Advertisement
MIRROR FOCUS

ಗ್ರಾಮೀಣ ಭಾಗದಲ್ಲಿ ಅಂಬುಲೆನ್ಸ್ ಸೇವೆ ನೀಡುವ ಕನಸು ಹೊತ್ತ ಅಟೋ ಚಾಲಕ |

Share

ಗ್ರಾಮೀಣ ಭಾಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು. ಅದರಲ್ಲೂ ಆರೋಗ್ಯದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್‌ ಸೇವೆ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತಹದ್ದೊಂದು ಸೇವೆಯ ಕನಸನ್ನು ಅಟೋ ಚಾಲಕರೊಬ್ಬರು ಹೊತ್ತಿದ್ದಾರೆ. ಈಗ ಯುವಕರ ತಂಡ ಮನೆ ಮನೆ ಭೇಟಿ ಮಾಡಿ ಅಂಬುಲೆನ್ಸ್‌ ಯೋಜನೆಯನ್ನು ತಲಪಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಸಹಕಾರವನ್ನೂ ಕೋರುತ್ತಿದ್ದಾರೆ. ಜನವರಿ 14  ರಂದು ಲೋಕಾರ್ಪಣೆ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.

ಗ್ರಾಮೀಣ ಭಾಗದಲ್ಲಿ ಯಾವತ್ತೂ ಆರೋಗ್ಯದ ಸಮಸ್ಯೆಯಾದರೆ ಸಂಕಷ್ಟವೇ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಸೇತುವೆ, ಕಾಲುಸಂಕಗಳ ಸಮಸ್ಯೆ. ಇದೆಲ್ಲದರ ನಡುವೆ ಸೂಕ್ತ ರೀತಿಯಲ್ಲಿ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಸವಾಲು. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಯಾವತ್ತೂ ಸಂಕಷ್ಟ. ಇಂತಹದ್ದರ ನಡುವೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಟೋ ಚಾಲಕ ಚಂದ್ರಶೇಖರ ಕಡೋಡಿ ಹಾಗೂ ಅವರ  ಜೊತೆಗಿನ ಸಮಾನ ಮನಸ್ಕ ಯುವಕರ ತಂಡ ಇದೀಗ ಅಂಬುಲೆನ್ಸ್‌ ಸೇವೆ ನೀಡುವ ಕನಸು ಹೊತ್ತಿದ್ದಾರೆ. ಅವರು ಅಂಬುಲೆನ್ಸ್‌ ಸೇವೆ ನೀಡಬೇಕು ಎಂದು ಸಂಕಲ್ಪ ಮಾಡಲೂ ಕಾರಣ ಇದೆ. ಸ್ವತ: ಗ್ರಾಮೀಣ ಭಾಗದಲ್ಲಿರುವ ಚಂದ್ರಶೇಖರ್‌ ಅವರು ಅನುಭವಿಸಿದ ಸಮಸ್ಯೆಯೇ ಅಂಬುಲೆನ್ಸ್‌ ಸೇವೆ ಸಮಾಜಕ್ಕೆ ನೀಡಬೇಕು ಎಂಬ ಕನಸು ಕಾಣಲು ಸಾಧ್ಯವಾಯಿತು. ಅದಕ್ಕೆ ಯುವಕರ ಸಹಕಾರ ಲಭ್ಯವಾಗಲೂ ಕಾರಣವಾಯಿತು.

ಚಂದ್ರಶೇಖರ್‌ ಅವರ ತಂದೆ ಕೆಲಸಕ್ಕೆ ಹೋಗಿದ್ದ ಕಡೆಯಲ್ಲಿ  ಆರೋಗ್ಯ ಸಮಸ್ಯೆಗೆ ಒಳಗಾದಾಗ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಪರದಾಟ ನಡೆಸಿದರು. ಅಂದೇ ಸಮಾಜಕ್ಕೆ ಅಂಬುಲೆನ್ಸ್‌ ಸೇವೆ ನೀಡಬೇಕು ಎಂದು ನಿರ್ಧರಿಸಿದ್ದರು. ಈಚೆಗೆ ಕೊರೋನಾ ಸಮಯದಲ್ಲೂ ಅಂತಹದ್ದೇ ಅನುಭವಗಳು ಸಾಕಷ್ಟ ಆಗಿದ್ದವು. ಈ ಸಂದರ್ಭ ತನ್ನ ಅಟೋವನ್ನೇ ಕೊರೋನಾ ಪೀಡಿತರ ಸೇವೆಗಾಗಿ ಉಪಯೋಗಿದಿದ್ದರು. ಆ ಬಳಿಕ ಅಂಬುಲೆನ್ಸ್‌ ಸೇವೆಗಾಗಿ ಯೋಚನೆ ಮಾಡಿ ಸುಮಾರು  7  ಜನರ ತಂಡ ಮಾಡಿ ಟ್ರಸ್ಟ್‌ ರಚನೆ ಮಾಡಿ ಊರ ಹಾಗೂ ಪರವೂರ ದಾನಿಗಳಿಂದ ಹಣ ಸಂಗ್ರಹ ಮಾಡಿ ಅಂಬುಲೆನ್ಸ್‌ ಖರೀದಿಗೆ ಮುಂದಾಗಿದ್ದಾರೆ. ಜ.14  ರಂದು ಅಂಬುಲೆನ್ಸ್‌ ಖರೀದಿ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ. ಈ ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಂಗ್ರಹ ಮಾಡುತ್ತಿದ್ದಾರೆ. 7 ಗ್ರಾಮಗಳನ್ನೊಳಗೊಂಡು ಈ ಯೋಜನೆ ಹಮ್ಮಿಕೊಂಡಿದ್ದಾರೆ.

ಹೀಗಾಗಿ ಅಂಬುಲೆನ್ಸ್‌ ಸೇವೆಗೆ ಈಗ ಎಲ್ಲರ ಸಹಾಯ ಅಗತ್ಯವಿದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಆರೋಗ್ಯ ಸೇವೆಗೆ ಇಂತಹ ಅಂಬುಲೆನ್ಸ್‌ ಸೇವೆಗಳೂ ಕಾರಣವಾಗುತ್ತದೆ. ಚಂದ್ರಶೇಖರ್‌ ಅವರ ಸಂಪರ್ಕ ಹೀಗಿದೆ….9480199711

ಟ್ರಸ್ಟ್‌ ರಚನೆ ಮಾಡಿ ಅಂಬುಲೆನ್ಸ್‌ ಸೇವೆಗೆ ಜನರ ಮುಂದೆ ಹೋಗಿದ್ದೇವೆ. ಈಗಾಗಲೇ ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಕನಿಷ್ಟ ಒಂದು ದಿನದ ಸಂಬಳವನ್ನೂ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ.
ಪುನೀತ್‌ ಗುಡ್ಡೆಮನೆ, ಕೋಶಾಧಿಕಾರಿ , ಅಮರ ಚಾರಿಟೇಬಲ್‌ ಟ್ರಸ್ಟ್‌ , ಗುತ್ತಿಗಾರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

1 hour ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

12 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

17 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

18 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

20 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

20 hours ago