ಈ ಆಧಾರ ಕಾರ್ಡ್ ಎಲ್ಲಾದಕ್ಕೂ ಲಿಂಕ್ ಮಾಡಿ ಸಾಕಾಯ್ತು..! ಅನ್ನುವವರು ಇದ್ದಾರೆ. ಈಗ ಇನ್ನೊಂದು ಸುದ್ದಿ ಇದೆ, ಇನ್ನು ನಮ್ಮ ಮನೆಯ ನಾಯಿ ಬೆಕ್ಕು ದನಗಳಿಗೂ ಆಧಾರ್ ಲಿಂಕ್…!. ದೀಗ ಜಾನುವಾರುಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ. ಹೌದು ಇದು ಹಾಸ್ಯವೆನಿಸಿದರೂ ಸತ್ಯ.
ಫಲಾನುಭಗಳಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಹಲವು ಯೋಜನೆಗಳಲ್ಲಿ ಆಧಾರ್ ಕಡ್ಡಾಯ ಮಾಡಿದೆ. ಈಚೆಗಷ್ಟೇ ಸೈಬರ್ ಕ್ರೈಂನಲ್ಲಿ ಆಗುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಿಮ್ ಕಾರ್ಡ್ಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿದೆ.
ಶೀಘ್ರದಲ್ಲೇ ದೇಶದ ಜಾನುವಾರುಗಳಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ. ಜಾನುವಾರುಗಳು ಹಿಂದೆ ಯಾವ ರೋಗಕ್ಕೆ ತುತ್ತಾಗಿದ್ದವು, ಅದರ ಇತಿಹಾಸದ ಸಂಪೂರ್ಣ ಮಾಹಿತಿ ಸೇರಿದಂತೆ ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಈ ಆಧಾರ್ ಕಾರ್ಡ್ ಉಪಯುಕ್ತವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ತಿಳಿಸಿದ್ದಾರೆ.
ಜಾನುವಾರುಗಳಿಗೆ ಸಂಬಂಧಿಸಿದ ಡೇಟಾದ ಮೂಲಕ ಆದಷ್ಟು ಬೇಗ ರೋಗದ ಮೂಲದ ಬಗ್ಗೆ ತಿಳಿದುಕೊಳ್ಳಬೇಕು. ನಂತರ ಲಸಿಕೆ ಮತ್ತು ತಡೆಗಟ್ಟುವ ಇತರ ಮಾರ್ಗಗಳನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಯೋ ಏಷ್ಯಾ ಸಮ್ಮೇಳನದ ಅಂಗವಾಗಿ ಮೊದಲ ದಿನ ‘ಒಂದು ಆರೋಗ್ಯ ವಿಧಾನ, ಸ್ಥಳೀಯ ಜ್ಞಾನ ಮತ್ತು ನೀತಿ’ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಇದಕ್ಕೆ ಸಂಯೋಜಕರಾಗಿ ಸಿಎಂಸಿ ವೆಲ್ಲೂರು ಪ್ರಾಧ್ಯಾಪಕ ಡಾ.ಗಗನ್ ದೀಪ್ ಕಾಂಗ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಕೆ.ಪಾಲ್, ಮನುಷ್ಯರಂತೆ ಜಾನುವಾರುಗಳಿಗೂ ಆಧಾರ್ ರಚಿಸಲಾಗಿದೆ. ಶೀಘ್ರದಲ್ಲೇ ಪ್ರತಿ ಜಾನುವಾರು ಮತ್ತು ಪ್ರಾಣಿಗಳಿಗೆ ಆಧಾರ್ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು. ಈ ಮೂಲಕ ದೇಶದ ಜಾನುವಾರು, ಪ್ರಾಣಿಗಳ ವಿವರಗಳು ಸುಲಭವಾಗಿ ದೊರೆಯುತ್ತವೆ. ಅದರ ನಂತರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು.
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…