ಮಂಗಳೂರಿನಲ್ಲಿ ಅಡಿಕೆ ಕುರಿತ ಸಮಗ್ರ ಸಂಶೋಧನಾ ಕೃತಿ ‘ARECA NUT’ ಬಿಡುಗಡೆ

February 17, 2026
2:54 PM
ಎನ್‌ಐಟಿ ಕರ್ನಾಟಕದ ಡಾ. ಪ್ರಸನ್ನ ಬೇಳೂರು ರಚಿಸಿದ ಅಡಿಕೆಯ ಇತಿಹಾಸ, ರಾಸಾಯನಿಕ ಸಂಯೋಜನೆ ಮತ್ತು ಆರೋಗ್ಯ ಪರಿಣಾಮಗಳ ಕುರಿತು ಸಂಶೋಧನಾ ಕೃತಿ CAMPCO ವತಿಯಿಂದ ಮಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.

ಅಡಿಕೆಯ ಇತಿಹಾಸ, ರಾಸಾಯನಿಕ ಸಂಯೋಜನೆ ಮತ್ತು ಆರೋಗ್ಯ ಸಂಬಂಧಿತ ಅಂಶಗಳನ್ನು ಒಳಗೊಂಡ ಮಹತ್ವದ ಸಂಶೋಧನಾ ಕೃತಿ ARECA NUT: History, Constituents, Cancer & Beyond ನ ಬಿಡುಗಡೆ ಸಮಾರಂಭವನ್ನು ಅಡಿಕೆ ಬೆಳೆಗಾರರ ಪ್ರಮುಖ ಸಂಸ್ಥೆಯಾದ ಕ್ಯಾಂಪ್ಕೋ (CAMPCO) ಆಯೋಜಿಸಿದೆ.

Advertisement

ಎನ್‌.ಐ.ಟಿ. ಕರ್ನಾಟಕ (NITK) ಸುರತ್ಕಲ್‌ನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಪ್ರಸನ್ನ ಬೇಳೂರು ಅವರು ಈ ಕೃತಿಯನ್ನು ರಚಿಸಿದ್ದು, ಸಮಾರಂಭವು ಫೆಬ್ರವರಿ 18, 2026 ಬುಧವಾರ ಸಂಜೆ 4 ಗಂಟೆಗೆ ಮಂಗಳೂರಿನ ಮಿಷನ್ ಸ್ಟ್ರೀಟ್‌ನಲ್ಲಿರುವ ವಾರಣಾಸಿ ಟವರ್ಸ್‌ನ ಕ್ಯಾಂಪ್ಕೋ ಪ್ರಧಾನ ಕಚೇರಿಯ 4ನೇ ಮಹಡಿಯಲ್ಲಿ ನಡೆಯಲಿದೆ.

ಈ ಕೃತಿ ಅಡಿಕೆಯ ಇತಿಹಾಸದಿಂದ ಹಿಡಿದು ಅದರ ವೈಜ್ಞಾನಿಕ ಮತ್ತು ಆರೋಗ್ಯ ಸಂಬಂಧಿತ ಅಂಶಗಳವರೆಗೆ ಸಮಗ್ರವಾಗಿ ವಿಶ್ಲೇಷಿಸುತ್ತದೆ. ಏಷ್ಯಾದ ಸಂಸ್ಕೃತಿಯಲ್ಲಿ ಅಡಿಕೆ ಮಹತ್ವದ ಪಾತ್ರ ವಹಿಸಿದೆ.  ಈ ಇತಿಹಾಸದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಜೊತೆಗೆ ಅಡಿಕೆಯ ರಾಸಾಯನಿಕ ಸಂಯೋಜನೆ ಮತ್ತು ಪ್ರಾಚೀನ ಔಷಧ ಪದ್ಧತಿಗಳಲ್ಲಿ ಅದರ ಬಳಕೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿವರಿಸಲಾಗಿದೆ.  ಅಡಿಕೆಗೆ ‘ಕ್ಯಾನ್ಸರ್ ಕಾರಕ’ ಎಂಬ ಹಣೆಪಟ್ಟಿ ಇರುವ ಹಿನ್ನೆಲೆಯಲ್ಲಿ ಅದರ ಆರೋಗ್ಯ ಪರಿಣಾಮಗಳ ಬಗ್ಗೆ ಚರ್ಚಿಸುವುದರ ಜೊತೆಗೆ, ಆಹಾರ ಉದ್ಯಮದಲ್ಲಿ ಅಡಿಕೆ ಬಳಕೆಯ ಸಾಧ್ಯತೆಗಳನ್ನೂ ಈ ಕೃತಿ ವಿಶ್ಲೇಷಿಸುತ್ತದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎನ್‌.ಐ.ಟಿ.ಕೆ ಸುರತ್ಕಲ್ ನಿರ್ದೇಶಕರಾದ ಪ್ರೊ. ಬಿ. ರವಿ, ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷರಾದ ಎಸ್‌.ಆರ್‌. ಸತೀಶ್ಚಂದ್ರ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ ಮತ್ತು ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ವಿಘ್ನೇಶ್ವರ ವರ್ಮುಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

CAMPCO will host the release of the research book “ARECA NUT: History, Constituents, Cancer & Beyond” by NITK Surathkal Professor Dr. Prasanna Belur on February 18, 2026, in Mangaluru. The book explores arecanut’s history, chemical composition, health impacts, and potential industrial applications. Several dignitaries including NITK Director Prof. B. Ravi and CAMPCO President S.R. Satishchandra will attend the event.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕಾವೇರಿ ತೀರ ಅಪಾಯ ಎಚ್ಚರಿಕೆ: ಬಲಮುರಿ-ಎಡಮುರಿ ಪ್ರವಾಸಕ್ಕೆ ತಾತ್ಕಾಲಿಕ ನಿಷೇಧ
April 20, 2026
8:08 AM
by: ಮಿರರ್‌ ಡೆಸ್ಕ್
ರಾಜ್ಯದ ಒಂದೆರಡು ಸ್ಥಳಗಳಲ್ಲಿ ಮಳೆ – ಐದು ದಿನ ಬಿಸಿ ಹವೆಯ ಮುನ್ಸೂಚನೆ -ದೇಶದಾದ್ಯಂತ ತಾಪಮಾನ ಏರಿಕೆ
April 20, 2026
7:51 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಸಿಡಿಲು ಮಿಂಚಿನ ಆರ್ಭಟ – 14 ವರ್ಷಗಳಲ್ಲಿ 1,026 ಸಾವು | ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
April 19, 2026
11:26 PM
by: ದ ರೂರಲ್ ಮಿರರ್.ಕಾಂ
ರಕ್ಷಾ ಸ್ವರ್ಣಪ್ರಾಶನ | ಮಕ್ಕಳ ರೋಗ ನಿರೋಧಕ ಶಕ್ತಿಗೆ ವಿಶೇಷ ಔಷಧಿ
April 19, 2026
10:56 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror