಮೇಲಿನ ಸುಂಕವನ್ನು ಏರಿಕೆ ಮಾಡಿದೆ. ಅಲ್ಲದೆ ಮುಂಗಡ ಪರವಾನಗಿ ಯೋಜನೆಯಡಿಯಲ್ಲಿ ಆಮದು ಮಾಡಿಕೊಂಡ ಒಣ ರಬ್ಬರ್ ಬಳಕೆಯ ಅವಧಿಯನ್ನು 18 ತಿಂಗಳಿನಿಂದ 6 ತಿಂಗಳಿಗೆ ಕಡಿತಗೊಳಿಸಿದೆ. ನೈಸರ್ಗಿಕ ರಬ್ಬರ್ ಆಮದು ಮಾಡಿಕೊಳ್ಳಲು ಪ್ರವೇಶ ಬಂದರನ್ನು ನಿರ್ಬಂಧಿಸಲಾಗಿದೆ. ಕಸ್ಟಮ್‌ ಸುಂಕದ ದರವೂ ಏರಿಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Rubber prices have not been rising at the expected levels for some time now. Farmers are suffering without increase in rubber price. Therefore, the rubber grower of Sulya, BK Sridhar, appealed to Prime Minister Narendra Modi through a letter. The Ministry of Commerce replied that they are trying to reduce the import of rubber.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

3 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

3 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

3 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

8 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago