Advertisement
ಸುದ್ದಿಗಳು

ಈಗ ಬಂದಿದೆ ಎಸಿ ಹೆಲ್ಮೆಟ್‌…. !!

Share

ಹಲವು ಬಗೆಯ ಸುರಕ್ಷತಾ ಹೆಲ್ಮೆಟ್‌ಗಳು ಇದೆ. ಆದರೆ ಇದೀಗ ಹವಾನಿಯಂತ್ರಿತ ಸುರಕ್ಷತಾ ಹೆಲ್ಮೆಟ್ ಇದೀಗ ಲಭ್ಯವಾಗುತ್ತಿದೆ. ವಿಶ್ವದಲ್ಲೇ ಮೊಟ್ಟ ಮೊದಲ ಎಸಿ ಸುರಕ್ಷತಾ ಹೆಲ್ಮೆಟ್ ಎನ್ನಲಾಗಿದೆ. ಈ ಸುರಕ್ಷತಾ ಹೆಲ್ಮೆಟ್ ವಿಶೇಷತೆಗಳು ಅಚ್ಚರಿ ಮೂಡಿಸುವಂತಿದ್ದು, ಭಾರತೀಯ ಮೂಲಕದ ಸ್ಟಾರ್ಟ್‌ ಅಪ್‌ ಕಂಪನಿಯು ಇದನ್ನು ಪರಿಚಯಿಸಿದೆ.

ದುಬೈನ ಎಕ್ಸ್‌ಪೋ 2020 ರಲ್ಲಿ ಭಾರತೀಯ ಪೆವಿಲಿಯನ್‌ನಲ್ಲಿ ಈ ಎಸಿ ಹೆಲ್ಮೆಟ್‌ ಅನಾವರಣಗೊಳಿಸಲಾಗಿದೆ. ಈ ಹೆಲ್ಮೆಟ್‌ಗಳ ಶ್ರೇಣಿಯನ್ನು ಭಾರತದ ಸ್ಟಾರ್ಟ್ ಅಪ್ ಕಂಪನಿ ಜಾರ್ಶ್ ಸೇಫ್ಟಿ ಅಭಿವೃದ್ಧಿಪಡಿಸಿದೆ. ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾದ ಎಲೆಕ್ಟ್ರಾನಿಕ್ಸ್ ವಿತರಕ ಎನ್‌ಐಎ  ಲಿಮಿಟೆಡ್ ಅನಾವರಣಗೊಳಿಸಿದೆ. ಇದು ಮುಖದ ಶೀಲ್ಡ್‌ನೊಂದಿಗೆ ಸಂಪೂರ್ಣವಾದ ವಿಶೇಷ ವೆಲ್ಡಿಂಗ್ ಹೆಲ್ಮೆಟ್ಟುಗಳು ನಾಲ್ಕು ಮಾರ್ಪಾಡುಗಳ ರಚನೆ ಪಡೆದಿದೆ.

ಮುಖ್ಯವಾಗಿ ಈ ಹೆಲ್ಮೆಟ್ ವಿವಿಧ ಫ್ಯಾಕ್ಟರಿಗಳಲ್ಲಿನ ಮೆಷಿನ್ ಆಪರೇಟರ್‌ಗಳು, ನುರಿತ ತಂತ್ರಜ್ಞರು, ಸೈಟ್ ಮ್ಯಾನೇಜರ್‌ಗಳು, ಹಾಗೆಯೇ ಅಧಿಕ ಉಷ್ಣತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಆವಿಷ್ಕಾರ ಮಾಡಿರುವ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಅವರು 2016 ರಲ್ಲಿ ಬಿಸಿ ವಾತಾವರಣದಲ್ಲಿ ಸುರಕ್ಷತಾ ಹೆಲ್ಮೆಟ್‌ಗಳನ್ನು ಬಳಸುವಾಗ ಅಸ್ವಸ್ಥತೆ ಅನುಭವಿಸಿದ ನಂತರ ಜಾರ್ಶ್ ಎಸಿ ಹೆಲ್ಮೆಟ್‌ನ ಮೂಲ ಮಾದರಿಯನ್ನು ತಯಾರಿಸಿದರು. ಇದನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಶೋಧನೆಯನ್ನು ತೆಗೆದುಕೊಂಡಿದೆ ಎಂದು‌ ಕೌಸ್ತುಬ್‌ ಕೌಂಡಿನ್ಯ ಹೇಳಿದರು.

ಇದರಲ್ಲಿ ಯಾವುದೇ ಶೀತಕ ದ್ರವಗಳನ್ನು ಬಳಸಲಾಗುವುದಿಲ್ಲ, ಬದಲಾಗಿ ತಂಪಾದ ಗಾಳಿಯನ್ನು ಪ್ರಸಾರ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಹೆಲ್ಮೆಟ್‌ನ ಟರ್ಬೊ ಕೂಲಿಂಗ್ ಹೆಲ್ಮೆಟ್‌ನೊಳಗಿನ ತಾಪಮಾನವನ್ನು ಮೂರರಿಂದ ಐದು ನಿಮಿಷಗಳಲ್ಲಿ ಕೇವಲ 15 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುತ್ತದೆ, ಹವಾನಿಯಂತ್ರಿತ ಹೆಲ್ಮೆಟ್‌ನಲ್ಲಿ ಒಂದೇ ಚಾರ್ಜ್ ಸುಮಾರು 10 ಗಂಟೆಗಳ ವರೆಗೆ ಇರುತ್ತದೆ.

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

1 day ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

2 days ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

2 days ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

3 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

3 days ago