ಭಾರತದಲ್ಲಿ AI ತಂತ್ರಜ್ಞಾನದ ಕಡೆಗೆ ಲಕ್ಷ್ಯ | Artificial Intelligence ನಿಯಂತ್ರಣದ ಕಡೆಗೂ ಗಮನ |

June 9, 2023
3:25 PM

ಪ್ರಪಂಚದ ಹಲವು ಕಡೆಗಳಲ್ಲಿ  ಇಂದು AI (Artificial Intelligence) ತಂತ್ರಜ್ಞಾನ ಬೆಳೆಯುತ್ತಿದೆ. ಕೃಷಿಯಿಂದ ತೊಡಗಿ ಎಲ್ಲಾ ಕ್ಷೇತ್ರಗಳಲ್ಲೂ AI ಬಳಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇನ್ನೂ ಈ ಕ್ಷೇತ್ರ ಬೆಳವಣಿಗೆಯ ಹಂತದಲ್ಲಿದೆ. ಭಾರತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಅವಕಾಶ ಇರುವುರಿಂದ ಹೆಚ್ಚು ಗಮನ ನೀಡಲಾಗುತ್ತಿದೆ. ಇದೇ ವೇಳೆ AI ತಂತ್ರಜ್ಞಾನಗಳ ಮೂಲಕ ನಡೆಯಬಹುದಾದ ಅನಾಹುತಗಳ ಕಡೆಗೂ ಗಮನಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲೂ ನಿಯಂತ್ರಣ ಮಾಡಲಾಗುತ್ತಿದೆ. ನಾವು ಮಾಡಿದ ರೀತಿಯಲ್ಲೇ ನಡೆಯುವ ಕಾರ್ಯಗಳ ನಿಯಂತ್ರಂಣ ಮಾಡಲಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಹೇಳಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು AI (Artificial Intelligence) ಮೂಲಕ ಉಂಟಾಗಬಹುದಾದ ಹಾಗೂ ಉಂಟಾದ ಸಂಭಾವ್ಯ ಹಾನಿಯಿಂದ ಜನರನ್ನು ರಕ್ಷಿಸಲು ಸರ್ಕಾರವು ನಿಯಮಗಳನ್ನು ಜಾರಿಗೆ ತರಲಿದೆ ಎಂದು ಘೋಷಿಸಿದ್ದಾರೆ. ಯಾವುದೇ ಹೊಸದಾದ ತಂತ್ರಜ್ಞಾನವನ್ನು ನಿಯಂತ್ರಿಸುವ ರೀತಿಯಲ್ಲಿಯೇ ಕೇಂದ್ರವು AI (Artificial Intelligence)  ನಿಯಂತ್ರಿಸುತ್ತದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದ್ದಾರೆ .

ಅಂತರ್ಜಾಲದಲ್ಲಿ ಹೆಚ್ಚುತ್ತಿರುವ ಅಪರಾಧದ ಬಗ್ಗೆ ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದರು.   ಭಾರತದಲ್ಲಿ ಸುಮಾರು 85 ಕೋಟಿ ಭಾರತೀಯರು ಪ್ರಸ್ತುತ ಇಂಟರ್ನೆಟ್ ಬಳಸುತ್ತಿದ್ದಾರೆ, 2025 ರ ವೇಳೆಗೆ ಈ ಸಂಖ್ಯೆ 120 ಕೋಟಿಗೆ ಏರುವ ನಿರೀಕ್ಷೆಯಿದೆ. ಇದೇ ವೇಳೆ  AI (Artificial Intelligence) ತಂತ್ರಜ್ಞಾನವೂ ವೇಗವಾಗಿ ಬೆಳೆಯುತ್ತಿದೆ.

AI (Artificial Intelligence) ತಂತ್ರಜ್ಞಾನದ ಬಗ್ಗೆ  ಓಪನ್‌ಎಐ  ಸಿಇಒ ಸ್ಯಾಮ್ ಆಲ್ಟ್‌ಮನ್  ಜೊತೆ  ನಡೆದ ಸಂವಾದದಲ್ಲಿ , ಈ ತಂತ್ರಜ್ಞಾನ ಹೆಚ್ಚು ಬಳಕೆಗೊಂಡರೆ ಕೆಲವು ಉದ್ಯೋಗಗಳು ಬಳಕೆಯಲ್ಲಿಲ್ಲದ ಸಾಧ್ಯತೆಯನ್ನು ಅವರು ಒಪ್ಪಿಕೊಂಡರು. ಆದರೆ ಇದೇ ವೇಳೆ  ಹೊಸ ಉದ್ಯೋಗಾವಕಾಶಗಳ ಹೊರಹೊಮ್ಮುವಿಕೆ ಸಾಧ್ಯವಿದೆ. ಹೊಸ ತಂತ್ರಜ್ಞಾನಗಳು ತಳಮಟ್ಟದವರೆಗೆ ತಲುಪಲಿದೆ ಎಂದೂ ಅವರು ಹೇಳಿದರು. AI (Artificial Intelligence)  ಸಂಪೂರ್ಣವಾಗಿ ಬದಲಿಸುವ ಬದಲು ಮಾನವ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಾಧನವಾಗಿ ಗ್ರಹಿಸಬೇಕು ಎಂದು ಆಲ್ಟ್‌ಮ್ಯಾನ್ ಪ್ರತಿಪಾದಿಸಿದರು. ದೇಶದಲ್ಲಿ AI (Artificial Intelligence) ಹೆಚ್ಚಿಸಲು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ನೀಡುವುದಾಗಿ ಆಲ್ಟ್‌ಮ್ಯಾನ್ ಘೋಷಿಸಿದರು.

ಭಾರತದ ಬಲಿಷ್ಠ AI (Artificial Intelligence) ಉದ್ಯಮ ಮತ್ತು ದತ್ತಾಂಶದ ದೊಡ್ಡ ಸಮೂಹವನ್ನು ನೀಡಿದರೆ,AI (Artificial Intelligence) ಆಧಾರಿತ ಉಪಯುಕ್ತತೆಗಳು ದೇಶದಲ್ಲಿ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು.ಭಾರತದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ ಈ ಕ್ಷೇತ್ರ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತಿನಹೊಳೆ ಯೋಜನೆಗೆ ಮತ್ತೆ ಚುರುಕು – ಒಂದು ವಾರದಲ್ಲಿ ಕಾಮಗಾರಿ ಆರಂಭಕ್ಕೆ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ
May 2, 2026
10:58 AM
by: ಮಿರರ್‌ ಡೆಸ್ಕ್
ಕೆಆರ್ಎಸ್ ಡ್ಯಾಂ ಎಚ್ಚರಿಕೆ- 15 ದಿನಗಳಲ್ಲಿ 8 ಅಡಿ ನೀರು ಕುಸಿತ – ಕಾವೇರಿ ಪ್ರದೇಶದಲ್ಲಿ ನೀರಿನ ಅಭಾವ ಭೀತಿ!
May 2, 2026
10:47 AM
by: ಮಿರರ್‌ ಡೆಸ್ಕ್
ತುಮಕೂರಿನಲ್ಲಿ ನವಿಲುಗಳಿಗೆ H5N1 ಸೋಂಕು ದೃಢ: 4 ಗ್ರಾಮಗಳು ಕಂಟೋನ್ಮೆಂಟ್ ವಲಯ ಘೋಷಣೆ, ಕೋಳಿ ಫಾರಂಗಳ ಮೇಲೆ ಕಣ್ಣಿಟ್ಟ ಅಧಿಕಾರಿಗಳು
May 2, 2026
10:37 AM
by: ಮಿರರ್‌ ಡೆಸ್ಕ್
ಯಾದಗಿರಿ ನೀರಿನ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ – 45 ಗ್ರಾಮಗಳಿಗೆ ಬಾಡಿಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ
May 2, 2026
10:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror