Advertisement
ಕೃಷಿ

ಕೃಷಿಕನ ಸಂಶೋಧನೆಗೆ ಸಿಗುವ ಸಂಮಾನ ಯಾವುದು ? | ಕೃಷಿಕ ಪವನ ವೆಂಕಟ್ರಮಣ ಭಟ್‌ ಹೇಳಿದ್ದು ಹೀಗೆ.. | ಸಂಮಾನ ಮಾಡದೇ ಇದ್ದರೂ ಅವಮಾನ ಮಾಡಬೇಡಿ…. ! |

Share
ಕೃಷಿಕರು ಹಲವು ಸಂಶೋಧನೆಗಳನ್ನು, ಆವಿಷ್ಕಾರಗಳನ್ನು ಮಾಡುತ್ತಾರೆ. ಹಲವು ಸಂದರ್ಭಗಳಲ್ಲಿ  ಅವುಗಳನ್ನು ತಾತ್ಸಾರ ಭಾವನೆಯಿಂದ ಕಾಣುತ್ತಾರೆ. ಈ ನಡುವೆಯೂ ಹಲವು ಕಡೆ ಸನ್ಮಾನಗಳೂ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಕೃಷಿಕರ ಭಾವನೆ ಹೇಗಿರುತ್ತದೆ.. ? ಈ ಬಗ್ಗೆ ಕೃಷಿಕ ಪವನ ವೆಂಕಟ್ರಮಣ ಭಟ್‌ ಬಹಳ ಮಾರ್ಮಿಕವಾಗಿ ಮಾತನಾಡಿದ್ದಾರೆ..

ಭಾರತೀಯ ಕಿಸಾನ್ ಸಂಘದ ವತಿಯಿಂದ ಸುಳ್ಯ ತಾಲೂಕು ಘಟಕದ ವತಿಯಿಂದ ಬಲರಾಮ ಜಯಂತಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು‌. ಈ ಸಂದರ್ಭ  ಪ್ರಗತಿಪರ ಕೃಷಿಕ ವೆಂಕಟ್ರಮಣ ಭಟ್ ಪವನ, ಪ್ರಗತಿಪರ ಹೈನುಗಾರರಾದ ಶಾಂಭವಿ ಎನ್‌ ರೈ ಪಿಜಾವು ಅವರನ್ನು ಸನ್ಮಾನಿಸಲಾಯಿತು. 

Advertisement
Advertisement
Advertisement

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಕೃಷಿಕ ಪವನ ವೆಂಕಟ್ರಮಣ ಭಟ್, ಕೃಷಿ ಸಂಶೋಧನೆ, ಆವಿಷ್ಕಾರಗಳು ನಿರಂತರ. ಹಾಗಾಗಿ ಸನ್ಮಾನಗಳಿಗಿಂತಲೂ ಗುರುತಿಸುವಿಕೆ ಕೃಷಿಕರಿಗೆ ಬಹಳ ಖುಷಿ ಕೊಡುತ್ತದೆ. ಪ್ರತೀ ಕೃಷಿಕನ ಸಾಧನೆ, ಆವಿಷ್ಕಾರಗಳು ಮುಂದುವರಿಯಬೇಕು. ಇದಕ್ಕಾಗಿ ಹೀಗೆ ಗುರುತಿಸುವ ಮೂಲಕ ಇನ್ನೊಬ್ಬ ಕೃಷಿಕನಿಗೆ ಸಂಶೋಧನೆಗೆ, ಆವಿಷ್ಕಾರಕ್ಕೆ “ಖೋ..” ನೀಡುವ ಕೆಲಸ ಮಾಡುವುದಷ್ಟೇ ಆಗಿದೆ. ಊರಿನ ಮಂದಿ ಗುರುತಿಸಿದಾಗ ಸಂಶೋಧಕನಿಗೆ ಖುಷಿ ಹೆಚ್ಚಾಗುತ್ತದೆ. ಯಾವತ್ತೂ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಿಂತಲೂ ಕೃಷಿಕನ ಆವಿಷ್ಕಾರಗಳಿಗೆ ಹಾಗೂ ಕೃಷಿಕನಿಗೆ ಅವಮಾನ ಮಾಡಬಾರದು ಎಂದರು.

ಈ ಹಿಂದಿನ ತಮ್ಮ ಅನುಭವ ಹೇಳಿಕೊಂಡ ಪವನ ವೆಂಕಟ್ರಮಣ ಭಟ್‌, ಹಿಂದೆ ನಾನು ರಾಟೆಯೊಂದನ್ನು ಅಭಿವೃದ್ಧಿ ಪಡಿಸಿದ್ದೆ. ಇದಕ್ಕಾಗಿ ನನಗೆ “ರಾಟೆ ಭಟ್ರು ” ಅಂತ ಹೆಸರಿಟ್ಟರು. ಇದನ್ನು ಶ್ರೀಪಡ್ರೆ ಒಂದು ಕಾರ್ಯಕ್ರಮದಲ್ಲಿ ಖಂಡಿಸಿದರು. ಇದನ್ನೇ “ರಟ್ಟೆ ಭಟ್ರು” ಎಂದು ಏಕೆ ಈ ಸಮಾಜವು ಗೌರವಿಸಬಾರದು ? ಎಂದು ಪ್ರಶ್ನಿಸಿದರು. ಯಾವತ್ತೂ ಒಬ್ಬ ಕೃಷಿಕನ ಸಣ್ಣ ಅಧ್ಯಯನ, ಆವಿಷ್ಕಾರಗಳೂ ಮಹತ್ವ ಪಡೆಯುತ್ತವೆ. ಹೀಗೇ ಅವಮಾನ ಮಾಡುವುದರಿಂದಲೇ ಕೃಷಿ ಮಾಹಿತಿಗಳು ವಿನಿಮಯವಾಗುತ್ತಿಲ್ಲ ಎಂದು ಶ್ರೀಪಡ್ರೆ ಹೇಳಿರುವುದನ್ನು ಪವನ ವೆಂಕಟ್ರಮಣ ಭಟ್‌ ಉಲ್ಲೇಖಿಸಿ ಹೇಳಿದರು.  ಕೃಷಿಕರ ಆವಿಷ್ಕಾರಗಳು ಸಣ್ಣದೇ ಇದ್ದರೂ ಅದನ್ನು ಮುಂದಿನ ಪೀಳಿಗೆಯೂ ಗೌರವಿಸಬೇಕು, ಅವಮಾನ ಮಾಡಬಾರದು ಎಂದರು.

Advertisement

ತಮ್ಮದೇ ಇನ್ನೊಂದು ಅನುಭವ ಹೇಳಿದ ಪವನ ವೆಂಕಟ್ರಮಣ ಭಟ್‌, ಪುತ್ತೂರಿನಲ್ಲಿ ಯಂತ್ರ ಮೇಳ ನಡೆದಿತ್ತು. ಈ ಸಂದರ್ಭ ಮರ ಏರುವ ಪುಟ್ಟ ಯಂತ್ರ ಮಾಡಿದ್ದೆ. ಇದರ ಪ್ರಾತ್ಯಕ್ಷಿಕೆಯ ಸಂದರ್ಭ ತಲೆಗೆ ತಾಗಿತ್ತು, ರಕ್ತ ಸುರಿಯುತ್ತಿತ್ತು. ಈ ನಡುವೆಯೂ ಮತ್ತೆ ಯಂತ್ರದ ಮೂಲಕ ಏರುವ ಕೆಲಸ ಮಾಡುತ್ತಿದ್ದಾಗ ಅಲ್ಲಿರುವ ಕೆಲವು ಯುವತಿಯರು ಗೇಲಿ ಮಾಡಿದರು. ಇಷ್ಟು ರಕ್ತ ಸುರಿಯುತ್ತಿದ್ದರೂ ಮರ ಏರುವುದು ಏಕೆ, ನಿಲ್ಲಿಸಿ ಎಂದರು. ಇದಕ್ಕೆ ಉತ್ತರಿಸಿದ್ದು ಹೀಗೆ, “ಪ್ರತೀ ಮಹಿಳೆ ಹೆರಿಗೆಯಾಗುತ್ತದೆ. ಆದರೆ ಸಣ್ಣ ಪ್ರಮಾಣದಲ್ಲಿ ಹೆರಿಗೆಯ ವೇಳೆ ಮಹಿಳೆ ಸಾವನ್ನಪ್ಪುತ್ತಾರೆ. ಒಂದು ವೇಳೆ ನಿಮ್ಮೆಲ್ಲರ ತಾಯಿಯೂ ಅದೇ ಯೋಚಿಸಿದ್ದರೆ ಯಾರೂ ಹುಟ್ಟುತ್ತಿರಲಿಲ್ಲ. ಇಲ್ಲೂ ಹಾಗೆಯೇ ಏನಾದರೂ ಆದರೆ ನನಗೇ ಆಗಲಿ, ಆದರೆ ವಿಶ್ವಾಸ ಇದೆ, ಅದು ನನ್ನ ಸಂಶೋಧನೆ” ಎಂದು ಹೇಳಿದ್ದೆ ಎಂದು ಪವನ ವೆಂಕಟ್ರಮಣ ಭಟ್‌ ಬಹಳ ಮಾರ್ಮಿಕವಾಗಿ ಹೇಳಿದರು.

ಕೃಷಿಯಲ್ಲಿ ಕೃಷಿಕನ ಸಂಶೋಧನೆಗೂ ಮಹತ್ವ ನೀಡಿ. ಅದು ಪುಟ್ಟ ಸಂಶೋಧನೆಯೇ ಆದರೂ ಅದಕ್ಕೆ ಮಹತ್ವ ಅಗತ್ಯ ಇದೆ. ಪ್ರತೀ ಕೃಷಿಕನ ಸಂಶೋಧನೆ, ಆವಿಷ್ಕಾರಗಳಿಗೆ ಗೌರವ, ಮಾನ ಕೊಡದೇ ಇದ್ದರೂ ಪರವಾಗಿಲ್ಲ, ಆದರೆ ಅವಮಾನ ಮಾತ್ರಾ ಮಾಡಬಾರದು ಎಂದು ಸಂದೇಶ ನೀಡಿದರು.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಮಾವು ಮಾಂತ್ರಿಕ ಮತ್ತು ನಂಬರ್ 1 – ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

1 hour ago

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

6 hours ago

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

6 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

7 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

8 hours ago