Advertisement
ಸುದ್ದಿಗಳು

ಈಗ ಬಂದಿದೆ ಎಸಿ ಹೆಲ್ಮೆಟ್‌…. !!

Share

ಹಲವು ಬಗೆಯ ಸುರಕ್ಷತಾ ಹೆಲ್ಮೆಟ್‌ಗಳು ಇದೆ. ಆದರೆ ಇದೀಗ ಹವಾನಿಯಂತ್ರಿತ ಸುರಕ್ಷತಾ ಹೆಲ್ಮೆಟ್ ಇದೀಗ ಲಭ್ಯವಾಗುತ್ತಿದೆ. ವಿಶ್ವದಲ್ಲೇ ಮೊಟ್ಟ ಮೊದಲ ಎಸಿ ಸುರಕ್ಷತಾ ಹೆಲ್ಮೆಟ್ ಎನ್ನಲಾಗಿದೆ. ಈ ಸುರಕ್ಷತಾ ಹೆಲ್ಮೆಟ್ ವಿಶೇಷತೆಗಳು ಅಚ್ಚರಿ ಮೂಡಿಸುವಂತಿದ್ದು, ಭಾರತೀಯ ಮೂಲಕದ ಸ್ಟಾರ್ಟ್‌ ಅಪ್‌ ಕಂಪನಿಯು ಇದನ್ನು ಪರಿಚಯಿಸಿದೆ.

Advertisement
Advertisement

ದುಬೈನ ಎಕ್ಸ್‌ಪೋ 2020 ರಲ್ಲಿ ಭಾರತೀಯ ಪೆವಿಲಿಯನ್‌ನಲ್ಲಿ ಈ ಎಸಿ ಹೆಲ್ಮೆಟ್‌ ಅನಾವರಣಗೊಳಿಸಲಾಗಿದೆ. ಈ ಹೆಲ್ಮೆಟ್‌ಗಳ ಶ್ರೇಣಿಯನ್ನು ಭಾರತದ ಸ್ಟಾರ್ಟ್ ಅಪ್ ಕಂಪನಿ ಜಾರ್ಶ್ ಸೇಫ್ಟಿ ಅಭಿವೃದ್ಧಿಪಡಿಸಿದೆ. ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾದ ಎಲೆಕ್ಟ್ರಾನಿಕ್ಸ್ ವಿತರಕ ಎನ್‌ಐಎ  ಲಿಮಿಟೆಡ್ ಅನಾವರಣಗೊಳಿಸಿದೆ. ಇದು ಮುಖದ ಶೀಲ್ಡ್‌ನೊಂದಿಗೆ ಸಂಪೂರ್ಣವಾದ ವಿಶೇಷ ವೆಲ್ಡಿಂಗ್ ಹೆಲ್ಮೆಟ್ಟುಗಳು ನಾಲ್ಕು ಮಾರ್ಪಾಡುಗಳ ರಚನೆ ಪಡೆದಿದೆ.

Advertisement

ಮುಖ್ಯವಾಗಿ ಈ ಹೆಲ್ಮೆಟ್ ವಿವಿಧ ಫ್ಯಾಕ್ಟರಿಗಳಲ್ಲಿನ ಮೆಷಿನ್ ಆಪರೇಟರ್‌ಗಳು, ನುರಿತ ತಂತ್ರಜ್ಞರು, ಸೈಟ್ ಮ್ಯಾನೇಜರ್‌ಗಳು, ಹಾಗೆಯೇ ಅಧಿಕ ಉಷ್ಣತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಆವಿಷ್ಕಾರ ಮಾಡಿರುವ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಅವರು 2016 ರಲ್ಲಿ ಬಿಸಿ ವಾತಾವರಣದಲ್ಲಿ ಸುರಕ್ಷತಾ ಹೆಲ್ಮೆಟ್‌ಗಳನ್ನು ಬಳಸುವಾಗ ಅಸ್ವಸ್ಥತೆ ಅನುಭವಿಸಿದ ನಂತರ ಜಾರ್ಶ್ ಎಸಿ ಹೆಲ್ಮೆಟ್‌ನ ಮೂಲ ಮಾದರಿಯನ್ನು ತಯಾರಿಸಿದರು. ಇದನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಶೋಧನೆಯನ್ನು ತೆಗೆದುಕೊಂಡಿದೆ ಎಂದು‌ ಕೌಸ್ತುಬ್‌ ಕೌಂಡಿನ್ಯ ಹೇಳಿದರು.

Advertisement

ಇದರಲ್ಲಿ ಯಾವುದೇ ಶೀತಕ ದ್ರವಗಳನ್ನು ಬಳಸಲಾಗುವುದಿಲ್ಲ, ಬದಲಾಗಿ ತಂಪಾದ ಗಾಳಿಯನ್ನು ಪ್ರಸಾರ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಹೆಲ್ಮೆಟ್‌ನ ಟರ್ಬೊ ಕೂಲಿಂಗ್ ಹೆಲ್ಮೆಟ್‌ನೊಳಗಿನ ತಾಪಮಾನವನ್ನು ಮೂರರಿಂದ ಐದು ನಿಮಿಷಗಳಲ್ಲಿ ಕೇವಲ 15 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುತ್ತದೆ, ಹವಾನಿಯಂತ್ರಿತ ಹೆಲ್ಮೆಟ್‌ನಲ್ಲಿ ಒಂದೇ ಚಾರ್ಜ್ ಸುಮಾರು 10 ಗಂಟೆಗಳ ವರೆಗೆ ಇರುತ್ತದೆ.

 

Advertisement

 

 

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

3 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

3 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

4 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

4 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

4 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

4 hours ago