Advertisement
ನಿಧನ‌ ಸುದ್ದಿಗಳು

ಮರಳಿ ಬಾರದೂರಿಗೆ ಹೋದ ನಟ ವಿಜಯ್ ರಾಘವೇಂದ್ರ ಪತ್ನಿ | ಸ್ಪಂದನಾ ಹೃದಯಾಘಾತದಿಂದ ನಿಧನ |

Share

ಚಿನ್ನಾರಿ ಮುತ್ತಾ  ಎಂದೆ ಖ್ಯಾತಿ ಪಡೆದ ನಟ ವಿಜಯ್ ರಾಘವೇಂದ್ರ #Vijay Raghavendra ಸದಾ ನಗುಮೊಗದ ನಟ. ಸದಾ ತನ್ನ ಪತ್ನಿಯ ಬೆಂಬಲದೊಂದಿಗೆ ಜೀವನ ನಡೆಸುತ್ತಿದ್ದ ವಿಜಯ್‌ ಅವರಿಗೆ ದೊಡ್ಡ ಶಾಕ್‌ ಆಗಿದೆ. ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Advertisement
Advertisement

ಸ್ಪಂದನ ಸಾವು ಅನೇಕರಿಗೆ ಶಾಕ್ ತಂದಿದೆ. ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ. ಈ ಸುದ್ದಿ ತಿಳಿದು ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಭಿಮಾನಿಗಳಿಗೂ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಅದಕ್ಕೂ ಮೊದಲೇ ಸ್ಪಂದನ ಮೃತಪಟ್ಟಿದ್ದಾರೆ.

Advertisement

ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ವಿಜಯ್ ಹಾಗೂ ಸ್ಪಂದನಾ ಬ್ಯಾಂಕಾಕ್​​ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್​​ನಲ್ಲೇ ನಡೆಯಲಿದೆ. ಮಂಗಳವಾರ (ಆಗಸ್ಟ್​​ 8) ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ : ಯುವ ಕೃಷಿಕರಿಗೆ ಕೃಷಿ ಬಗ್ಗೆ ಉಪಯುಕ್ತ ಮಾಹಿತಿ

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ, ಮೂರು ದಿನಗಳ 'ಸುಸ್ಥಿರ ಕೃಷಿ…

43 mins ago

ಕೆರೆಯಲ್ಲಿ ಸಾಕಿದ್ದ 1 ಲಕ್ಷ ಮೀನುಗಳ ಮಾರಣಹೋಮ : 5 ರಿಂದ 10 ಕೆಜಿಯ ಮೀನು ಸಾವಿನಿಂದ 10 ಲಕ್ಷ ನಷ್ಟ

ರೈತ(Farmer) ಎಷ್ಟೇ ಧೈರ್ಯ ಮಾಡಿ ಏನೇ ಮಾಡಿದರು ನಷ್ಟ ಅನ್ನೋದು ಒಂದು ಕಡೆಯಿಂದ…

59 mins ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ – ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮಳೆ

ಈ ಬಾರಿ ಮುಂಗಾರು(Mansoon) ಬೇಗ ಆರಂಭವಾಗುವ ನಿರೀಕ್ಷೆಯಿದೆ. ಬಿರು ಬಿಸಿಲಿನಿಂದ ತತ್ತರಿಸಿದ ಜನತೆಗೆ…

1 hour ago

ಭಾರತ ಚಂದ್ರನಂಗಳದಲ್ಲಿದೆ : ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ : ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ತಾನು ಸತ್ತರು ಪರವಾಗಿಲ್ಲ, ಇನ್ನೊಬ್ಬರು ಬದುಕಬಾರದು ಅನ್ನುವ ಜಾಯಮಾನದ ದೇಶ ಪಾಕಿಸ್ತಾನ(Pakistana). ತನ್ನ…

2 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು – ಈ ಬಾರಿ ಆನೆಗಳ ಸಂಖ್ಯೆ ಏರಲಿದೆಯಾ..?

ಈ ಪ್ರಕೃತಿಯಲ್ಲಿ(Nature) ಮನುಷ್ಯರಿಗಿಂತಲೂ(Human Being) ಪ್ರಾಣಿಗಳಿಗೇ(Animal) ಹೆಚ್ಚು ಬದುಕುವ ಹಕ್ಕಿದೆ. ಅವುಗಳ ಉಳಿವಿವಿಗಾಗಿ…

5 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

5 hours ago