ತನ್ನ ಕನಸಿನ ಬೈಕ್ ಖರೀದಿಸಬೇಕೆಂಬ ಮಹದಾಸೆಯಿಂದ ಯುವಕನೊಬ್ಬ ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟಿದ್ದ 1 ರೂಪಾಯಿ ನಾಣ್ಯಗಳಿಂದಲೇ 2.6 ಲಕ್ಷ ರೂ. ಸಂಗ್ರಹಿಸಿ, ಹೊಚ್ಚ ಹೊಸ ಬೈಕ್ ತೆಗೆದುಕೊಂಡಿದ್ದಾನೆ.
ತಮಿಳುನಾಡಿನ ಸೇಲಂ ನಿವಾಸಿಯಾಗಿರುವ ಯುವಕ ನೀಡಿರುವ ಚಿಲ್ಲರೆ ಹಣ ಎಣಿಸಲು ಶೋ ರೂಂನವರು ಸರಿಸುಮಾರು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸೇಲಂನ ವಿ. ಭೂಪತಿ ಎಂಬಾತ ಈ ಬೈಕ್ ಖರೀದಿಸಿದ ಯುವಕ. ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟ 1 ರೂಪಾಯಿ ನಾಣ್ಯಗಳಿಂದ ಶೋರೂಂಗೆ ತೆರಳಿ ನ್ಯೂ ಬಜಾಜ್ ಡಾಮಿನರ್ ಖರೀದಿಸಿದ್ದಾನೆ.
ಭೂಪತಿ ಬಿಎಸ್ಸಿ ಪದವೀಧರ. ಕಳೆದ ಕೆಲ ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಬೈಕ್ ಖರೀದಿಸುವ ಕನಸು ಕಂಡಿದ್ದು ಆತನ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ, ಪ್ರತಿದಿನ ಒಂದೊಂದು ರೂಪಾಯಿ ಸಂಗ್ರಹಿಸಲು ಶುರು ಮಾಡಿದ್ದು, ಹೀಗೆ ಮೂರು ವರ್ಷಗಳ ನಂತರ ತನ್ನಿಷ್ಟದ ಬೈಕ್ ಖರೀದಿ ಮಾಡುವ ಮೂಲಕ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…